Don't Miss!
- Automobiles ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
- News SSLC Result 2024: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಯಾವಾಗ? ಪರಿಶೀಲಿಸುವುದೇಗೆ?-ಮಾಹಿತಿ, ವಿವರ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ಯಾಪರೀಕ್ಷೆ ಬಗ್ಗೆ ಕಿಚಾಯಿಸಿದ ಕಿಚ್ಚ ಸುದೀಪ್
ಇದ್ದದ್ದನ್ನು ಇದ್ದಹಾಗೆ ತೋರಿಸುವ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಎಂಬ ಮಾತುಗಳಿಗೆ ಈ ಬಾರಿ ಹೆಚ್ಚು ಅರ್ಥಬಂದಂತಿದೆ ಕಂಡುಬಂತು. ಮನೆಯ ಸದಸ್ಯರ ಕಣ್ಣು ತೇವ ಮಾಡಿದ ಬಳಿಕ ಸುದೀಪ್ ಒಂಚೂರು ಹಾಸ್ಯಕ್ಕೆ ಹೊರಳಿ ಸದಸ್ಯರ ಮುಖದಲ್ಲಿ ನಗೆ ಚಿಮ್ಮಿಸಿದರು.
ಚಂದ್ರಿಕಾ ಅವರು ಸಂತೈಸು, ಸಮಾಧಾನಪಡಿಸು ಎಂಬ ಪದ ಬಳಸಲು ಹೋಗಿ "ಸಂತಾನ" ಎಂಬ ಪದ ಬಳಕೆ ಮಾಡಿದ್ದನ್ನು ನೆನಪಿಸಿದರು. ಇದಕ್ಕೆ ವಿವರಣೆ ನೀಡಲು ಅರುಣ್ ಸಾಗರ್ ಮುಂದಾದರಾದರೂ, ಅರ್ಧದಲ್ಲೇ ತಡೆದ ಸುದೀಪ್, ಅಯ್ಯೋ ಅವರ ಮನಸ್ಸಿನಲ್ಲಿದ್ದ ಮಾತು ಹೊರಗೆ ಬಂತು ಬಿಡ್ರಿ. ಅವರಿಗೆ ಇನ್ನೊಂದು ಮಗು ಬೇಕಾಗಿತ್ತು ಅಂತ ಕಾಣಿಸುತ್ತದೆ ಎಂದು ಹೇಳಿ ಕಿಚ್ಚ ಸುದೀಪ್ ಕಿಚಾಯಿಸಿದರು. ಎಲ್ಲರೂ ಎದ್ದುಬಿದ್ದು ನಗುವಂತಾಯಿತು.
ಇದೇ ಸಂದರ್ಭದಲ್ಲಿ ಅರುಣ್ ಸಾಗರ್ ಅವರು ತಮ್ಮ ಲವ್ ಮ್ಯಾರೇಜ್ ಬಗ್ಗೆ ಹೇಳಿಕೊಂಡರು. ತಾವು ರಂಗಾಯಣದಲ್ಲಿದ್ದಾಗ ಒಂದು ದಿನ ಹೊರಗೆ ಗೆಳೆಯನ ಜೊತೆ ಕಾಫಿ ಕುಡಿಯುತ್ತಿದ್ದೆ. ಉದ್ದ ಜಡೆಯ ಹುಡುಗಿಯೊಬ್ಬಳು ನಡೆದುಹೋಗುತ್ತಿದ್ದಳು. ಮದುವೆಯಾದರೆ ಈ ರೀತಿ ಹುಡುಗಿಯನ್ನೇ ಆಗಬೇಕು ಎಂದು ಅವನೊಂದಿಗೆ ಹೇಳಿದೆ.