Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬರಲಿದೆ ಅಕ್ಕ-ತಂಗಿಯರ ಮನ ಮಿಡಿಯುವ ಕಥೆ 'ಸಿಂದೂರ'
ಕರ್ನಾಟಕದ ಜನಮನ ಗೆದ್ದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರು ಆಗಲಿದೆ. ಮಾರ್ಚ್ 20ರಿಂದ ಸೋಮವಾರದಿಂದ ರಾತ್ರಿ 8ಕ್ಕೆ 'ಸಿಂದೂರ' ಧಾರಾವಾಹಿ ಪ್ರಸಾರವಾಗಲಿದೆ. ಕನ್ನಡ ಧಾರಾವಾಹಿಗಳ ಸಾಲಿನಲ್ಲಿ 'ಸಿಂದೂರ' ವಿಶಿಷ್ಟ ಕಥಾಹಂದರವನ್ನು ಹೊಂದಿದೆಯಂತೆ.
'ಸಿಂದೂರ' ಕಥಾಹಂದರ ಏನು.?
ಅಕ್ಕ... ತಾಯಿಯ ಮತ್ತೊಂದು ಸ್ವರೂಪ. ತಂದೆಯ ಸ್ಥೈರ್ಯ ಮತ್ತು ತಾಯಿಯ ಮಮತೆ ಇರುವ ಅಕ್ಕ, ತನ್ನ ತಂಗಿಯ ಬಾಳನ್ನು ಹಸನಾಗಿಸಲು ತ್ಯಾಗದ ಪರಾಕಾಷ್ಟೆಗೆ ಮುಂದಾಗುವ ಕಥೆ 'ಸಿಂದೂರ'.[ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಾದಮಯ ಪ್ರೇಮಕಥೆ 'ತ್ರಿವೇಣಿ ಸಂಗಮ']
ಪಾತ್ರಧಾರಿಗಳು ಯಾರ್ಯಾರು.?
'ಸಿಂದೂರ' ಧಾರಾವಾಹಿಯಲ್ಲಿ ಸೌಮ್ಯಲತಾ, ಆನಂದ್ ನಾಗರ್ಕರ್, ಮುತ್ತುರಾಜ್, ಭೂಮಿಕಾ, ಚಂದನಾ, ಗೌತಮ್ ಮತ್ತು ವಿಕಾಸ್ ನಟಿಸುತ್ತಿದ್ದಾರೆ.
ಸುವರ್ಣ ಆಶಯ
ಮನುಷ್ಯನ ಸಂಬಂಧಗಳು ನಿಧಾನವಾಗಿ ಕ್ಷೀಣಿಸುತ್ತಿರುವ ಈ ಯಾಂತ್ರಿಕ ಯುಗದಲ್ಲಿ, ಒಡಗುಟ್ಟಿದವರ ಪ್ರೀತಿ ಮತ್ತು ಬಾಂಧವ್ಯವನ್ನು ತೋರಿಸುವ ಪ್ರಾಮಾಣಿಕ ಪ್ರಯತ್ನ ಇದು. ಈ ರೀತಿ 'ಸಿಂದೂರ' ಆಧುನಿಕ ಸಮಕಾಲೀನ ಕಥೆಯ ಧಾರಾವಾಹಿಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವುದು ಸ್ಟಾರ್ ಸುವರ್ಣ ವಾಹಿನಿಯ ಆಶಯ.
ಪ್ರಸಾರ ಯಾವಾಗ.?
ಅಕ್ಕ-ತಂಗಿಯರ ಮನ ಮಿಡಿಯುವ ಕಥೆ ಹೊಂದಿರುವ 'ಸಿಂದೂರ' ಮಾರ್ಚ್ 20ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಮೂಡಿಬರಲಿದೆ.