Don't Miss!
- News Bagalkote: ಸಂಯುಕ್ತ ಪಾಟೀಲ್ ನಾಮಪತ್ರ ಸಲ್ಲಿಕೆ: ಮೆರವಣಿಗೆಯಲ್ಲಿ ಕಾಶಪ್ಪನವರ್ ಭರ್ಜರಿ ಡಾನ್ಸ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಮೇಲಿನ ಅನುಮಾನಕ್ಕೆ ಸುದೀಪ್ ತೆರೆ
ಬಳಿಕ ಚಂದ್ರಿಕಾ ಅವರು ಜಾರಿ ಬಿದ್ದಾಗ ಅರುಣ್ ಎಲ್ಲಿ ಏಟಾಯಿತು ಎಂದು ಕೇಳಿದ್ದರು. ಇದಕ್ಕೆ ಆಗ ಉತ್ತರ ಸಿಕ್ಕಿರಲಿಲ್ಲ. ಸುದೀಪ್ ಇದೇ ಪ್ರಶ್ನೆಯನ್ನು ಚಂದ್ರಿಕಾ ಅವರಿಗೆ ಕೇಳಿದರು, ಎಲ್ಲಿ ಪೆಟ್ಟಾಯಿತು ಚಂದ್ರಿಕಾ ಅವರೇ ಎಂದು. ಇದಕ್ಕೆ ಚಂದ್ರಿಕಾ ಹೇಳೋ ಹಾಗಿಲ್ಲ. ಆದರೆ ಸ್ವಲ್ಪ ನೋವಾಯಿತು ಎಂದರು.
ಈ ಬಾರಿ ಯಾರು ಪಾಸು ಯಾರಿಗೆ ಗೇಟ್ ಪಾಸು ಎಂದು ಹೇಳುತ್ತಲೇ ಎಲಿಮಿನೇಷನ್ ನಲ್ಲಿದ್ದವರ ಹೃದಯಬಡಿತವನ್ನು ಹೆಚ್ಚಿಸಿದರು. ಬ್ರೇಕ್ ಮೇಲೆ ಬ್ರೇಕ್ ತೆಗೆದುಕೊಂಡು ಸ್ಪರ್ಧಿಗಳಲ್ಲಿ ಇನ್ನೊಂದಿಷ್ಟು ಟೆನ್ಷನ್ ಕ್ರಿಯೇಟ್ ಮಾಡಿ ಮಜಾ ನೋಡಿದರು.
ಬೆಳಗ್ಗೆಯಿಂದ ಸಂಜೆ ತನಕ ಎಲ್ಲರೂ ಚೆನ್ನಾಗಿಯೇ ಇರುತ್ತೀರಾ. ಆದರೆ ಕನ್ಫೆಷನ್ ರೂಮಿನಲ್ಲಿ ನಾಮಿನೇಟ್ ಮಾಡಬೇಕಾದರೆ ಆತ್ಮೀಯರ ಹೆಸರನ್ನೇ ಸೂಚಿಸುತ್ತೀರಾ. ಈ ಬಗ್ಗೆ ವೀಕ್ಷಕರಿಗೆ ಅನುಮಾನಗಳು ಶುರುವಾಗಿದೆ. ಎಲ್ಲೋ ಏನೋ ನಡೀತಿದೆ ಎಂಬ ಸಂದೇಹಗಳು ಸುಳಿದಾಡುತ್ತಿವೆ. ಈ ಬಗ್ಗೆ ನೀವೇನು ಹೇಳ್ತೀರಾ ಅನುಶ್ರೀ ಎಂದಾಗ.
ವೈಯಕ್ತಿಕ ವಿಚಾರಕ್ಕೆ ಬಂದಾಗ ನಾವೆಲ್ಲಾ ಆತ್ಮೀಯವಾಗಿಯೇ ಇದ್ದೇವೆ. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಆಟ ಎಂದು ಪರಿಗಣಿಸಿದಾಗ ಅದನ್ನು ಆಟವಾಗಿಯೇ ನೋಡುತ್ತಿದ್ದೇವೆ. ಇದರಲ್ಲಿ ಯಾವುದೇ ಗಿಮ್ಮಿಕ್ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜರತಾರಿ ಸೀರೆಯಲ್ಲಿ ಕಂಗೊಳಿಸುತ್ತಿದ್ದ ನಿಕಿತಾ ಅವರು ಕನ್ನಡ ಭಾಷೆ ಕಲಿಯದೆ ಇರುವ ಬಗ್ಗೆಯೂ ಗಮನಸೆಳೆದರು. ಇದೇ ವಿಚಾರಕ್ಕೆ ಅರುಣ್ ಹಾಗೂ ನಿಕಿತಾ ನಡುವೆ ನಡೆದ ಮಾತಿನ ಚಕಮಕಿಗೂ ಪರಿಹಾರ ಸೂಚಿಸಿದರು.