Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಖತ್ ಸಂಡೇ ವಿತ್ ಸುದೀಪ್ ಜೊತೆ ಸುಮಂತ್, ಕೃತಿ
ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 2' ಅರ್ಧ ಶತಕ ಪೂರೈಸಿ ಮುನ್ನಡೆದಿದೆ. ಈ ವಾರ ಗುರುಪ್ರಸಾದ್ ಮತ್ತು ಸಂತೋಷ್ ನಾಮಿನೇಟ್ ಆಗಿದ್ದಾರೆ. ಆದರೆ ಅವರಿಬ್ಬರಲ್ಲಿ ಯಾರೊಬ್ಬರೂ ಮನೆಯಿಂದ ಹೊರಗೆ ಹೋಗುತ್ತಿಲ್ಲ.
ಓಟಿಂಗ್ ಲೈನ್ಸ್ ಇಲ್ಲದ ಕಾರಣ ಅವರು ಮನೆಯಲ್ಲೇ ಉಳಿಯುತ್ತಾರೆ. ಆದರೆ ಈ ವಿಷಯ ಮಾತ್ರ ಅತ್ತ ಗುರುಪ್ರಸಾದ್ ಇತ್ತ ಸಂತೊಷ್ ಅವರಿಬ್ಬರಿಗೂ ಗೊತ್ತಿಲ್ಲ. ಒಟ್ಟಾರೆ ಸುದೀಪ್ ಈ ವಾರ ಅವರಿಬ್ಬರ ಜೊತೆ ಟಪಾಂಗುಚಿ ಆಡುವುದಂತೂ ಇದ್ದೇ ಇದೆ. ಜೊತೆಗೆ ವೀಕ್ಷಕರಿಗೆ ಭರಪೂರ ಮನರಂಜನೆ. [ಹೆಚ್ಚಾಗಿ ನೋವನ್ನೇ ಉಂಡ 'ನೀಲಕಂಠ' ರವಿಚಂದ್ರನ್]
ಇವರಿಬ್ಬರ ಜೋಡಿಯ 'ತಿರುಪತಿ ಎಕ್ಸ್ ಪ್ರೆಸ್' ಚಿತ್ರ ಬಿಡುಗಡೆಗೆ (ಸೆಪ್ಟೆಂಬರ್ 5) ಸಿದ್ಧವಾಗಿದೆ. ಈ ಚಿತ್ರದ ಬಗೆಗಿನ ತಮ್ಮ ಅನುಭವಗಳನ್ನು ಬಿಗ್ ಬಾಸ್ ವೇದಿಕೆ ಮೇಲೆ ಕೃತಿ ಮತ್ತು ಸುಮಂತ್ ಹಂಚಿಕೊಳ್ಳಲಿದ್ದಾರೆ. 'ದಿಲ್ ವಾಲಾ' ಚಿತ್ರದ ಬಳಿಕ ಸುಮಂತ್ ಈ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಈಗಾಗಲೆ ಬಿಗ್ ಬಾಸ್ ವೇದಿಕೆ ಮೇಲೆ ಹಲವಾರು ತಾರೆಗಳು ಬಂದು ತಮ್ಮ ಅನುಭಗಳನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಮುಖ್ಯವಾಗಿ ರವಿಚಂದ್ರನ್, ರವಿಶಂಕರ್, ವಿಜಯ್ ಪ್ರಕಾಶ್, ಉಮಾಶ್ರೀ, ತಾರಾ, ಎಸ್ ನಾರಾಯಣ್ ಮುಂತಾದವರು. (ಒನ್ಇಂಡಿಯಾ ಕನ್ನಡ)