Don't Miss!
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- News 7th Pay Commission : ಸರ್ಕಾರಕ್ಕೆ ಸಲ್ಲಿಸಲಾಗಿರುವ ಏಳನೇ ವೇತನ ಆಯೋಗದ ವರದಿಯಲ್ಲಿರುವ ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ.ರಾಜ್ ಅವರ ಕನ್ನಡದ ಬಗ್ಗೆ ಪ್ರೋ.ಕೃಷ್ಣೇಗೌಡ ಹೇಳಿದ್ದೇನು?
ಕನ್ನಡ ಭಾಷೆಗೆ ಕವಿಗಳು, ಸಾಹಿತಿಗಳು, ಲೇಖಕರು ಹೀಗೆ ಎಲ್ಲರ ಕೊಡುಗೆಯೂ ಅಪಾರ. ಇವರುಗಳಲ್ಲಿ ಅನೇಕರು ಓದಿ ಬರೆದು ವಿದ್ಯಾವಂತರಾಗಿದ್ದವರು. ಆದ್ರೆ, ಓದದೇ, ಬರೆಯದೇ ಕನ್ನಡ ಭಾಷೆಯನ್ನ ಬೆಳಸಿದವರು ಬಹಳ ಅಪರೂಪ. ಅಂತವರಲ್ಲಿ ವಟನಟ ಡಾ.ರಾಜ್ ಕುಮಾರ್ ಕೂಡ ಒಬ್ಬರು.[ಸಾಧಕರ ಸೀಟ್ ಮೇಲೆ ಪ್ರಾಣೇಶ್ ಆಯ್ತು: ಈಗ ಪ್ರೊ.ಕೃಷ್ಣೇಗೌಡರ ಸರದಿ.!]
ಡಾ.ರಾಜ್ ಕುಮಾರ್ ಅವರು ಓದಿದ್ದು ಕೇವಲ 3ನೇ ತರಗತಿ. ಆದ್ರೆ, ಅವರ ಮಾತು, ಸ್ಪಷ್ಟತೆ, ಕನ್ನಡ ಭಾಷೆ ಮೇಲೆ ಅವರು ಹೊಂದಿದ್ದ ಹಿಡಿತ ಬೇರೆ ಯಾರಿದಂಲೂ ಸಾಧ್ಯವಿಲ್ಲ. ಇದನ್ನ ಪ್ರೋ.ಕೃಷ್ಣೇಗೌಡ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಹೇಳಿದರು.[ನಿಜವಾಗಲೂ ಕನ್ನಡವನ್ನ ಉಳಿಸುತ್ತಿರುವವರು ವಿದ್ಯಾವಂತರಲ್ಲ, ಇವರು.!]
''ಅದೇಷ್ಟೋ ಕಲಾವಿದರು ಪಾತ್ರವಾಗಿ ಬಂದು ಕನ್ನಡವನ್ನ ಮಾತನಾಡುತ್ತಾರೆ. ಆದ್ರೆ, ಡಾ.ರಾಜ್ ಕುಮಾರ್...... ಅವರು ಓದಿದ್ದು ಕೇವಲ 3ನೇ ತರಗತಿ. ಆ ಪುಣ್ಯಾತ್ಮನ ಬಾಯಲ್ಲಿ ಕನ್ನಡವನ್ನ ಕೇಳ್ಬೇಕು ಅಂದ್ರೆ ಅದೊಂಥರ ಚೆಂದ....ಕನ್ನಡಕ್ಕೆ ಇಂತಾಹದೊಂದು ಸೌಂದರ್ಯವಿದೆ, ಕನ್ನಡಕ್ಕೊಂದು ಶಕ್ತಿಯಿದೆ, ಕನ್ನಡಕ್ಕೊಂದು ಲಯವಿದೆ ಎಂಬುದನ್ನ ತೋರಿಸಿಕೊಟ್ಟವರು.''- ಪ್ರೋ.ಕೃಷ್ಣೇಗೌಡ[ಪ್ರೊ.ಕೃಷ್ಣೇಗೌಡರ ಬದುಕಿನಲ್ಲಿ ಸಿಡಿಲಿನಂತೆ ಬಡಿದ ಎರಡು ದುರ್ಘಟನೆಗಳು..]
''ಕನ್ನಡವನ್ನ ನಿಜವಾಗಲೂ ಉಳಿಸುತ್ತಿರುವುದು ಅಕ್ಷರಸ್ಥರಲ್ಲ. ಕನ್ನಡವನ್ನ ಉಳಿಸಿ, ಬೆಳಸುತ್ತಿರುವುದು, ಕನ್ನಡ ಜೀವಂತವಾಗಿರಲು ಕಾರಣ ಅನಕ್ಷರಸ್ಥರೇ. ಇವರೆಲ್ಲರೂ ಕನ್ನಡವನ್ನೇ ನಂಬಿದವರು, ಕನ್ನಡವನ್ನೇ ಬೆಳಸಿದವರು ಎಂದು ನಿಜವಾದ ಕನ್ನಡ ರಕ್ಷಕರು ಯಾರು ಎಂದು ಪ್ರೋ.ಕೃಷ್ಣೇಗೌಡ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.