Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಯ್ ಪ್ರಸಾದ್ ಔಟ್ ಆದ್ಮೇಲೆ 'ದೋಸೆ' ಸವಿಯಲು ಬಂದ ರಮ್ಯಾ!
ಹೇಳಿಕೇಳಿ ಇದು ದೋಸೆ ಮ್ಯಾಟ್ರು. 'ನೀರ್ ದೋಸೆ' ಆಗಲಿ...'ಬೆಣ್ಣೆ ದೋಸೆ' ಆಗಲಿ...ಯಾರ್ ಮನೆ ದೋಸೆ ಆದರೂ ಅದರಲ್ಲಿ ತೂತು ಇರಲೇಬೇಕು.! ಇದು ಕಾಕತಾಳೀಯವೋ, ಇಲ್ಲ ಹಣೆಬರಹವೋ...ಚೆನ್ನಾಗಿ ಹಿಟ್ ರುಬ್ಬಿ ದೋಸೆ ಹುಯ್ಯುವುದಕ್ಕೆ ಹೋದಾಗೆಲ್ಲಾ ನಿರ್ದೇಶಕ ವಿಜಯ್ ಪ್ರಸಾದ್ ಕೈಸುಟ್ಟುಕೊಳ್ಳುವುದು ಮಾತ್ರ ತಪ್ಪಿಲ್ಲ.!
'ನೀರ್ ದೋಸೆ' ಸಿನಿಮಾದಿಂದ ನಟಿ ರಮ್ಯಾ ಹೊರ ನಡೆದಿದ್ದರು. ಈಗ ಅದೇ 'ನೀರ್ ದೋಸೆ' ನಿರ್ದೇಶಕ ವಿಜಯ್ ಪ್ರಸಾದ್ 'ಬೆಣ್ಣೆ ದೋಸೆ' ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ.['ಬೆಣ್ಣೆ ದೋಸೆ' ಸೆಟ್ ನಲ್ಲಿ ರಮ್ಯಾ ಹುಟ್ಟುಹಬ್ಬ ಸಂಭ್ರಮ]
ಹೌದು, ನಮ್ಮ ನಂಬಿಕೆ ಸುಳ್ಳಾಗಿದೆ. ವಿಜಯ್ ಪ್ರಸಾದ್ ಆಕ್ಷನ್ ಕಟ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಾಣಿಸಿಕೊಂಡಿಲ್ಲ.! 'ನೀರ್ ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೋಹಕ ತಾರೆ ರಮ್ಯಾ 'ಬೆಣ್ಣೆ ದೋಸೆ' ಸವಿದಿಲ್ಲ.
'ಬೆಂಗ್ಳೂರ್ ಬೆಣ್ಣೆ ದೋಸೆ' ಅನ್ನುವ ವಿಭಿನ್ನ ಕಾನ್ಸೆಪ್ಟ್ ರೆಡಿ ಮಾಡಿ, ಕಾರ್ಯಕ್ರಮದ ನಿರ್ದೇಶಕರಾಗಿದ್ದ ವಿಜಯ್ ಪ್ರಸಾದ್, ರೆಬೆಲ್ ಸ್ಟಾರ್ ಅಂಬರೀಶ್, ಮಾಲಾಶ್ರೀ, ರಚಿತಾ ರಾಮ್, ಹುಚ್ಚ ವೆಂಕಟ್ ಸ್ಪೆಷಲ್ ಸೇರಿದಂತೆ ಹಲವು ಸಂಚಿಕೆಗಳನ್ನ ನೀಡಿದ್ದರು.
ಈ ವಾರ ಕೂಡ Obvious ಆಗಿ ಅವರದ್ದೇ ನಿರ್ದೇಶನದಲ್ಲಿ 'ರಮ್ಯಾ ಹುಟ್ಟುಹಬ್ಬ ಸ್ಪೆಷಲ್ ಸಂಚಿಕೆ' ಕೂಡ ರೆಡಿಯಾಗಿದೆ ಅಂತ ಭಾವಿಸಿದ್ವಿ. ಸುವರ್ಣ ವಾಹಿನಿ ಮೂಲಗಳು ಸ್ಪಷ್ಟಪಡಿಸಿರುವ ಪ್ರಕಾರ, ರಮ್ಯಾ ರವರ ಸಂಚಿಕೆಯನ್ನ ವಿಜಯ್ ಪ್ರಸಾದ್ ನಿರ್ದೇಶನ ಮಾಡಿಲ್ಲ. ['ನೀರ್ ದೋಸೆ' ವಿಜಯ್ ಪ್ರಸಾದ್ ಜೊತೆ ರಮ್ಯಾ 'ಬೆಣ್ಣೆ ದೋಸೆ'.!]
ರಮ್ಯಾ ಸಂಚಿಕೆ ಶೂಟ್ ಆಗುವ ಮುನ್ನವೇ 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ತಮ್ಮ ಬೇಸರವನ್ನ ಹೊರಹಾಕಿದ್ದಾರೆ.
'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಮ್ಯಾ ಮೇಡಂ ಹಳೆಯದ್ದನ್ನೆಲ್ಲಾ ಮರೆತಿರಬಹುದು ಅಂತ ಗಾಂಧಿನಗರದ ಮಂದಿ ಭಾವಿಸಿದ್ದರು. ಆದ್ರೆ, ಎಲ್ಲರ ಊಹೆ ಉಲ್ಟಾ ಆಗಿದೆ.
ನಿರ್ದೇಶಕ ವಿಜಯ್ ಪ್ರಸಾದ್ ಬಿಟ್ಟುಹೋದ ಮೇಲೆ 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮಕ್ಕೆ ಹೊಸ ರೂಪ ನೀಡಲಾಗಿದೆ. ಆ ಹೊಸ ರೂಪದ ಮೊದಲ ಸಂಚಿಕೆಯೇ 'ರಮ್ಯಾ ರವರ ಬರ್ತಡೆ ಸ್ಪೆಷಲ್'.
ಇದೇ ಭಾನುವಾರ ರಾತ್ರಿ 9 ಗಂಟೆಗೆ 'ಬೆಂಗ್ಳೂರ್ ಬೆಣ್ಣೆ ದೋಸೆ-ರಮ್ಯಾ ವಿಶೇಷ' ಪ್ರಸಾರವಾಗಲಿದೆ. ತಪ್ಪದೆ ವೀಕ್ಷಿಸಿ.