Don't Miss!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಟಿವಿ' ನಿರೂಪಕ ಚಂದನ್ ಶರ್ಮಾ 'ಹೀರೋ' ಆಗಿರೋ ಸಿನಿಮಾ ಯಾವ್ದು?
ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್...ಹೀಗೆ ಕಿರುತೆರೆ ಇಂದ ಬೆಳ್ಳಿತೆರೆಗೆ ಜಿಗಿದು, ಸ್ಯಾಂಡಲ್ ವುಡ್ ನಲ್ಲಿ ಅಪ್ರತಿಮ ಸಾಧನೆ ಮಾಡಿರುವ ಪ್ರತಿಭೆಗಳ ಹೆಸರನ್ನು ಹೇಳುತ್ತಾ ಹೋದರೆ ಪಟ್ಟಿ ಉದ್ದ ಬೆಳೆಯುತ್ತೆ.
ಈಗ ಇದೇ ಪಟ್ಟಿಗೆ ಹೊಸ ಸೇರ್ಪಡೆ ಆಗುತ್ತಿರುವುದು 'ಬಿಟಿವಿ' ವಾಹಿನಿಯ ನಿರೂಪಕ ಚಂದನ್ ಶರ್ಮಾ. [ಇಡೀ ದೇಶ ಕೇಳುತ್ತಿದೆ, ಬಿಟಿವಿ ನಿರೂಪಕ ಚಂದನ್ ಶರ್ಮಾ ಎಲ್ಲಿ?]
ನಂಬಿದ್ರೆ ನಂಬಿ, ನ್ಯೂಸ್ ಆಂಕರ್ ಚಂದನ್ ಶರ್ಮಾ ಸದ್ಯದಲ್ಲೇ 'ಹೀರೋ' ಆಗಿ ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಲಿದ್ದಾರೆ.!
ಕೆಲ ದಿನ 'ಬಿಟಿವಿ' ವಾಹಿನಿಯಿಂದ ಕಾಣೆ ಆಗಿದ್ದು ನೆನಪಿದ್ಯಾ?
ಕಳೆದ ತಿಂಗಳಲ್ಲಿ ಕೆಲ ದಿನ 'ಬಿಟಿವಿ' ವಾಹಿನಿಯ ಪರದೆ ಮೇಲೆ ಚಂದನ್ ಶರ್ಮಾ ಕಾಣಿಸಿಕೊಳ್ಳುತ್ತಿರಲಿಲ್ಲ. ಕಾರಣ - ದೀರ್ಘ ರಜೆ. ಅಸಲಿಗೆ ಚಂದನ್ ಶರ್ಮಾ ದೀರ್ಘ ರಜೆ ಹಾಕಿದ್ದು 'ಸಿನಿಮಾ'ಗಾಗಿ.
ಯಾವುದು 'ಆ' ಸಿನಿಮಾ?
'ಧ್ವನಿ' ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಂದನ್ ಶರ್ಮಾ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. ಈಗಾಗಲೇ 'ಧ್ವನಿ' ಚಿತ್ರದ ಶೂಟಿಂಗ್ ಮುಗಿದಿದೆ.
'ಧ್ವನಿ' ಒಪ್ಪಲು ಕಾರಣ?
'ಧ್ವನಿ' ಚಿತ್ರಕಥೆಯಲ್ಲಿದ್ದ ಆಳ, ಭಾವ ತೀವ್ರತೆ ನೋಡಿ ಗ್ರೀನ್ ಸಿಗ್ನಲ್ ಕೊಟ್ಟರಂತೆ ಚಂದನ್ ಶರ್ಮಾ.
'ಧ್ವನಿ' ಕುರಿತು...
ಚಂದನ್ ಶರ್ಮಾ ಪ್ರಕಾರ, ತೀರಾ ಅಪರೂಪವೆನಿಸುವ, ಸಾಧಾರಣವಲ್ಲದ, ಅದ್ಭುತ ಕಥಾಹಂದರ ಹೊಂದಿರುವ ಚಿತ್ರ 'ಧ್ವನಿ'. ಅಷ್ಟು ಬಿಟ್ಟರೆ, 'ಧ್ವನಿ' ತಾರಾಬಳಗದಲ್ಲಿ ಯಾರ್ಯಾರು ಇರಲಿದ್ದಾರೆ, 'ಧ್ವನಿ' ನಿರ್ದೇಶಕರು ಯಾರು ಎಂಬ ಗುಟ್ಟನ್ನ ಚಂದನ್ ಶರ್ಮಾ ಬಿಟ್ಟುಕೊಟ್ಟಿಲ್ಲ.
ಪತ್ರಿಕೋದ್ಯಮದಿಂದ ದೂರ?
ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ ಎಂದ ಮಾತ್ರಕ್ಕೆ, ಪತ್ರಿಕೋದ್ಯಮದಿಂದ ಚಂದನ್ ಶರ್ಮಾ ದೂರ ಉಳಿಯುತ್ತಾರೆ ಅಂತಲ್ಲ. ಸಿನಿಮಾ ನಂತರ ಕೂಡ ಪತ್ರಿಕೋದ್ಯಮದಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಚಂದನ್ ಶರ್ಮಾ.
ನಟನೆ ಹೊಸದಲ್ಲ
ಚಂದನ್ ಶರ್ಮಾ ರವರಿಗೆ ನಟನೆ ಹೊಸದಲ್ಲ. ಟಿ.ಎನ್.ಸೀತಾರಾಂ ನಿರ್ದೇಶನದ 'ಮಹಾ ಪರ್ವ' ಧಾರಾವಾಹಿಯ ವಿದ್ಯಾಧರ ಸಿದ್ದಾರ್ಥ ಪಾತ್ರಧಾರಿ ಇದೇ ಚಂದನ್ ಶರ್ಮಾ.