Don't Miss!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾತುಕತೆ ವಿನಯ್ ಜೊತೆ' ಹೊಸ ಟಾಕ್ ಶೋ
ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಬಣ್ಣದ ಬದುಕು, ಅವರ ವೈಯಕ್ತಿಕ ಜೀವನ, ದಿನಚರಿ, ಸಿನಿಮಾ ವೃತ್ತಿಯಲ್ಲಿ ಅವರು ಎದುರಿಸಿದ ಸಮಸ್ಯೆಗಳು ಸೇರಿದಂತೆ ಅವರ ಜೀವನದ ಅನೇಕ ಅಂಶಗಳ ಮೇಲೆ ಬೆಳಕು ಚೆಲ್ಲುವ ಹಲವು ಶೋ ಗಳನ್ನು ಕನ್ನಡ ವಾಹಿನಿಗಳು ಈಗಾಗಲೇ ತಂದಿವೆ. ಉದಾಹರಣೆಗೆ ಜೀ ಕನ್ನಡ ವಾಹಿನಿ ಯಲ್ಲಿ ಪ್ರಸಾರ ವಾದ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ. ಈಗ ಇಂತಹ ಸಾಲಿಗೆ ಹೊಸ ಟಾಕ್ ಶೋ ಒಂದು ಸೇರ್ಪಡೆ ಆಗಿದೆ.[ಸ್ಟಾರ್ ಸುವರ್ಣ 'ಸೂಪರ್ ಜೋಡಿ-2: ಈ ಬಾರಿ ಯಾರೆಲ್ಲ ಇದ್ದಾರೆ?]
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಟಾಕ್ ಶೋ ಒಂದು ಆರಂಭವಾಗಿದ್ದು, ಅದರ ಹೆಸರು 'ಮಾತುಕತೆ ವಿನಯ್ ಜೊತೆ'. ಈ ಕಾರ್ಯಕ್ರಮ ನಡೆಸಿಕೊಡುವ ಆ ವಿನಯ್ ಯಾರು, ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಮಾತುಕತೆ ವಿನಯ್ ಜೊತೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಮಾತುಕತೆ ವಿನಯ್ ಜೊತೆ' ಕಾರ್ಯಕ್ರಮವನ್ನು ವಿನಯ್ ಎಂಬುವವರು ನಡೆಸಿಕೊಡುತ್ತಿದ್ದಾರೆ. ಯಾರು ಈ ವಿನಯ್? ತಿಳಿಯಲು ಮುಂದೆ ಓದಿ..
ಮಾತುಕತೆಯ ವಿನಯ್
ವಿನಯ್ ಅವರು ಸಿನಿಮಾ ರಂಗದವರು ಅಲ್ಲ. ಹಾಗೆ ಯಾವುದೇ ಮನರಂಜನಾ ಕ್ಷೇತ್ರಕ್ಕೂ ಸೇರಿದವರಲ್ಲ. ಸಿಂಗಾಪುರ್ ನಲ್ಲಿ ಬ್ಯಾಂಕ್ ಉದ್ಯೋಗಿ ಆಗಿದ್ದ ವಿನಯ್ ಅವರು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕೆಂದು ಈ ಶೋ ಮಾಡಲು ನಿರ್ಧರಿಸಿದರಂತೆ. ಮೊದಲಿಗೆ ಯೂಟ್ಯೂಬ್ ನಲ್ಲಿ ಈ ಟಾಕ್ ಶೋ ಆರಂಭಿಸಿದ್ದರಂತೆ. ಪ್ರಸ್ತುತ ಸುವರ್ಣ ವಾಹಿನಿಗೆ ಈ ಶೋ ನಡೆಸಿಕೊಡುತ್ತಿದ್ದಾರೆ.
ಟಾಕ್ ಶೋ ನಲ್ಲಿ ಹೆಲ್ತ್ ಟಿಪ್ಸ್
ಸ್ಟಾರ್ ಸುವರ್ಣ ವಾಹಿನಿಯಲ್ಲಿನ 'ಮಾತುಕತೆ ವಿನಯ್ ಜೊತೆ' ಶೋ ಸ್ವಲ್ಪ ಡಿಫರೆಂಟ್ ಆಗಿದೆ. ಯಾಕಂದ್ರೆ ಇದೊಂದು ಟಾಕ್ ಆದರೂ ಸಹ ಸೆಲೆಬ್ರಿಟಿಗಳ ಜೊತೆ ಮಾತನಾಡುತ್ತ ಅವರಿಂದ ಹೆಲ್ತ್ ಟಿಪ್ಸ್ ಕೊಡಿಸಲಾಗುತ್ತಿದೆಯಂತೆ. ಸೆಲೆಬ್ರಿಟಿಗಳು ಕೊಡುವ ಹೆಲ್ತ್ ಟಿಪ್ಸ್ ಜನರಿಗೆ ಬಹುಬೇಗ ತಲುಪುತ್ತದೆ ಎಂಬ ಕಾರಣಕ್ಕಾಗಿ ವಿನಯ್ ಈ ಶೋ ಆರಂಭಿಸಿದರಂತೆ.
ಮಾತುಕತೆಯಲ್ಲಿ ಶಿವಣ್ಣ ಮತ್ತು ರಕ್ಷಿತ್ ಶೆಟ್ಟಿ
ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಇತರೆ 24 ಕ್ಕೂ ಹೆಚ್ಚು ಸೆಲೆಬ್ರಿಟಿಗಳು 'ಮಾತುಕತೆ ವಿನಯ್ ಜೊತೆ' ಟಾಕ್ ಶೋ ನಲ್ಲಿ ಭಾಗಿಯಾಗಿದ್ದಾರೆ. ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಟಾಕ್ ಶೋ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.[ಫೋಟೋಗಳು:ಮಾತುಕತೆ ವಿನಯ್ ಜೊತೆ]