Don't Miss!
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- News Lok Sabha Elections 2024: ಬೆಂಗಳೂರಿನಲ್ಲಿ ಮತದಾನದ ದಿನ ಏನಿರುತ್ತೆ...ಏನಿರಲ್ಲ..?
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾಯಿ ಸಾವಿತ್ರಿಯನ್ನು ನೆನೆದು ಕಣ್ಣೀರಿಟ್ಟ ಚಂದ್ರಿಕಾ
ಈ ಶುಕ್ರವಾರ (ಮೇ 18) ಕಿಚ್ಚ ಸುದೀಪ್ ನಿರೂಪಿಸಿದ "ವಾರದ ಕಥೆ ಕಿಚ್ಚನ ಜೊತೆ" ಎಲ್ಲರನ್ನೂ ರಂಜಿಸಿತು. ಸುದೀಪ್ ಈ ಬಾರಿ ಮನೆಯ ಎಲ್ಲ ಸದಸ್ಯರಿಗೆ ತಾಯಂದಿರ ದಿನವನ್ನು ನೆನಪಿಸಿ ಎಲ್ಲರ ಅಮ್ಮಂದಿರ ಬಗ್ಗೆ ಕೇಳುತ್ತಾ ಕಣ್ಣು ಮಂಜಾಗುವಂತೆ ಮಾಡಿದರು. ಕ್ಷಣಕಾಲ ಎಲ್ಲರನ್ನೂ ಭಾವನಾತ್ಮಕವಾಗಿ ಹಿಡಿದಿಟ್ಟರು ಸುದೀಪ್.
ನಿಕಿತಾ ಅವರು ತಮ್ಮ ತಂದೆಯನ್ನು ನೆನೆದು ಕಣ್ಣೀರಿಟ್ಟರು. ಆದರೆ ಅರುಣ್ ಸಾಗರ್ ಅವರಲ್ಲೇ ನಮ್ಮ ತಂದೆಯವರನ್ನು ಕಂಡೆ ಎಂಬ ಭಾವ ಅವರ ಮಾತುಗಳಲ್ಲಿ ವ್ಯಕ್ತವಾಯಿತು. ಇದೇ ಸಂದರ್ಭದಲ್ಲಿ ಸುದೀಪ್ ಅವರು ಚಂದ್ರಿಕಾ ಅವರ ತಾಯಿ ಬಗ್ಗೆಯೂ ಕೇಳಿದರು.
ನನ್ನ ಲೈಫು ಹೀಗಾಯಿತಲ್ಲಾ ಎಂಬ ನೋವು ಅವರಿಗೆ ಇದ್ದೇ ಇದೆ. ಅಮ್ಮ ದಯವಿಟ್ಟು ನನ್ನ ಜೊತೆ ಇರಿ. ನಿನ್ನನ್ನು ನೋಡಿಕೊಳ್ಳಲು ನಾಲ್ಕು ಜನ ಮಕ್ಕಳಿದ್ದೇವೆ. ನನ್ನ ಜೊತೆ ಬಂದು ಇರಿ ಎಂದು ಕಣ್ಣೀರಿನಲ್ಲೇ ಕರೆಕೊಟ್ಟರು. ತಮ್ಮ ತಾಯಿ ಹೆಸರು ಸಾವಿತ್ರಿ ಎಂಬುದನ್ನು ಚಂದ್ರಿಕಾ ಕಾರ್ಯಕ್ರಮದಲ್ಲಿ ತಿಳಿಸಿದರು. ಸಾವಿತ್ರಿ ಅವರು ಚಂದ್ರಿಕಾ ಜೊತೆ ಇರುವಂತೆ ಅವರ ಪರವಾಗಿ ಸುದೀಪ್ ಸಹ ಭಿನ್ನವಿಸಿಕೊಂಡರು. ಕ್ಷಣಕಾಲ ಪ್ರೇಕ್ಷಕರನ್ನು ಸುದೀಪ್ ಭಾವುಕಲೋಕಕ್ಕೆ ಕರೆದೊಯ್ದರು.