Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುವರ್ಣ ನ್ಯೂಸ್ ಚಾನಲ್ ನಲ್ಲಿ ಬೃಹತ್ 'ಬ್ರಹ್ಮಾಂಡ'
ಈ ಬಾರಿಯೂ ಸ್ವಾಮೀಜಿಗಳು ತಮ್ಮ ಅಖಂಡ 'ಬ್ರಹ್ಮಾಂಡ'ವನ್ನು ಬಿಚ್ಚಿಡಲಿದ್ದಾರೆ. ಸನಾತನ ಧರ್ಮ, ವಾಸ್ತು, ಪೂಜಾ ವಿಧಾನಗಳು, ದೇವಸ್ಥಾನಗಳ ಬಗ್ಗೆ ಸ್ವಾಮೀಜಿಗಳು ನಿರರ್ಗಳವಾಗಿ ಮಾತನಾಡಲಿದ್ದಾರೆ. ಸೋಮವಾರದಿಂದ ಶುಕ್ರವಾರದ ತನಕ ಪ್ರತಿನಿತ್ಯ ಸಂಜೆ 6.30ಕ್ಕೆ ಬ್ರಹ್ಮಾಂಡ ಕಾರ್ಯಕ್ರಮ ಪ್ರಸಾರವಾಗಲಿದೆ.
ಈಗಾಗಲೆ ಆರಂಭವಾಗಿರುವ ಬ್ರಹ್ಮಾಂಡ ಕಾರ್ಯಕ್ರಮವನ್ನು ನೀವು ಒಮ್ಮೆ ವೀಕ್ಷಿಸಿ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಈ ಹಿಂದೆ ಇದೇ ಸ್ವಾಮೀಜಿಗಳು ಜೀ ಕನ್ನಡ ವಾಹಿನಿಯಲ್ಲಿ ಬೃಹತ್ ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಈಗ ನರೇಂದ್ರ ಬಾಬು ಶರ್ಮ ಅವರು ನಡೆಸಿಕೊಡುವ ಬ್ರಹ್ಮಾಂಡ ಕಾರ್ಯಕ್ರಮವನ್ನು ಸುವರ್ಣ ನ್ಯೂಸ್ ಚಾನಲ್ ನಲ್ಲಿ ನೇರ ಪ್ರಸಾರ ಮಾಡಲಿದೆ. ಟಿವಿ ವಾಹಿನಿಗಳ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ್ದ ನರೇಂದ್ರ ಬಾಬು ಶರ್ಮ ಹಲವಾರು ಕಾರಣಗಳಿಗೆ ವಿವಾದಕ್ಕೆ ಗುರಿಯಾಗಿದ್ದರು.
ಜೀ ಕನ್ನಡ ವಾಹಿನಿಯಿಂದ ಹೊರಬಿದ್ದಿದ್ದ ಸ್ವಾಮೀಜಿಗಳು ಇಷ್ಟು ದಿನಗಳ ಕಾಲ ತಮ್ಮ ಚಿಕ್ಕಗೊಲ್ಲರಹಟ್ಟಿಯ ಜಗನ್ಮಾತ ನಿಲಯದ ಆಶ್ರಮದಲ್ಲೇ ಜ್ಯೋತಿಷ್ಯ, ಭವಿಷ್ಯ, ಗ್ರಹಚಾರ ಫಲಗಳನ್ನು ಹೇಳುತ್ತಿದ್ದರು. ಇನ್ನೇನು ಇವರನ್ನು ಜನ ಮರೆತೆ ಬಿಟ್ಟರೇನೋ ಎಂಬಂತಂತಹ ಪರಿಸ್ಥಿತಿಯಲ್ಲಿ ಇದೀಗ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಪ್ರತ್ಯಕ್ಷವಾಗಿದ್ದಾರೆ. (ಒನ್ ಇಂಡಿಯಾ ಕನ್ನಡ)