Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ವೇದಿಕೆಯಲ್ಲಿ ಶಿವರಾಜ್-ಸುದೀಪ್ ಅಪೂರ್ವ ಮಿಲನ
ಸ್ಯಾಂಡಲ್ ವುಡ್ ನ ಲೆಜೆಂಡರಿ ಸ್ಟಾರ್ ಗಳಿಬ್ಬರ ಅಪೂರ್ವ ಸಂಗಮಕ್ಕೆ ಇಡೀ ಕರ್ನಾಟಕದ ಜನತೆ ನಿನ್ನೆ (ಡಿಸೆಂಬರ್ 6) ಸಾಕ್ಷಿಯಾಯಿತು.
ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಶಿವಣ್ಣ ಅವರ ಬಹುನಿರೀಕ್ಷಿತ ಚಿತ್ರ 'ಶಿವಲಿಂಗ' ಇನ್ನೇನು ಬಿಡುಗಡೆಗೆ ಸಜ್ಜಾಗಿದ್ದು, ಆ ಚಿತ್ರದ ಪ್ರಚಾರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ, ಚಿತ್ರದ ನಿರ್ದೇಶಕರಾದ ಪಿ.ವಾಸು ಮತ್ತು ನಿರ್ಮಾಪಕರಾದ ಸುರೇಶ್ ಅವರು ಬಿಗ್ ವೇದಿಕೆಗೆ ಆಗಮಿಸಿದ್ದರು.[ಸ್ಟಾರ್ ನಟರ ಅಪೂರ್ವ ಮಿಲನಕ್ಕೆ, ಸಾಕ್ಷಿಯಾಗಲಿರುವ ಬಿಗ್ ವೇದಿಕೆ.!]
ಈ ಸಂದರ್ಭದಲ್ಲಿ ಶಿವಣ್ಣ ಅವರು ತಮ್ಮ ಮನದಾಳದ ಮಾತುಗಳನ್ನು ಕಿಚ್ಚ ಸುದೀಪ್ ಅವರ ಮುಂದೆ ಬಿಚ್ಚಿಟ್ಟರು. ಜೊತೆಗೆ ಕೆಲವೊಂದು ಅಪೂರ್ವ ಸಂಗತಿಗಳನ್ನು ಬಿಗ್ ವೇದಿಕೆಯಲ್ಲಿ ಹಂಚಿಕೊಂಡರು.
ಸುದೀಪ್ ಶಿವಣ್ಣ ಅವರಿಗೆ ಏನೇನು ಕೇಳಿದ್ರು, ಅದಕ್ಕೆ ಪ್ರತಿಯಾಗಿ ಶಿವಣ್ಣ ಏನು ಉತ್ತರ ಕೊಟ್ರು ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..
ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 30 ವರ್ಷ
ಸುದೀಪ್:
ನೀವು
ಕನ್ನಡ
ಚಿತ್ರರಂಗಕ್ಕೆ
ಕಾಲಿಟ್ಟು
ಬರೋಬ್ಬರಿ
30
ವರ್ಷ
ಆಯ್ತು.
ಅದರಲ್ಲಿ
ಸುಮಾರು
100
ಕ್ಕೂ
ಹೆಚ್ಚು
ಸಿನಿಮಾ,
ಇದು
ಹೇಗೆ
ಸಾಧ್ಯ
ಆಯ್ತು?
ಶಿವಣ್ಣ
:
ನಿಜ
ಹೇಳಬೇಕು
ಅಂದ್ರೆ,
ನನಗೆ
ಮುಖ್ಯವಾಗಿ
ತುಂಬಾ
ಸಪೋರ್ಟ್
ಮಾಡ್ತಾ
ಇದ್ದದ್ದು
ಅಂದ್ರೆ,
ನನ್ನ
ಗೆಳೆಯರು.
ಯಾವಾಗಲೂ
ನನಗೆ
ಪ್ರೇರಣೆ
ಕೊಡ್ತಾ
ಇದ್ರು.
ಕಾಲೇಜು
ದಿನಗಳಿಂದಲೂ
ಅಷ್ಟೇ,
ಯಾವುದಾದ್ರೂ
ಪ್ರೋಗ್ರಾಂ
ಮಾಡೋವಾಗಲೂ
ಫ್ರೆಂಡ್ಸ್
ಹೇಳೋರು.
ಹೇ
ಶಿವಣ್ಣ
ಮಾಡ್ತಾರೆ
ಬಿಡು,
ಟೆನ್ಷನ್
ತಗೋಬೇಡ
ಅನ್ನೋರು.
ಸೋ
ನಾನು
ಡಿಸೈಡ್
ಮಾಡಿದೆ,
'ಐ
ಕೆನ್
ಡೂ'
ಅಂತ.
ಆಮೇಲೆ
ಇಂಡಸ್ಟ್ರಿಗೆ
ಬಂದಮೇಲೆ
ಸುದೀಪ್
ನಿಮ್ಮೆಲ್ಲರ
ಸಹಕಾರ
ನನ್ನನ್ನು
ಇಷ್ಟು
ಎತ್ತರಕ್ಕೆ
ಬೆಳೆಸಿದೆ.
ಶಿವಣ್ಣ ತಾತ ಆದಾಗ?
ಸುದೀಪ್: ಮಗಳ ಮದುವೆ ಆಗಿದೆ. ಇನ್ನೇನು ಸ್ವಲ್ಪ ದಿನದಲ್ಲಿ ಪಾಪು ಆಗುತ್ತೆ. ಆವಾಗ ಮಗು ಬಂದು ತಾತ ಎಲ್ಲಿ ಅಂದ್ರೆ ಏನಂತೀರಾ? ನಿಮ್ಮನ್ನು ನೋಡಿ ಮಗು ತಾತ ಅನ್ನಲ್ಲ ಶಿವಣ್ಣ ಎಂದ್ರು ಸುದೀಪ್.
ಶಿವಣ್ಣ: ಹೇ ಆವಾಗ ನನ್ನ ಮಗಳೇ ಹೇಳ್ತಾಳೆ ನಮ್ಮ ಅಪ್ಪನ್ನ ತಾತ ಅಂತ ಕರೀಬೇಡ ಅಂತ, ಅದು ಮಾತ್ರ ಗ್ಯಾರಂಟಿ ಅಂತ ಶಿವಣ್ಣ ಅಂದಾಗ ಸುದೀಪ್ ಹೇ ತಾತ ಅಂದ್ರೆ ವಾಸು ಸರ್ ತರ ಇರಬೇಕಪ್ಪಾ, ಅವರನ್ನು ನೋಡಿ ಅವರಲ್ಲಿ ತಾತ ಆಗೋ ಎಲ್ಲಾ ಲುಕ್ ಇದೆ. ಎಂದು ನಿರ್ದೇಶಕ ಪಿ.ವಾಸು ಅವರಿಗೆ ಸುದೀಪ್ ಟಾಂಗ್ ಕೊಟ್ಟರು.
ಶಿವಣ್ಣ ಅವರು ಮಗಳ ಜೊತೆ ಶಾಪಿಂಗ್ ಹೋದಾಗ
ಸುದೀಪ್ : ನಿಮ್ಮ ಮಗಳ ಫ್ರೆಂಡ್ಸ್ ಮನೆಗೆ ಬಂದು ನಿಮ್ಮನ್ನು ನೋಡಿ 'ವಾವ್.!' ಅಂದ ಘಟನೆ ಏನಾದರೂ ನಡೆದಿದೆಯಾ?
ಶಿವಣ್ಣ : ಹಾಗೇನಿಲ್ಲ, ಆದರೆ ನನ್ನ ಮಗಳು ಡಿಗ್ರಿಯಲ್ಲಿರುವಾಗ ಒಂದು ಬಾರಿ ನಾನು ಮಗಳು ಶಾಪಿಂಗ್ ಗೆ ಅಂತ ಹೊರಗಡೆ ಹೋದಾಗ, ಅಲ್ಲಿರೋರೆಲ್ಲಾ ನನ್ನನ್ನು ನೋಡಿ, ಹೇ ಶಿವಣ್ಣ ಯಾರೋ ಹುಡುಗಿ ಜೊತೆ ಬಂದಿದ್ದಾರೆ ಅಂದ್ರು. ಆಗ ನಾನು ಹೇ ಅವಳು ನನ್ನ ಮಗಳು ಅನ್ನೋವಷ್ಟರಲ್ಲಿ ನನಗೆ ಸುಸ್ತಾಗಿತ್ತು, ಅಂದ್ರು ಶಿವಣ್ಣ. ಅದಕ್ಕೆ ಸುದೀಪ್ ಅವರು ನಿಜವಾಗ್ಲೂ ನೀವು ನಿಮ್ಮ ಮಗಳ ಜೊತೆನೇ ಹೋಗಿದ್ದು ತಾನೆ, ಬೇರೆ ಹುಡುಗಿ ಜೊತೆ ಅಲ್ಲಾ ಅಲ್ವಾ, ಅಂತ ಮತ್ತೆ ಶಿವಣ್ಣ ಅವರ ಕಾಲೆಳೆದರು.
ಶಿವಣ್ಣ ಯಂಗ್ ಅಂಡ್ ಎನರ್ಜಿಟಿಕ್ ಬಾಯ್
ಸುದೀಪ್ : ನೀವು ಮನೇಲಿ ಇರುವಾಗ ಯಾವಾಗಲೂ ಸಣ್ಣ ಚಡ್ಡಿ ಹಾಕಿಕೊಂಡು ಫ್ರೀಯಾಗಿ ಓಡಾಡ್ತಾ ಇರ್ತಿರಾ, ಹಾಗೆ ಮನೆಯಲ್ಲಿ ಆ ಕಡೆ ತಿರುಗಿ ನಿಂತುಕೊಂಡು ಇದ್ದ ಸಂದರ್ಭದಲ್ಲಿ ಮನೆಗೆ ಬಂದೋರು ಯಾರಾದ್ರು ನಿಮ್ಮನ್ನು ಶಿವಣ್ಣ ಅಲ್ಲ ಅನ್ಕೊಂಡು, ಹೇ ಮಗು ಶಿವಣ್ಣ ಇದ್ದಾರಾ? ಅಂತ ಕೇಳಿದ್ದುಂಟ? ಅಂತ ಸುದೀಪ್ ಕೇಳಿದಾಗ ಶಿವಣ್ಣ ಅವರು ಇಲ್ಲ ಅಂದ್ರು, ಅದಕ್ಕೆ ಸುದೀಪ್ ಅವರು, ನಾನು ಒಂದು ಬಾರಿ ಕನ್ ಫ್ಯೂಶನ್ ಆಗಿದ್ದೆ. ಇನ್ನೇನು ಹೇ ಹುಡುಗ ಅಂತ ಕರೆಯೋವಷ್ಟರಲ್ಲಿ ನೀವು ತಿರುಗಿದ್ರಿ ಹಾಗೆ ಜಸ್ಟ್ ಮಿಸ್ ಆಯ್ತು ಅಂದ್ರು ಸುದೀಪ್. ಆಕ್ಚುವಲಿ ಗೀತಾಕ್ಕ ಕೂಡ ಅದಿಕ್ಕೆ ಜಾಸ್ತಿ ಟೆನ್ಷನ್ ಆಗೋದು ಅಂತ ಕಿಚ್ಚ ಮತ್ತೆ ಶಿವಣ್ಣ ಅವರನ್ನು ಕಿಚಾಯಿಸಿದ್ರು.
ಶಿವಣ್ಣನಿಗೂ ಒಮ್ಮೆ ಭಯ ಆಗಿತ್ತಂತೆ.
ಸುದೀಪ್ :ಸಿನಿಮಾ ಕ್ಷೇತ್ರಕ್ಕೆ ಬರೋಕೆ ಮುಂಚೆ ನೀವು ಒಬ್ಬ ದೊಡ್ಡ ಸ್ಟಾರ್ ನಟನ ಪುತ್ರ. ಒಂದು ಕಡೆ ಮಗ ಇನ್ನೊಂದು ಕಡೆ ಚೊಚ್ಚಲ ನಟನಾಗಿ ಇಂಡಸ್ಟ್ರಿಗೆ ಎಂಟ್ರಿ. ಮೊದಲನೇ ಸಲ ಕಾಲಿಟ್ಟಾಗ ಭಯ ಅನ್ನೋದು ನಿಮಗೆ ಟಚ್ ಆಯ್ತಾ?
ಶಿವಣ್ಣ: ಮೊದಲು ಕೆರಿಯರ್ ಆರಂಭ ಮಾಡುವಾಗ ಭಯ ಅನ್ನೋದು ಇದ್ದೇ ಇರುತ್ತೆ. ಗಾಂಧಿನಗರದಲ್ಲಿ ಎಲ್ಲರೂ ಹೇಗಿರ್ತಾರೆ ಅಂತ ನಿಮಗೆ ಗೊತ್ತು. ಕೆಲವರು ನೆಗೆಟಿವ್ ಫೀಲ್ ಇಟ್ಕೊಂಡ್ರೆ, ಇನ್ನು ಕೆಲವರು ಪಾಸಿಟಿವ್ ಆಗಿರ್ತಾರೆ. ಹಾಗೆ ಕೆಲವರು ಅಂದುಕೊಂಡಿರಬಹುದು. ಅಯ್ಯೋ ಇವನು ಏನ್ ಕಿಸೀತಾನೋ ನೋಡೋಣ ಅಂತ. ನಾನು ಅಪ್ಪಾಜಿಯನ್ನು ಫಾಲೋ ಮಾಡಬಾರದು ಅಂತ ನಿರ್ದರಿಸಿದ್ದೆ. ನನ್ನದೇ ಆದ ನಟನೆ ನನಗೆ ಮುಖ್ಯ ಆಗಿತ್ತು.
ಆನಂದ್ ಸಿನಿಮಾ ಶಾಟ್ ನಲ್ಲಿ ಭಯಪಟ್ಟ ಶಿವಣ್ಣ
ಶಿವಣ್ಣ : ಭಯ ಅನ್ನೋದು ಶುರುವಾಗಿದ್ದು, ಮೊದಲನೇ ಸಿನಿಮಾ 'ಆನಂದ್' ನಲ್ಲಿ ಮೊದಲನೇ ಶಾಟ್ ಮಾಡುವಾಗ. ಒಬ್ಬ ಮನುಷ್ಯನಿಗೆ ಏನೇ ಟ್ರೈನಿಂಗ್ ಇದ್ರೂನೂ, ಎಷ್ಟೇ ಗೊತ್ತಿದ್ದರೂ ಕೂಡ ಮೊದಲು ಭಯ ಅನ್ನೋದು ಇದ್ದೇ ಇದೆ. ಸೋ ಆನಂದ್ ಶೂಟಿಂಗ್ ನಲ್ಲಿ ಮೊದಲ ಶಾಟ್ ಗೆ ಭಯ ಆಯ್ತು. ಆಮೇಲೆ ಎರಡನೇ ಭಾರಿ ಭಯಪಟ್ಟಿದ್ದು ಮದುವೆ ಆದಾಗ. ಫಸ್ಟ್ ಮಗನ ರೋಲ್ ಪ್ಲೇ ಮಾಡಿದೆ. ಆಮೇಲೆ ಗಂಡನ ರೋಲ್ ಪ್ಲೇ ಮಾಡುವಾಗ ಸ್ವಲ್ಪ ಭಯಪಟ್ಟೆ.
ಶಿವಣ್ಣ ಕಣ್ಣೀರಿಟ್ಟ ಸಂದರ್ಭ
ನಾನು ನನ್ನ 50ನೇ ಸಿನಿಮಾ 'ಎ.ಕೆ.47' ಶೂಟಿಂಗ್ ನಲ್ಲಿ ಬಾಂಬೆಯಲ್ಲಿ ಬ್ಯುಸಿಯಾಗಿದ್ದೆ. ಆವಾಗ ಗೀತಾ ಫೋನ್ ಮಾಡಿ ಹೇಳಿದ್ರು ಹೆಣ್ಣು ಮಗು ಆಯ್ತು ಅಂತ ಆವಾಗ ನನಗೆ ತುಂಬಾ ದುಃಖ ಆಗಿತ್ತು. ಆ ಸಂದರ್ಭದಲ್ಲಿ ನಾನು ಅಲ್ಲಿರಬೇಕಿತ್ತು ಆದ್ರೆ ನನಗೆ ಹೋಗೋಕ್ಕಾಗಿಲ್ಲ. ಆ ಟೈಮಲ್ಲಿ ನಾನು ತುಂಬಾ ಅತ್ತುಬಿಟ್ಟೆ. 'ಮನಮೆಚ್ಚಿದ ಹುಡುಗಿ' ಸಿನಿಮಾ ಆಯ್ತು, ಆಮೇಲೆ ನನ್ನ ಬಾಳಲ್ಲಿ ಮನಮೆಚ್ಚಿದ ಮಗಳು ಎಂಟ್ರಿ ಆದ್ಲು.
ಹೆಂಡತಿಯ ಖುಷಿಯನ್ನು ತಾವು ಹಂಚಿಕೊಳ್ಳುವ ಶಿವಣ್ಣ
ಶಿವಣ್ಣ; ಗೀತಾ ನನ್ನ ಎಲ್ಲಾ ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಾಳೆ. ಅವಳು ತುಂಬಾ ಒಳ್ಳೆಯವಳು, ಅವಳು ತುಂಬಾ ಚೆನ್ನಾಗಿರಬೇಕು, ನಾನು ಅವಳನ್ನು ತುಂಬಾ ಇಷ್ಟ ಪಡುತ್ತೇನೆ, ಐ ಲವ್ ಸೋ ಮಚ್ ಹರ್', ಕಷ್ಟ ಅಂತ ಏನೇ ಇದ್ರು, ಅದು ನನಗೆ ಬರಲಿ ಸುಖ ಎಲ್ಲಾ ಅವಳಿಗೆ ಸಿಗಲಿ. ಅವಳು ನನ್ನನ್ನು ಎಲ್ಲಾ ವಿಷಯದಲ್ಲೂ ಬಗ್ಗಿಸುತ್ತಾಳೆ, ಒಳ್ಳೆ ವಿಷಯ ಅಂತಾದ್ರೆ, ನಾವು ತಲೆ ಬಾಗುತ್ತೇವೆ. ಎಂದು ತಮ್ಮ ಪ್ರೀತಿಯ ಹೆಂಡತಿಯ ಮೇಲಿರುವ ಪ್ರೀತಿ-ಗೌರವವನ್ನು ಬಿಗ್ ವೇದಿಕೆಯಲ್ಲಿ ಶಿವಣ್ಣ ಹಂಚಿಕೊಂಡರು.
ಶಿವಣ್ಣನಿಗೆ-ಗೀತಾಕ್ಕನ ಮೇಲೆ ಲವ್ ಹೇಗಾಯ್ತು?
ಮದುವೆ ಆಯ್ತು ಆದ್ರೆ ಲವ್ ಸ್ಟೋರಿ ಯಾವಾಗ ಆಯ್ತು ಅಂತ ಸುದೀಪ್ ಪ್ರಶ್ನೆಗೆ ಶಿವಣ್ಣ ಅವರು ಹೀಗಂದ್ರು, ಒಂದು ಫಂಕ್ಷನ್ ನಲ್ಲಿ ಗೀತಾ ಅವರನ್ನು ನೋಡಿದ ಶಿವಣ್ಣ ಅವರು ಅವರನ್ನು ನೋಡಿ 'ಮೆರಿ ಮೆರಿ ಮೆರಿ ಐ ಲವ್ ಯೂ' ಅಂದ್ರಂತೆ, ಅದು ಅವರಿಗೆ ಅರ್ಥ ಆದ್ರು ನೋಡಿಲ್ಲವಂತೆ. ತದನಂತರ ಮನೆಯವರು ಸೇರಿ ಮದುವೆ ಮಾಡಿದ್ರು, ಆದರೆ ಲವ್ ಅಂತ ಅಲ್ಲ, ಆದ್ರೂ ಏನೋ ಒಂಥರಾ ಫೀಲಿಂಗ್ ಇತ್ತು ಅವಳ ಮೇಲ. ಮದುವೆ ಆದ ತಕ್ಷಣ ಆಷಾಡ ಬಂತು ಅವಳು ತಾಯಿ ಮನೆಗೆ ಹೋದ್ಲು. ಸೋ ನಾವು ಜಾಸ್ತಿ ಹೊರಗಡೆ ಮೀಟ್ ಮಾಡ್ತಾ ಇದ್ವಿ ಎಂದು ಸಿಹಿ ನೆನಪುಗಳನ್ನು ಹಂಚಿಕೊಂಡರು.
ಗೀತಾ ಅವರಿಗೆ ಸಿಕ್ಕಾಪಟ್ಟೆ ಖುಷಿ ಮತ್ತು ಕೋಪ ತರೋ ವಿಷಯ
ಶೂಟಿಂಗ್ ಅಂತ ತುಂಬಾ ದೂರ ಹೋದಾಗ ಅವಳು ನನ್ನ ಮಿಸ್ ಮಾಡ್ಕೊಂಡ್ರೆ, 'ಜೀಯಾ ತೇರಿ ಜೀಯಾ ಮೇರಿ' ಅಂದ್ರೆ ಅವಳಿಗಿಷ್ಟ ಆಗುತ್ತೆ ಅದೂ ತುಂಬಾ ಇಷ್ಟ ಆಗುತ್ತೆ. ಅದೇ ಕೋಪ ಬಂದಾಗ 'ಒಂಟಿ ಒಂಟಿಯಾಗಿರೋದು' ಅಂದ್ರೆ ಸಿಕ್ಕಾಪಟ್ಟೆ ಕೋಪ ಬಂದುಬಿಡುತ್ತೆ ಎಂದು ಶಿವಣ್ಣ ನುಡಿದರು.
ಗೀತಾಕ್ಕ-ಶಿವಣ್ಣ ಒಟ್ಟಿಗೆ ಕೂತು ಸಿನಿಮಾ ನೋಡಲ್ವಂತೆ.!
ಅಂದಹಾಗೆ ಶಿವಣ್ಣ ಅವರು ಗೀತಾ ಅವರ ಜೊತೆ ಒಟ್ಟಿಗೆ ಕೂತು ಸಿನಿಮಾ ನೋಡಲ್ವಂತೆ, ಒಂದುವೇಳೆ ಒಟ್ಟಿಗೆ ಕೂತರೂ ಕೂಡ ಶಿವಣ್ಣ ಅವರ ತೋಳಲ್ಲಿ ಜಿಗುಟಿದ ಕಲೆ ಬಿದ್ದಿರುತ್ತಂತೆ. ಅದಿಕ್ಕೆ ಶಿವಣ್ಣ ಅವರು ಒಟ್ಟಿಗೆ ಸಿನಿಮಾ ನೋಡೋಕೆ ಹೋದ್ರೆ, ಅವರು ಆದಷ್ಟು ದೂರ ಕೂರ್ತಾರಂತೆ. ಆದ್ರು ಗೀತಾಕ್ಕ, ಶಿವಣ್ಣನಿಗೆ ಜಿಗುಟುತ್ತಾರೆ ಅಂದ್ರೆ ಒಂಥರಾ ಇಷ್ಟ ಅಂತೆ. ಚೆನ್ನಾಗಿದೆ ಅಲ್ವಾ.
ಡ್ರಿಂಕ್ಸ್ ಸೀಕ್ರೆಟ್ ಬಿಚ್ಚಿಟ್ಟ ಶಿವಣ್ಣ
ಶಿವಣ್ಣ ಶೂಟಿಂಗ್ ನಲ್ಲಿದ್ದಾಗ ಗೀತಾಕ್ಕ ಕಾಲ್ ಮಾಡಿ ಮಾತಾಡಿಸ್ತಾರಂತೆ, 'ಊಟ ಆಯ್ತಾ, ಚೆನ್ನಾಗಿದ್ದೀರಾ?, ಸರಿ ಮಲಗಿ ನಿದ್ದೆ ಮಾಡಿ ಅಂತಾರಂತೆ, ಅದಕ್ಕೆ ಶಿವಣ್ಣ ಇಲ್ಲ ಏನಾದ್ರೂ ಹೇಳಬೇಕಿತ್ತ, ಮಾತಾಡು ಅಂದ್ರೆ, ಇಲ್ಲ ಏನಿಲ್ಲಾ ನೀವು ಆರಾಮಾಗಿ ಮಲಗಿ ಅಂತ ಹೇಳ್ತಿದ್ರಂತೆ. ಇಲ್ಲ ಏನೋ ಆಗಿದೆ ನಿನಗೆ ಯಾಕೆ ಹೀಗೆ ಮಾತಾಡ್ತೀಯಾ ಅಂದ್ರೆ, ಎಲ್ಲಿ ನಾನು ಹೀಗೆ ಮಾತಾಡೋದು ಅಂತಿದ್ರಂತೆ. ಆವಾಗ ಶಿವಣ್ಣ ಯೋಚನೆ ಮಾಡೋರಂತೆ. ಏನಾಯ್ತಪ್ಪ ಇವಳಿಗೆ, ಬೆಳಗ್ಗೆ ಎಲ್ಲಾ ಚೆನ್ನಾಗಿ ಇತ್ತು, ಈಗೇನಾಯ್ತು ಅಂತ.
ತಮಗೆ ಗೊತ್ತಾಗದಂತೆ ಶಿವಣ್ಣ ಅವರನ್ನು ವಾಚ್ ಮಾಡ್ತಿದ್ದ ಗೀತಾಕ್ಕ
ಶಿವಣ್ಣ ಅವರಿಗೆ ಗೊತ್ತಾಗದಂತೆ ಗೀತಾಕ್ಕ ಅವರು ಶಿವಣ್ಣ ಅವರನ್ನು ವಾಚ್ ಮಾಡ್ತಿದ್ರಂತೆ, ಅಲ್ಲದೇ ಶಿವಣ್ಣ ಏನು ಮಾಡಿದ್ರೂ ಗೀತಾ ಅವರಿಗೆ ಗೊತ್ತಾಗ್ತ ಇತ್ತಂತೆ. ಹೀಗೆ ಒಂದಿನಾ ಡ್ರಿಂಕ್ಸ್ ಮಾಡಿದ್ದು ಕೂಡ ಗೀತಾ ಅವರಿಗೆ ಗೊತ್ತಾಗಿ ಗಲಾಟೆ ಮಾಡಿದ್ರಂತೆ. ಆದ್ರೆ ಅವರು ಶೂಟಿಂಗ್ ನಲ್ಲಿ ದೇವಸ್ಥಾನದಲ್ಲಿ ಕಪ್ಪು ಚಹಾ ಕುಡಿದಿದ್ದನ್ನು ಯಾರೋ ಮೂರನೇ ವ್ಯಕ್ತಿ ನೋಡಿ ಗೀತಾ ಅವರಿಗೆ ಕಂಪ್ಲೈಂಟ್ ಮಾಡಿದ್ರಂತೆ ಅದಕ್ಕೆ ಶಿವಣ್ಣ ಅವರನ್ನು ಗೀತಾಕ್ಕ ವಿಚಾರಿಸಿಕೊಂಡಾಗ ನಿಜವಾಗ್ಲೂ ಡ್ರಿಂಕ್ಸ್ ಮಾಡಿದ ವಿಷಯ ಗೊತ್ತಾಗಿ ಹೋಯಿತಂತೆ.