Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೀದಿಗೆ ಬಿದ್ದ 'ಪಾಪ ಪಾಂಡು' ವಿಕ್ರಮ್ ಸೂರಿ ಸಂಸಾರ
ಇವರಿಬ್ಬರದು ಅನುರೂಪ ದಾಂಪತ್ಯ. ಕಳೆದ 28 ವರ್ಷಗಳಿಂದ ಸೂರಿ ತಮ್ಮ ಪೋಷಕರ ಜೊತೆ ಬಸವನಗುಡಿಯಲ್ಲಿ ವಾಸವಾಗಿದ್ದರು. ಇವರಿದ್ದ ಮನೆ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿತ್ತು ಎನ್ನಲಾಗಿದೆ.
"ನಮಗೆ ಯಾವುದೇ ನೋಟೀಸ್ ನೀಡದೆ ಮುಜರಾಯಿ ಇಲಾಖೆ ಏಕಾಏಕಿ ಮನೆಯನ್ನು ಧ್ವಂಸ ಮಾಡಿದೆ. ಈಗ ನಮ್ಮ ಸಂಸಾರ ಬೀದಿಪಾಲಾಗಿದೆ. ನಮಗೆ ಯಾವುದೇ ಮಾಹಿತಿ ನೀಡದೆ ಈ ರೀತಿ ಮಾಡಿರುವುದು ಯಾವ ನ್ಯಾಯ?" ಎಂದು ವಿಕ್ರಮ್ ಸೂರಿ ಹಾಗೂ ನಮಿತಾ ಮಾಧ್ಯಮಗಳ ಜೊತೆ ತಮ್ಮ ನೋವನ್ನು ತೋಡಿಕೊಂಡರು.
ಆದರೆ ಮುಜರಾಯಿ ಇಲಾಖೆ ಹೇಳುವುದೇನೆಂದರೆ, "ನ್ಯಾಯಾಲಯದ ಆದೇಶದ ಮೇರೆಗೆ ನಾವು ಶುಕ್ರವಾರ (ಅ.26) ವಿಕ್ರಮ್ ಸೂರಿ ದಂಪತಿಗಳು ವಾಸವಾಗಿದ್ದ ಮನೆಯನ್ನು ತೆರವುಗೊಳಿಸಿದ್ದೇವೆ. ಇವರು ಕಳೆದ 28 ವರ್ಷಗಳಿಂದ ಈ ಮನೆಗೆ ಯಾವುದೇ ಬಾಡಿಗೆ ಕಟ್ಟುತ್ತಿರಲಿಲ್ಲ" ಎಂದಿದೆ.
"ಈ ಮನೆಗೆ ನಾವು ತಿಂಗಳಿಗೆ ರು. 4 ಸಾವಿರ ಬಾಡಿಗೆ ಕಟ್ಟುತ್ತಿದ್ದೆವು. ನಮಗೆ ಮೊದಲೇ ನೋಟೀಸ್ ನೀಡಿದ್ದಿದ್ದರೆ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆದರೆ ಮುಜರಾಯಿ ಇಲಾಖೆ ಯಾವುದೇ ಸೂಚನೆ ನೀಡದೆ ನಮ್ಮ ಮನೆಯನ್ನು ತೆರವುಗೊಳಿಸಿರುವುದು ನಮಗೆ ತುಂಬಾ ನೋವುಂಟು ಮಾಡಿದೆ" ಎಂದಿದ್ದಾರೆ ವಿಕ್ರಮ್ ಸೂರಿ ಹಾಗೂ ನಮಿತಾ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, "ಮನೆ ತೆರವಿಗೆ ಕೋರ್ಟ್ ಆದೇಶ ನೀಡಿತ್ತು. ಆ ಮೇರೆಗೆ ನಾವು ಅತಿಕ್ರಮವಾಗಿದ್ದ ಇವರ ಮನೆಯನ್ನು ಧ್ವಂಸ ಮಾಡಿದ್ದೇವೆ. ನಾವು ಕಾನೂನು ಬದ್ಧವಾಗಿ ಮನೆಯನ್ನು ತೆರವುಗೊಳಿಸಿದ್ದೇವೆ. ಕಾನೂನು ಪ್ರಕಾರ ಏನೇನು ಕ್ರಮಕೈಗೊಳ್ಳಬೇಕೋ ಅದನ್ನು ನಾವು ಮಾಡಿದ್ದೇವೆ ಅಷ್ಟೇ" ಎಂದಿದ್ದಾರೆ.
ವಿಕ್ರಂ ಮೂಲತಃ ಕಲಾವಿದರ ಕುಟುಂಬದ ಹುಡುಗ. ಅವರ ತಂದೆ ಸಂಜಯ್ ಸೂರಿ ಪ್ರತಿಷ್ಠಿತ ಗುಬ್ಬಿ ಕಂಪನಿ ಕಲಾವಿದರಾಗಿದ್ದರು. ಪ್ರಕಾಶ್ ರೈ ಅಭಿನಯಿಸಿದ್ದ 'ಬಿಸಿರು ಕುದುರೆ' ಚಿತ್ರದಲ್ಲಿ ವಿಕ್ರಂ ಬಾಲ ಕಲಾವಿದನಾಗಿ ಅಭಿನಯಿಸಿದ್ದ. ಕೊಟ್ರೇಶಿ ಕನಸು, ಚಿನ್ನಾರಿ ಮುತ್ತ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ಇನ್ನು ವಿಕ್ರಮ್ ಅವರ ಬಾಳ ಸಂಗಾತಿ ನಮಿತಾ ಅವರೂ ಅಷ್ಟೇ ಕಿರುತೆರೆಯಲ್ಲಿ ಚಿರಪರಿಚಿತರು. ಗೋಧೂಳಿ, ಬಿದಿಗೆ ಚಂದ್ರಮ ಧಾರಾವಾಹಿಗಳ ಮೂಲಕ ಪರಿಚಿತರು. 'ಸಿಲ್ಲಿ ಲಲ್ಲಿ' ಪಾತ್ರ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈಗ ಇವರಿಬ್ಬರ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ.
ಈ ವಿವಾದಿತ ಸ್ಥಳದಲ್ಲಿ ಸಂಜಯ್ ಸೂರಿ ಸ್ಥಾಪಿಸಿದ ಸೂರ್ಯ ಕಲಾವಿದರು ಸಂಸ್ಥೆಯ ಸದಸ್ಯರು ಅನೇಕ ವರ್ಷಗಳಿಂದ ರಂಗ ತಾಲೀಮು ನಡೆಸಿಕೊಂಡು ಬಂದಿದ್ದಾರೆ. ಸೂರ್ಯ ಕಲಾವಿದರು ತಂಡ ನೃತ್ಯ ರೂಪಕಗಳನ್ನು ಪ್ರದರ್ಶಿಸುವುದರಲ್ಲಿ ಜನಪ್ರಿಯತೆ ಗಳಿಸಿದೆ. (ಏಜೆನ್ಸೀಸ್)