Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹರಹರ ಮಹಾದೇವ ವಿಶೇಷ: ಕಾರ್ತಿಕೇಯನಿಂದ ತಾರಕಾಸುರನ ಸಂಹಾರ
ಸ್ಟಾರ್ ಸುವರ್ಣ ವಾಹಿನಿಯ ಪ್ರತಿಷ್ಠಿತ ಧಾರವಾಹಿಯಾಗಿ ವೀಕ್ಷಕರ ಮನಗೆದ್ದಿರುವ 'ಹರ ಹರ ಮಹಾದೇವ' ಧಾರಾವಾಹಿಯು ಮತ್ತೊಂದು ಪ್ರಮುಖ ಘಟ್ಟವನ್ನು ತಲುಪಿದೆ.[ಹರಹರ ಮಹಾದೇವ ವಿಶೇಷ: ಕಾರ್ತಿಕೇಯನ ಜನ್ಮ ವೃತ್ತಾಂತ]
ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಈ ಹಿಂದೆ ಪಾರ್ವತಿ ಮಹಾದೇವರ ವಿವಾಹದ ನಂತರ ಸುಬ್ರಮಣ್ಯನ ಜನ್ಮ ವೃತ್ತಾಂತವನ್ನ ಕಣ್ತುಂಬಿಕೊಂಡಿದ್ದೀರಿ. ಇದೀಗ ಬಹುಮಯಖ್ಯ ಘಟ್ಟವಾದ ಕಾರ್ತೀಕೇಯನಿಂದ ತಾರಕಾಸುರನ ಸಂಹಾರ ವೃತ್ತಾಂತವನ್ನು ನೋಡುವ ಸಮಯ ಬಂದಿದೆ.[ರಕ್ತಬೀಜಾಸುರನ ಸಂಹಾರಕ್ಕೆ ಪಾರ್ವತಿಯ 'ಭದ್ರಕಾಳಿ' ಅವತಾರ]
ಕಾರ್ತೀಕೇಯನ ಜನನದ ನಂತರದಲ್ಲಿ ಅವನನ್ನು ಕೃತ್ತಿಕೇಯರು ಬೆಳಸುವುದು, ನಂಥರ ಅವನನ್ನು ತಾರಕಾಸುರನ ಸಂಹಾರಕ್ಕೆ ಸಾಕ್ಷಾತ್ ಶಿವನೆ ಅವನನ್ನು ತಯಾರು ಮಾಡುವುದು, ಹೀಗೆ ಹಲವಾರು ಸನ್ನಿವೇಷಗಳು ಈಗಾಗಲೇ ಧಾರವಾಹಿಯಲ್ಲಿ ಪ್ರಸಾರವಾಗಿವೆ. ಬಹುಮುಖ್ಯ ಘಟ್ಟವಾದ ತಾರಕಾಸುರನ ಸಂಹಾರವೂ ಇದೇ ಬುಧವಾರದ ಸಂಚಿಕೆಯಲ್ಲಿ ಪ್ರಾಸಾರವಾಗುತ್ತಿದೆ.
ಶಿವನ ಕುರಿತು ತಪಸ್ಸು ಮಾಡಿ ಶಿವನಿಂದ ಶಿವನ ಮಗನಿಂದಲೇ ತನ್ನ ಸಂಹಾರವಾಗಬೇಕೆಂಬ ವಿಚಿತ್ರ ವರವನ್ನು ಪಡೆದ ನಂತರ ತಾನು ಅಮರನೆಂಬಂತೆ ಮೆರೆದು, ಸತಿಯ ಸಾವಿಗೆ, ನಂತರದಲ್ಲಿ ಪಾರ್ವತಿಗು ಹಲವಾರು ತೊಂದರೆಗಳನ್ನು ಕೊಟ್ಟಿರುತ್ತಾನೆ. ತಾರಕಾಸುರ ಸ್ವರ್ಗವನ್ನು ಆಕ್ರಮಿಸಿ ದೇವತೆಗಳಿಗು ತೊಂದರೆ ನೀಡಿರುತ್ತಾನೆ. ಅವನ ಅಂತ್ಯಗಾಣಿಸುವ ಸಲುವಾಗೆ ಕಾರ್ತಿಕೇಯನ ಜನನವಾಗಿದೆ.
ದೇವತೆಗಳ ಸೇನಾಧಿಪತಿಯಾಗಿ ವಿಷ್ಣುವಿನಿಂದ ನೇಮಕಗೊಂಡಿರುವ ಕಾರ್ತಿಕೇಯ ತಾರಕಾಸುರನ ವ್ಯೂಹವನ್ನು ಭೇದಿಸಿ ಅವನನ್ನು ಸಂಹರಿಸುವ ರೋಚಕ ಸಂಚಿಕೆ ಇದೇ ಬುಧವಾರ ಪ್ರಸಾರವಾಗಲಿದ್ದು, ನೋಡುಗರಿಗೆ ಕಾರ್ತಿಕೇಯನ ಮಹಿಮೆ ಆನಂದವನ್ನುಂಟು ಮಾಡಲಿದೆ.
ಕಾರ್ತಿಕೇಯ ತಾರಕಾಸುರನನ್ನು ಸಂಹಾರ ಮಾಡುವ ರೋಚಕ ಸಂಚಿಕೆಯು ಇದೇ ಬುಧವಾರ [28-12-2016] ರಂದು ರಾತ್ರಿ 7.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.