Don't Miss!
- News ಹಿಂದೂ ಯುವತಿ ಬರ್ಬರ ಹತ್ಯೆ ಪ್ರಕರಣ; ಇದೊಂದು ಲಬ್ ಜಿಹಾದ್ ಎಂದ ಜೋಶಿ: ಸಿದ್ದರಾಮಯ್ಯ ಹೇಳಿದ್ದೇನು?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ 'ಮನ್ಮಥ ರಾಜ' ಕಾಶೀನಾಥ್
ಕನ್ನಡ ಚಿತ್ರರಂಗದ 'ಮನ್ಮಥ ರಾಜ', 'ಸುರಸುಂದರಾಂಗ', 'ಕಲಿಯುಗ ಕೃಷ್ಣ', 'ಪೋಲಿ ಕಿಟ್ಟಿ', 'ಚಪಲ ಚನ್ನಿಗರಾಯ' ಹೀಗೆ ಇವರು ಅಭಿನಯಿಸಿದ ಒಂದೊಂದು ಚಿತ್ರಗಳು ಪ್ರೇಕ್ಷಕರಿಗೆ ಒಂದೊಂದು 'ಅನುಭವ' ಕೊಟ್ಟಿತ್ತು.[ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಯುವ' ಸಾಧಕರು.! ]
ಹೆಸರು ಕಾಶೀನಾಥ್.....ಕನ್ನಡ ಚಿತ್ರರಂಗದ ಕ್ರಿಯಾತ್ಮಕ ನಿರ್ದೇಶಕ ಹಾಗೂ ರೊಮ್ಯಾಂಟಿಕ್ ನಾಯಕ. ಅದೇಷ್ಟೂ ಯುವ ಪ್ರತಿಭೆಗಳಿಗೆ ಇವರು ಗಾಡ್ ಫಾದರ್. ಸ್ಯಾಂಡಲ್ ವುಡ್ ನಲ್ಲಿ ತನ್ನ ಚಿತ್ರಗಳ ಮೂಲಕ ತನ್ನದೇ ಆದ ಪ್ರೇಕ್ಷಕ ವರ್ಗವನ್ನ ಹುಟ್ಟಿಹಾಕಿ ಹೊಸ ಇತಿಹಾಸ ಬರೆದ ಕಲಾವಿದ. ಈ ನಟ ಹಾಗೂ ನಿರ್ದೇಶಕ ಈಗ 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ ತಮ್ಮ ಯಶೋಗಾಥೆಯನ್ನ ಹೇಳಲು ಬರುತ್ತಿದ್ದಾರೆ.
'ವೀಕೆಂಡ್ ವಿತ್ ರಮೇಶ್' ಜೊತೆ ಕಾಶೀನಾಥ್
ಜೀ-ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕಾಶೀನಾಥ್ ಭಾಗವಹಿಸಿದ್ದಾರೆ. ಈಗಾಗಲೇ ಕಾಶಿನಾಥ್ ಸಾಧಕರ ಸೀಟ್ ಮೇಲೆ ಕೂತಿರುವ ಸಂಚಿಕೆಯ ಚಿತ್ರೀಕರಣ ಮುಗಿದಿದೆ.[ಪ್ರೋಮೋ ನೋಡಿ: ಸಾಧಕರ ಸೀಟ್ ಮೇಲೆ ಕೂತು ಕಣ್ಣೀರಿಟ್ಟ ರಕ್ಷಿತ್ ಶೆಟ್ಟಿ]
ಕಾಶೀನಾಥ್ ಯಶೋಗಾಥೆ
1982 ರಲ್ಲಿ 'ಅಮರ ಮಧುರ ಪ್ರೇಮ' ಚಿತ್ರದ ಮೂಲಕ ನಟನೆಗೆ ಪಾದರ್ಪಣೆ ಮಾಡಿದ್ದ ಕಾಶೀನಾಥ್ 1984 ರಲ್ಲಿ 'ಅನುಭವ' ಚಿತ್ರದ ಮೂಲಕ ನಿರ್ದೇಶಕರಾದರು. ಅಲ್ಲಿಂದ ಇಲ್ಲಿಯವರೆಗೂ ಸಾಲು ಸಾಲು ಚಿತ್ರಗಳ ಮೂಲಕ ಎಲ್ಲರನ್ನ ರಂಜಿಸುತ್ತಾ ಬಂದಿದ್ದಾರೆ. ತೆರೆಮೇಲೆ ನೋಡಿರುವ ಕಾಶಿನಾಥ್ ಅವರ ತೆರೆಹಿಂದಿನ ಕಹಾನಿ, ಕಾಲೇಜು ದಿನಗಳು, ಬಾಲ್ಯ, ಮದುವೆ ಹೀಗೆ ಅನೇಕ ಸಂಗತಿಗಳು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾಗಲಿದೆ.['ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.!]
ಫ್ಯಾಮಿಲಿ ಮತ್ತು ಸ್ನೇಹಿತರು ಭಾಗಿ
ಕಾಶೀನಾಥ್ ಅವರು ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಪಾಲ್ಗೊಂಡಿದ್ದಾರೆ. ಕಾಶೀನಾಥ್ ಅವರ ಮಗ, ಪತ್ನಿ, ನಟ ಬ್ಯಾಂಕ್ ಜನಾರ್ಧನ್, ವಿ.ಮನೋಹರ್ ಕೂಡ ಕಾಶೀನಾಥ್ ಸಾಧನೆಯನ್ನ ವೀಕೆಂಡ್ ನಲ್ಲಿ ಹಂಚಿಕೊಂಡಿದ್ದಾರೆ.
ಯಾವಾಗ ಪ್ರಸಾರ!
ಕಾಶೀನಾಥ್ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಯಾವಾಗ ಪ್ರಸಾರ ಅಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.