Don't Miss!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಥ್ಯಾಂಕ್ಸ್ ಟು ಹುಚ್ಚ ವೆಂಕಟ್ ; ನೇಹಾ ಗೌಡ ಸೇಫ್.!
ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' ಪ್ರಿಯರು ನಿರೀಕ್ಷಿಸಿದಂತೆ ಈ ವಾರ 'ಬಿಗ್ ಬಾಸ್' ಮನೆಯಿಂದ ಗಗನಸಖಿ ನೇಹಾ ಗೌಡ ಔಟ್ ಆಗ್ಬೇಕಿತ್ತು.
ಮೂಲಗಳ ಪ್ರಕಾರ, ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಿಲ್ಲದ ನೇಹಾ ಗೌಡ ಈ ವಾರ ಎಲಿಮಿನೇಟ್ ಆಗುತ್ತಿದ್ದರು. 'ಬಿಗ್ ಬಾಸ್' ಮನೆಯಿಂದ ಹೊರಬರುವ ನೇಹಾ ಗೌಡರನ್ನ ರಿಸೀವ್ ಮಾಡಿಕೊಳ್ಳಲು ಅವರ ಕುಟುಂಬಸ್ಥರು ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹಾಜರ್ ಆಗಿದ್ದರು. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]
ಪ್ರೇಕ್ಷಕರು ನೀಡಿರುವ ಎಸ್.ಎಂ.ಎಸ್ ವೋಟ್ ಆಧಾರದ ಮೇಲೆ ಸುದೀಪ್, ನೇಹಾ ಗೌಡರನ್ನ ಹೊರಗೆ ಕರೆಯುವ ಮುನ್ನವೇ ಹುಚ್ಚ ವೆಂಕಟ್ ರಾದ್ಧಾಂತ ಸೃಷ್ಟಿಸಿದರು. [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]
ಗಾಯಕ ರವಿ ಮುರೂರು ಮೇಲೆ ದೈಹಿಕ ಹಲ್ಲೆ ಮಾಡಿ, 'ಬಿಗ್ ಬಾಸ್' ಕಾರ್ಯಕ್ರಮದ ನಿಯಮ ಮುರಿದ ಪರಿಣಾಮ ಹುಚ್ಚ ವೆಂಕಟ್ ಗೆ ಗೇಟ್ ಪಾಸ್ ನೀಡಲಾಯ್ತು. ಇದರಿಂದ ನೇಹಾ ಗೌಡ ಸೇಫ್ ಆದರು. ಎರಡನೇ ಬಾರಿಗೆ ನಾಮಿನೇಟ್ ಆಗಿದ್ದ ರವಿ ಮುರೂರು ಮತ್ತು ಕೃತಿಕಾ ಕೂಡ ನಿಟ್ಟುಸಿರು ಬಿಡುವಂತಾಯ್ತು.