Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಚತುರ್ಥಿಗೆ "ದೇವರ ದೇವ ಮಹಾದೇವ ಚರಿತ್ರೆ"ಯ ರಸದೌತಣ
ಕೈಲಾಸ ಪರ್ವತದಲ್ಲಿ ತಪೋಮಗ್ನನಾಗಿರುವ ಮಹಾದೇವನ ಸಂಪೂರ್ಣ ಚರಿತ್ರಾ ವೈಭವವನ್ನು ಬಿಚ್ಚಿಡುವ, 'ಹರ ಹರ ಮಹಾದೇವ' ಧಾರಾವಾಹಿಯ ಮುಖ್ಯ ಅಂಶಗಳನ್ನು ಒಳಗೊಂಡ ದೃಶ್ಯಗಳನ್ನು, ಚಲನಚಿತ್ರ ರೂಪದಲ್ಲಿ ಪ್ರಸಾರಿಸಲು ಸಿಧ್ದವಾಗಿದೆ, ನಿಮ್ಮೆಲ್ಲರ ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿ.
ಈ ರೀತಿಯ ಪ್ರಯತ್ನ ಇದೆ ಮೊದಲ ಬಾರಿಗೆ ಕಿರುತೆರೆಯಲ್ಲಿ ನಡೆಯುತ್ತಿದ್ದು, ಒಂದು ಧಾರಾವಾಹಿಯನ್ನು ಚಲನಚಿತ್ರ ರೂಪದಲ್ಲಿ ಬಿತ್ತರಿಸುವುದು ಕನ್ನಡದ ಮಟ್ಟಿಗೆ ಒಂದು ಹೊಸ ಪರಿಕಲ್ಪನೆಯೆ ಆಗಿದೆ.['ಹರ ಹರ ಮಹಾದೇವ' ಪಾತ್ರಧಾರಿಗಳ ಪರಿಚಯ]
ಶಿವಲಿಂಗವಿಲ್ಲದ ಅಪೂರ್ಣ ವಿಷ್ಣು ಮೂರ್ತಿಯನ್ನು ಪ್ರತಿಷ್ಠಾಪಿಸಲು ಮುಂದಾದ ದಕ್ಷನ ದರ್ಪದಿಂದ ಶುರುವಾಗುವ ಈ ಕಥೆಯಲ್ಲಿ, ಸತಿ-ಮಹಾದೇವರ ಪ್ರೇಮ, ದಕ್ಷನಿಗೆ ಮಹಾದೇವನ ಮೇಲಿನ ದ್ವೇಷ, ಮಹಾ ಮಂಡಲದಲ್ಲಿ ಶಿವನಿಗಾಗುವ ಅವಮಾನ.
ವಸಂತೋತ್ಸವದಲ್ಲಿ ಮಹಾದೇವನನ್ನು ಪ್ರೇಮಿಸುವಂತೆ ಪ್ರೇರೇಪಿಸುವ ಮದನಿಕೆ, ಚಂದ್ರನಿಗೆ ಶಾಪಕೊಡುವ ದಕ್ಷ, ನಂತರದಲ್ಲಿ ಚಂದ್ರ ಶೇಖರನಾಗುವ ಮಹಾದೇವ. ಹೀಗೆ ಅನೇಕ ರೋಚಕಭರಿತ ಸನ್ನಿವೇಷಗಳನ್ನು ಒಳಗೊಂಡ ಚಲನಚಿತ್ರವನ್ನು ಭಕ್ತರಿಗೆ ಅರ್ಪಿಸುತ್ತಿದೆ.
ಮೊದಲ ಇಪ್ಪತ್ತು ಕಂತುಗಳ ಸಾರಾಂಶ ಈ ಮಹಾ ಎಪಿಸೋಡ್ ನಲ್ಲಿ ಅಡಗಿದ್ದು, ವೀಕ್ಷಕರಿಗೆ ಗಣೇಶ ಚತುರ್ಥಿ ಹಬ್ಬಕ್ಕೆ ಭಕ್ತಿ-ಭಾವನೆಯುಳ್ಳ ಅನುಭವ ಕೊಡಲಿದೆ.[ಶಿವ-ಸತಿಯ ಪ್ರೇಮಕಥೆಗೆ ತಿರುವು ನೀಡಲಿರುವ ಸುರ-ಸುಂದರಿ]
ಈ ಗಣೇಶ ಚತುರ್ಥಿಯನ್ನು 'ಹರ ಹರ ಮಹಾದೇವ ಮಹಿಮೆ'ಯನ್ನು ನೋಡುವ ಮೂಲಕ ಸಾರ್ಥಕಗೊಳಿಸಿ. 'ಹರ ಹರ ಮಹಾದೇವ ಮಹಿಮೆ' ಇದೇ ಸೋಮವಾರದಿಂದ (05.09.2016) ಮಧ್ಯಾಹ್ನ 1.30ಕ್ಕೆ. ತಪ್ಪದೇ ವೀಕ್ಷಿಸಿ