Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುವರ್ಣ ವಾಹಿನಿಯಲ್ಲಿ 'ನೀವು ಭಲೇ ಕಿಲಾಡಿ' ಹೊಸ ಶೋ..!
ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಬೃಹತ್ ಕಂಪೆನಿಯ ಸಹಯೋಗದೊಂದಿಗೆ ಖಾಸಗಿ ಚಾನಲ್ ಸುವರ್ಣ ವಾಹಿನಿ 'ನೀವು ಭಲೇ ಕಿಲಾಡಿ' ಎಂಬ ಮತ್ತೊಂದು ಹೊಸ ರಿಯಾಲಿಟಿ ಶೋ ಒಂದನ್ನು ನಿಮ್ಮ ಮುಂದೆ ತರಲು ಮುಂದಾಗಿದೆ.
ಈಗಾಗಲೇ ಜನಪ್ರಿಯವಾಗಿರುವ 'ಓಲ್ಡ್ ಟ್ರಾವನ್ ಸೋಡಾ' ಸಂಸ್ಥೆ ಮತ್ತು ಸುವರ್ಣ ವಾಹಿನಿ ಈ ಶೋಗೆ ರೂಪುರೇಷೆ ನೀಡಿದ್ದು, ಸುಮಾರು 21 ವರ್ಷ ಮೇಲ್ಪಟ್ಟ ವಯೋಮಿತಿಯವರು ಇದರಲ್ಲಿ ಭಾಗವಹಿಸಬಹುದಾಗಿದೆ. ಒಂದು ಗಂಟೆಗೆ 1 ಲಕ್ಷ ಗೆಲ್ಲುವ ಅವಕಾಶವನ್ನು ಈ ಶೋ ನಿಮಗೆ ಕಲ್ಪಿಸುತ್ತಿದೆ.[ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ']
ಸಂದರ್ಭಕ್ಕೆ ಅನುಸಾರವಾಗಿ ಅವರವರಲ್ಲಿ ಅಡಗಿರುವ ನೈಪುಣ್ಯತೆಯನ್ನು ಪತ್ತೆ ಹಚ್ಚುವುದು ಈ ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಪ್ರತೀ ಸಂಚಿಕೆಯಲ್ಲಿ 4 ಜನ ಸ್ಪರ್ಧಿಗಳಿದ್ದು, ಒಟ್ಟು 3 ಸುತ್ತುಗಳು ಇರುತ್ತವೆ. ಆ ಸುತ್ತುಗಳಿಗೆ ವಿವಿಧ ರೀತಿಯ ಟಾಸ್ಕ್ ಗಳು ಇರುತ್ತವೆ. ಪ್ರತೀ ರೌಂಡಿಗೂ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಹಾಗೆ ಕೊನೆಯವರೆಗೂ ಯಾರು ತಮ್ಮ ಟ್ಯಾಲೆಂಟ್ ಅನ್ನು ತೋರಿಸುತ್ತಾರೋ ಅವರು 1 ಲಕ್ಷ ಗೆಲ್ಲುವ ಅವಕಾಶ ಇದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ತಿಂಗಳಲ್ಲಿ ಸುವರ್ಣ ವಾಹಿನಿಯಿಂದ ಆಡಿಶನ್ ನಡೀತಾ ಇದೆ. ಡಿಸೆಂಬರ್ 5, ಶನಿವಾರದಂದು ಮೈಸೂರಿನ ವಿಜಯನಗರ ಬಸವಭವನದಲ್ಲಿ, ಹುಬ್ಬಳ್ಳಿಯ ತೃಪ್ತಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಮತ್ತು ಡಿಸೆಂಬರ್ 6, ಭಾನುವಾರದಂದು ದಾವಣಗೆರೆಯ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ, ಮಂಗಳೂರಿನ ಹಂಪನಕಟ್ಟೆಯ ಡಾನ್ ಭಾಸ್ಕೋ ಹಾಲ್ ನಲ್ಲಿ ಹಾಗೂ ಡಿಸೆಂಬರ್ 12, ಶನಿವಾರದಂದು ಬೆಂಗಳೂರಿನ ಮಹಾರಾಣಿ ಕಾಲೇಜ್ ಹತ್ತಿರವಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಡಿಟೋರಿಯಮ್ ನಲ್ಲಿ ಬೆಳಗ್ಗೆ 10 ರಿಂದ 5 ರವರೆಗೆ ನಡೆಯಲಿದೆ.[ಮದುವೆ ಸಂಭ್ರಮದಲ್ಲಿ ಭಾಗಿಯಾದ 'ರಿಂಗ್ ರೋಡ್' ಜೋಡಿ]
ಆಸಕ್ತರು ಆಡಿಶನ್ ಗೆ ಬರುವಾಗ ತಮ್ಮ ಇತ್ತೀಚೆಗಿನ ಭಾವಚಿತ್ರ ಮತ್ತು ವಿಳಾಸದ ದಾಖಲೆಯನ್ನು ತರಲು ಸುವರ್ಣ ವಾಹಿನಿ ತಿಳಿಸಿದೆ. ಅಂದಹಾಗೆ ಈ ಕಾರ್ಯಕ್ರಮವನ್ನು 'ಪ್ರೋ ಕಬಡ್ಡಿ' ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ದಾನಿಷ್ ಅವರು ನಿರೂಪಣೆ ಮಾಡಲಿದ್ದಾರೆ.