Don't Miss!
- News ರಾತ್ರೋ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಏನು ಹೇಳಿದ್ರು ಗೊತ್ತಾ?
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡೆಗೂ ಕರಾವಳಿಗರ ಕೂಗಿಗೆ ಬೆಲೆಕೊಟ್ಟು ತಲೆ ಬಾಗಿದ ಸೃಜನ್ ಲೋಕೇಶ್
ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ 'ಭೂತಾರಾಧನೆ' ಬಗ್ಗೆ 'ಮಜಾ ಟಾಕೀಸ್' ಸಂಚಿಕೆಯಲ್ಲಿ ಅಪಹಾಸ್ಯ ಮಾಡಿರುವ ಸೃಜನ್ ಲೋಕೇಶ್ ವಿರುದ್ಧ ಕರಾವಳಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿದ್ದರು. ಕೂಡಲೆ ಸೃಜನ್ ಲೋಕೇಶ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದಿದ್ದರು. ['ಮಜಾ ಟಾಕೀಸ್'ನಲ್ಲಿ ಸೃಜನ್ ಲೋಕೇಶ್ ಮಾಡಿದ ಮಹಾ ಎಡವಟ್ಟಿದು.!]
ವೀಕ್ಷಕರ ಕೂಗಿಗೆ ತಲೆಬಾಗಿರುವ ಸೃಜನ್ ಲೋಕೇಶ್ ತಮ್ಮ ಆಫೀಶಿಯಲ್ ಫೇಸ್ ಬುಕ್ ಪುಟದಲ್ಲಿ ಕ್ಷಮೆ ಕೇಳಿದ್ದಾರೆ.
ಫೇಸ್ ಬುಕ್ ನಲ್ಲಿ ಕ್ಷಮೆ ಕೇಳಿರುವ ಸೃಜನ್ ಲೋಕೇಶ್
''ಭೂತಾರಾಧನೆ' ಬಗ್ಗೆ ನಾನು ತಮಾಷೆ ಮಾಡಿದೆ ಅಂತ ಕೆಲವು ಫೇಸ್ ಬುಕ್ ಪೋಸ್ಟ್ ಗಮನಿಸಿದೆ. ನನ್ನ ಉದ್ದೇಶ ಖಂಡಿತ ಭೂತಾರಾಧನೆಯನ್ನು ಅವಮಾನಿಸೋದಾಗಲೀ, ತಮಾಷೆ ಮಾಡೋದಾಗಲಿ ಆಗಿರಲಿಲ್ಲ'' - ಸೃಜನ್ ಲೋಕೇಶ್. [ಕರಾವಳಿ ಆಚರಣೆ ಬಗ್ಗೆ ಕೊಂಕು ಮಾತನಾಡಿದ ಸೃಜನ್ ವಿರುದ್ಧ ರೊಚ್ಚಿಗೆದ್ದ ವೀಕ್ಷಕರು.!]
ನಾನೂ ದೈವಭಕ್ತ
''ನಾನು ಸಹ ಭೂತಾರಾಧನೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ದೈವಭಕ್ತ. ನನಗೆ ಅದರ ಅರಿವಿರುವುದರಿಂದಲೇ ನಾನು 'ಭೂತಾರಾಧನೆ' ಪ್ರಸ್ತಾಪಿಸಿದ್ದು'' - ಸೃಜನ್ ಲೋಕೇಶ್
ತಪ್ಪಾಗಿದ್ದರೆ ಕ್ಷಮೆ ಇರಲಿ
''ಯಾರ ಭಾವನೆಗಳಿಗೂ ಧಕ್ಕೆಯಾಗದ ಹಾಗೆ ನಿಮ್ಮನ್ನು ನಗಿಸುವ ಪ್ರಯತ್ನ ಮಾಡುತ್ತಾ ಬಂದಿದ್ದೇವೆ. ನನಗರಿವಿದ್ದೋ, ಅರಿವಿಲ್ಲದೆಯೋ ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ'' - ಸೃಜನ್ ಲೋಕೇಶ್
ಅಷ್ಟಕ್ಕೂ ವಿವಾದ ಏನು.?
ಮೊನ್ನೆ ಭಾನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಮಜಾ ಟಾಕೀಸ್' ಸಂಚಿಕೆಯಲ್ಲಿ 'ಭೂತಾರಾಧನೆ' ಬಗ್ಗೆ ಸೃಜನ್ ಲೋಕೇಶ್ ಕಾಮೆಂಟ್ ಮಾಡಿದ್ದು ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿದೆ.
ಭೂತಾರಾಧನೆ ಮತ್ತು ಕಾಲ್ ಸೆಂಟರ್
''ಈ ಕಾಲ್ ಸೆಂಟರ್ ಕೆಲಸ ಭೂತಾರಾಧನೆ ಕೆಲಸ ಇದ್ದ ಹಾಗೆ. ಕಾಲ್ ಸೆಂಟರ್ ಕೆಲಸ ಮಾಡೋದು ರಾತ್ರಿ ಹೊತ್ತು. ಭೂತಾರಾಧನೆ ಕೂಡ ಮಾಡುವುದು ರಾತ್ರಿ ಹೊತ್ತು. ನೈಟ್ ಶಿಫ್ಟ್ ಒನ್ಲಿ'' ಅಂತ ಸೃಜನ್ ಲೋಕೇಶ್ ಹೇಳಿದ್ದ ಮಾತು ತುಳುನಾಡಿಗರನ್ನ ಕೆರಳಿಸಿತ್ತು.