Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಧಕರ ಸೀಟ್ ಮೇಲೆ ಪ್ರಾಣೇಶ್ ಆಯ್ತು: ಈಗ ಪ್ರೊ.ಕೃಷ್ಣೇಗೌಡರ ಸರದಿ.!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದ ಸಾಧಕರ ಸೀಟ್ ಮೇಲೆ ಗಂಗಾವತಿ ಪ್ರಾಣೇಶ್ ಕುಳಿತಿದ್ದಾಯ್ತು. ಈಗ ಪ್ರೊ.ಕೃಷ್ಣೇಗೌಡರ ಸರದಿ.
ವೃತ್ತಿಯಲ್ಲಿ ಉಪಾಧ್ಯಾಯ, ಪ್ರವೃತ್ತಿಯಲ್ಲಿ ಹಾಸ್ಯಗಾರರಾಗಿರುವ ಪ್ರೊ.ಕೃಷ್ಣೇಗೌಡ ರವರ ಲೈಫ್ ಸ್ಟೋರಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪ್ರಸಾರ ಆಗಲಿದೆ.
ಮಂಡ್ಯದ 'ಮಾತಿನ ಮಲ್ಲ'
ವೇದಿಕೆ ಹತ್ತಿದರೆ ಸಾಕು, ತಿಳಿಹಾಸ್ಯದ ಹೊನಲು ಹರಿಸುವ ಪ್ರೊ.ಕೃಷ್ಣೇಗೌಡ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನ ಮರಡಿ ಎಂಬ ಗ್ರಾಮದಲ್ಲಿ. ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ ಎಂ.ಎ ಪದವಿ ಪಡೆದ ಕೃಷ್ಣೇಗೌಡ, ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ, ಹಾಡುಗಾರರಾಗಿ, ಅಧ್ಯಾಪಕರಾಗಿ, ಹಾಸ್ಯಗಾರನಾಗಿ ಬೆಳೆದ ಯಶೋಗಾಥೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪ್ರಸಾರ ಆಗಲಿದೆ.
ಪಡೆದಿರುವ ಬಹುಮಾನ ಲೆಕ್ಕವಿಲ್ಲ.!
ಚಿಕ್ಕವಯಸ್ಸಿನಿಂದಲೇ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ಕೃಷ್ಣೇಗೌಡರು ಚರ್ಚಾಪಟುವಾಗಿ, ಹಾಡುಗಾರನಾಗಿ ಪಡೆದ ಬಹುಮಾನಗಳ ಸಂಖ್ಯೆ ಲೆಕ್ಕವಿಲ್ಲದಷ್ಟು.
ಕಚಗುಳಿ ಇಡುವ ಪ್ರೊ.ಕೃಷ್ಣೇಗೌಡ ಹಾಸ್ಯ
ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಹಾಸ್ಯ ವಿಷಯಗಳಲ್ಲಿ ಪ್ರೊ.ಕೃಷ್ಣೇಗೌಡ ಮಾಡಿರುವ ಭಾಷಣ ಕೂಡ ಲೆಕ್ಕವಿಲ್ಲದಷ್ಟು. 'ಶಿವರಾತ್ರಿ' ಪ್ರಯುಕ್ತ ನಡೆಯುವ 'ನಗೆ ಜಾಗರಣೆ'ಯಲ್ಲಿ ಪ್ರೊ.ಕೃಷ್ಣೇಗೌಡರ ರವರ ಹಾಸ್ಯ ಚಟಾಕಿ ಕೇಳುವುದಕ್ಕಾಗಿಯೇ ಸಾವಿರಾರು ಮಂದಿ ಜಮಾಯಿಸುತ್ತಾರೆ.
ಪ್ರಸಾರ ಯಾವಾಗ.?
'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಪ್ರೊ.ಕೃಷ್ಣೇಗೌಡ ಭಾಗವಹಿಸಿರುವ ಸಂಚಿಕೆಯ ಚಿತ್ರೀಕರಣ ಮುಗಿದಿದೆ. ಪ್ರಸಾರ ಯಾವಾಗ ಎಂಬುದರ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ.