Don't Miss!
- News India Rain: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ, ಹಿಮಪಾತ ಸಾಧ್ಯತೆ: ಭಾರತದ ಈ ಭಾಗದಲ್ಲಿ ತಂಪೆರೆಯಲಿರುವ ವರುಣ
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಸ ನಾಯಕ ಕಿರುತೆರೆಗೆ ಕಾಲಿಡುತ್ತಾರಂತೆ!
ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮಿ' ಹಾಡಿನ ಮೂಲಕ ಚಂದನವನದಲ್ಲಿ ಕೊಂಚ ಡಿಫರೆಂಟಾಗಿ ಸುದ್ದಿಯಾಗಿದ್ದ, ನವರಸ ನಾಯಕ ಜಗ್ಗೇಶ್ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಅಂದಹಾಗೆ ಈ ಬಾರಿ ಜಗ್ಗೇಶ್ ಗಾಸಿಪ್ ಮೂಲಕ ಸುದ್ದಿಯಾಗಿಲ್ಲ ಬದಲಾಗಿ ಕಿರುತೆರೆ ಕ್ಷೇತ್ರಕ್ಕೆ ತಮ್ಮ ಎಡಗಾಲು ಇಡುತ್ತಾರೆ ಅಂತ ಇಡೀ ಗಾಂಧಿನಗರದಲ್ಲಿ ಸುದ್ದಿ.
ಇದೇನಪ್ಪಾ ಹಿರಿತೆರೆಯಲ್ಲಿ ಕೈಗೆ ತೆಗೆದುಕೊಂಡ ಯಾವ ಪ್ರಾಜೆಕ್ಟ್ ಗಳು ತಮ್ಮ ಕೈ ಹಿಡಿಯಲಿಲ್ಲ ಅಂತ ಕಿರುತೆರೆಗೆ ಕಾಲಿಡುತ್ತಿದ್ದಾರ ಎಂದು ನೀವು ಯೋಚನೆ ಮಾಡ್ತಾ ಇದ್ದೀರಾ?. ಅಥವಾ ಉಪೇಂದ್ರ ಅವರ 'ಉಪ್ಪಿ-ಟ್ಟು' ಮೂಲಕ ಬಿಟ್ಟಿ ಪ್ರಚಾರ ಪಡೆದುಕೊಂಡು ಕಿರುತೆರೆಯಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನನಾನ ಅಂತ ಕೇಳಬೇಡಿ.[ವಿಷಾದದೊಂದಿಗೆ ಫೇಸ್ ಬುಕ್ಕಿಗೆ ಜಗ್ಗೇಶ್ ಗುಡ್ ಬೈ]
ಸದ್ಯಕ್ಕೆ ಜಗ್ಗೇಶ್ ಅವರು ಕಿರುತೆರೆಗೆ ಕ್ಷೇತ್ರಕ್ಕೆ ಕಾಲಿಡ್ತಾ ಇರೋದು ಸೀರಿಯಲ್ ನಲ್ಲಿ ನಟಿಸಲು ಅಲ್ಲ ಬದಲಾಗಿ ಇನ್ನೇನು ಸದ್ಯದಲ್ಲಿ ಶುರುವಾಗಲಿರುವ ಹಾಸ್ಯ ಸೀರಿಯಲ್ ಒಂದರ ನಿರ್ಮಾಪಕರಾಗಿ.
ಆದರೆ ನವರಸ ನಾಯಕ ಜಗ್ಗೇಶ್ ಅಂದಾಗ ಸಡನ್ ಆಗಿ ಎಲ್ಲರೂ ಯೋಚನೆ ಮಾಡೋದು ಇದು ಪಕ್ಕಾ ಕಾಮಿಡಿ ಶೋ ಅಥವಾ ಕಾಮಿಡಿ ಧಾರಾವಾಹಿ ಇರಬಹುದು ಅಂತ ಅಲ್ವಾ. ಹೌದು ನಿಮ್ಮ ಊಹೆ ಸರಿಯಾಗಿಯೇ ಇದೆ.[ಕೇಸ್ ಹಾಕಿದ ಜಗ್ಗೇಶ್, ತುಟಿ ಬಿಚ್ಚದ ಉಪೇಂದ್ರ!]
ಇದೀಗ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ ಹತ್ತೂವರೆಗೆ ಪ್ರಸಾರವಾಗುವ ಕಾಮಿಡಿ ಸೀರಿಯಲ್ ಒಂದನ್ನು ಮಾಡಲು ಕಾಮಿಡಿ ನಟ ಜಗ್ಗೇಶ್ ಅವರು ಆಫರ್ ಪಡೆದುಕೊಂಡಿದ್ದಾರೆ. ಜೊತೆಗೆ ಅವರ ಹಿರಿಯ ಪುತ್ರ ಗುರುರಾಜ್ ಅವರು ಅಧಿಕೃತ ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಾರೆ ಅಂತ ಸದ್ಯದ ಸುದ್ದಿ.
ಇನ್ನೂ ಜಗ್ಗೇಶ್ ಅವರಿಗೆ ಕಿರುತೆರೆ ಕ್ಷೇತ್ರ ಅಷ್ಟೇನು ಹೊಸದಲ್ಲ ಬಿಡಿ, ಯಾಕಂದ್ರೆ ಈ ಮೊದಲು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೈಯಲ್ಲಿ ಕೋಟಿ ಹೇಳ್ಬಿಟ್ಟ್ ಹೊಡೀರಿ' ಎಂಬ ಗೇಮ್ ಶೋ ನಡೆಸಿಕೊಟ್ಟಿದ್ದರು. ಆದರೆ ನಿರ್ಮಾಪಕರಾಗಿ ಮೊದಲನೇ ಹೆಜ್ಜೆ ಇಡುತ್ತಿದ್ದಾರೆ.[ಇರ್ಲಾರ್ದೆ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇ, ಜಗ್ಗೇಶ್!]
ಹಿಂದಿ ಚಾನಲ್ ಆಂಡ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಭಾಬಿಜೀ ಘರ್ ಪರ್ ಹೈ' ಎನ್ನುವ ಹಾಸ್ಯ ಸೀರಿಯಲ್ ಕನ್ನಡಕ್ಕೆ ರಿಮೇಕ್ ಆಗಲಿದ್ದು, ಇದಕ್ಕೆ ಜಗ್ಗೇಶ್ ಅವರು ಬಂಡವಾಳ ಹಾಕುತ್ತಿದ್ದಾರೆ. ಜೊತೆಗೆ ಇದರ ನಿರ್ದೇಶನದ ಜವಾಬ್ದಾರಿಯನ್ನು ಪೃಥ್ವಿರಾಜ್ ಹೊತ್ತುಕೊಂಡಿದ್ದಾರೆ.
ಸದ್ಯದಲ್ಲೇ ಪ್ರಾರಂಭವಾಗಲಿರುವ ಈ ಧಾರಾವಾಹಿಯ ಪಾತ್ರ ವರ್ಗ ಪರಿಚಯಿಸಲು ಜಗ್ಗೇಶ್ ಆನ್ ಸ್ಕ್ರೀನ್ ಬರುತ್ತಾರೆ ಹೊರತು ನಟಿಸುವುದಿಲ್ಲವಂತೆ. ಆದರೆ ಅವರ ಪುತ್ರರಲ್ಲೊಬ್ಬರು ಕಾಣಿಸಿಕೊಳ್ಳಲಿದ್ದಾರಂತೆ.