Don't Miss!
- News ಜೆಡಿಎಸ್ ಭದ್ರಕೋಟೆ ಹಾಸನ ಲೋಕಸಭಾ ಕ್ಷೇತ್ರ ಪರಿಚಯ
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Finance ಲಕ್ಷ ಲಕ್ಷ ಕೋಟಿ ಇದ್ದರೂ ಇದೊಂದು ಕೊರತೆ ಈ ಶ್ರೀಮಂತನಿಗೆ ಕಾಡಿತ್ತು!
- Automobiles 28 ಲಕ್ಷದ ಬೈಕನ್ನು ಲೀಲಾಜಾಲವಾಗಿ ಓಡಿಸಿದ ಲೇಡಿ ಸೂಪರ್ಸ್ಟಾರ್: ಇಂತಹ ಗರ್ಲ್ಫ್ರೆಂಡ್ ಬೇಕೆಂದ ನೆಟ್ಟಿಗರು!
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹರಹರ ಮಹಾದೇವ 'ಶಿವರಾತ್ರಿ' ವಿಶೇಷ: 'ಗಜಮುಖ'ನಾಗಿ ವಿನಾಯಕನ ಎಂಟ್ರಿ
ಗಣೇಶನ ಆಗಮನದಿಂದ ನಳನಳಿಸುತ್ತಿರುವ ಕೈಲಾಸದಲ್ಲಿ... ಆನಂದದಿಂದ ಮಹಾದೇವನ ಬರುವಿಕೆಗಾಗಿ ಕಾಯುತ್ತಿರುವ ಪಾರ್ವತಿಗೆ ಒಂದು ಘೋರ ಸಂಕಷ್ಟ ಎದುರಾಗುತ್ತದೆ.
ಮಹಾದೇವನ ಸ್ವಾಗತಕ್ಕೆ ಪಾರ್ವತಿ ಸಿದ್ಧತೆ ಆರಂಭಿಸಿ, ಅಭ್ಯಂಜನ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿ, ಕಾವಲಿಗೆ ಗಣೇಶನನ್ನು ನಿಲ್ಲಿಸಿರುತ್ತಾಳೆ. ಹಲವಾರು ದಿನಗಳ ನಂತರ ತನ್ನ ಮನದರಸಿಯನ್ನು ಕಾಣಲು ನೇರ ಸ್ನಾನಗೃಹಕ್ಕೆ ಬರುವ ಮಹಾದೇವನ ಪರಿಚಯವಿಲ್ಲದೆ ಗಣೇಶ ಮಹಾದೇವನನ್ನು ಒಳಹೋಗದಂತೆ ತಡೆಯುತ್ತಾನೆ.[ಮಹಾ ಶಿವರಾತ್ರಿ ಹಬ್ಬ, ಸ್ಟಾರ್ ಸುವರ್ಣ ವಾಹಿನಿ ಹಾಗೂ 'ಮಹಾಯಾಗ']
ಮಹಾದೇವ ಎಷ್ಟೇ ಹೇಳಿದರೂ, ಅವನನ್ನು ತಂದೆ ಎಂದು ಒಪ್ಪದ ಗಣೇಶ ಒಳಹೋಗದಂತೆ ನಿರ್ಬಂಧ ಹೇರುತ್ತಾನೆ. ಕೋಪಗೊಳ್ಳುವ ಮಹಾದೇವ ತನ್ನ ತ್ರಿಶೂಲದಿಂದ ಗಣೇಶನ ಕುತ್ತಿಗೆಯನ್ನು ತುಂಡರಿಸುತ್ತಾನೆ. ಇದರಿಂದ ಪಾರ್ವತಿ ಅತ್ಯಂತ ದುಃಖಿತಳಾಗುತ್ತಾಳೆ.
ಪಾರ್ವತಿ ಮನವೊಲಿಸಲು ಮಹಾದೇವ ಆನೆಯೊಂದರ ಮುಖವನ್ನು ವಿನಾಯಕನ ಕುತ್ತಿಗೆಗೆ ಜೋಡಿಸಿ ಗಣೇಶನನ್ನು ಗಜಮುಖನನ್ನಾಗಿ ಮಾಡುತ್ತಾನೆ.[ಫೆಬ್ರವರಿ 13 ರಿಂದ ಕರುನಾಡ ಮನೆ ಮನೆಯಲ್ಲೂ ಗಣೇಶೋತ್ಸವ.!]
ಈ ಸನ್ನಿವೇಶವನ್ನೊಳಗೊಂಡ ಸಂಚಿಕೆ ಫೆಬ್ರವರಿ 24 ರಂದು ಶುಕ್ರವಾರ 'ಮಹಾ ಶಿವರಾತ್ರಿ' ಪ್ರಯುಕ್ತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 7.30ರಿಂದ ಪ್ರಸಾರ ಆಗಲಿದೆ.