Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಪ್ರಕರಣ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಫೇಸ್ ಬುಕ್'ನಲ್ಲಿ ಕೀರ್ತಿ, ರೇಖಾಗೆ ಗೆಲುವಿನಾರ್ಪಣೆ ಮಾಡಿದ 'ಬಿಗ್ ಬಾಸ್' ಪ್ರಥಮ್!
'ಬಿಗ್ ಬಾಸ್ ಕನ್ನಡ 4' ವಿನ್ನರ್ ಆಗಿ ಹೊರಹೊಮ್ಮಿದ ಒಳ್ಳೆ ಹುಡುಗ ಪ್ರಥಮ್, ತಮ್ಮ ಗೆಲುವನ್ನ ವೇದಿಕೆ ಮೇಲೆ ವಿಭಿನ್ನವಾಗಿ ಆಚರಸಿಕೊಂಡಿದ್ದನ್ನ ಎಲ್ಲರೂ ನೋಡಿದ್ದೇವೆ.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]
ಇದೀಗ, ತಮ್ಮ ಗೆಲುವನ್ನ ಮತ್ತಷ್ಟು ಅರ್ಥಪೂರ್ಣವಾಗಿಸಿಕೊಂಡಿದ್ದಾರೆ. ತಮ್ಮ ಗೆಲುವಿನಲ್ಲಿ 114 ದಿನ ಜೊತೆಯಾಗಿದ್ದ ಸ್ನೇಹಿತರಿಗೆ ಈ ಗೆಲುವನ್ನ ಅರ್ಪಿಸಿದ್ದಾರೆ. ರೇಖಾ, ಕೀರ್ತಿ, ಶಾಲಿನಿ, ಮಾಳವಿಕಾ ಅವರು ನನ್ನ ಗೆಲುವಿನಲ್ಲಿ ಸಮಭಾಗಿಗಳು ಎಂದಿದ್ದಾರೆ. ಈ ಬಗ್ಗೆ 'ಬಿಗ್ ಬಾಸ್' ಗೆದ್ದ ನಂತರ, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಪ್ರಥಮ್ ಪದಗಳನ್ನು ನೀವೆ ನೋಡಿ....
ಇದು ನನ್ನ ಗೆಲುವಲ್ಲ, ಮೂವರ ಗೆಲುವು!
''ಇದು ನನ್ನ ಗೆಲುವಲ್ಲ.... ನನ್ನ ಹಾಗು ಕೀರ್ತಿ, ರೇಖಾ ಮೇಡಂ ಮೂವರ ಗೆಲುವು... ಮುಖ್ಯವಾಗಿ ಕನ್ನಡಿಗರ ಪ್ರೀತಿಯ ಗೆಲುವು....''['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]
ಮಾಳವಿಕಾ, ಶಾಲಿನಿ ನನ್ನ ಗೆಲುವಿನ ಸಮಭಾಗಿಗಳು!
''ಕೀರ್ತಿ, ರೇಖಾ, ಶಾಲಿನಿ, ಮಾಳವಿಕ ಮೇಡಂ ನನ್ನ ಗೆಲುವಿನ ಸಡಗರದಲ್ಲಿ ಸಮಭಾಗಿಗಳು.... ಗೆಲುವು ನನ್ನದಾಗಿರಬಹುದು.... ವೀಕ್ಷಕರ ಮನದಲ್ಲಿ ಸಂತಸ ಮೂಡಿಸಿದವರಲ್ಲಿ ಮನೆಯ ಎಲ್ಲರೂ ಗೆದ್ದಿದ್ದೀರಿ.....''['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]
ಬಿಗ್ ಬಾಸ್ ಸದಸ್ಯರಿಗೂ ಶುಭವಾಗಲಿ!
''ನಿಮಗೆ ಸಿಗದ ದುಡ್ಡು ನನಗೆ ಬೇಡ.... ಕನ್ನಡಿಗರ ಪ್ರೀತಿಯ ಗೆಲುವು ಕಷ್ಟದಲ್ಲಿರುವ ಎಲ್ಲರಿಗೂ ಉಪಯೋಗವಾಗಲಿ....ಹೊಸ ಭರವಸೆಯೊಂದಿಗೆ ಹೊರ ಬಂದಿದ್ದೇನೆ. ನಮ್ಮೆಲ್ಲ ಬಿಗ್ ಬಾಸ್ ಮನೆಯ ಸದಸ್ಯರಿಗೂ ಶುಭವಾಗಲಿ...''
'ಬಿಗ್ ಬಾಸ್ ಕನ್ನಡ 4' ವಿನ್ನರ್ ಪ್ರಥಮ್!
'ಬಿಗ್ ಬಾಸ್ ಕನ್ನಡ 4' ಗ್ರ್ಯಾಂಡ್ ಫಿನಾಲೆಯಲ್ಲಿ ರೇಖಾ, ಕೀರ್ತಿ ಮತ್ತು ಪ್ರಥಮ್ ಕೊನೆಯ ಹಂತಕ್ಕೆ ಪ್ರವೇಶ ಪಡೆದಿದ್ದರು. ಅಂತಿಮವಾಗಿ, ರೇಖಾ ಅವರು ಮೂರನೇ ಸ್ಥಾನಕ್ಕೆ, ಕೀರ್ತಿ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೇ, ಪ್ರಥಮ್ ಮೊದಲ ಸ್ಥಾನಗಳಿಸಿಕೊಂಡಿದ್ದರು.