Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರಳ ಜೀವನ ವಾಹಿನಿಯಲ್ಲಿ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮಗಳು
ಕನ್ನಡ ಕಿರುತೆರೆ ಲೋಕದಲ್ಲಿ ಧನಾತ್ಮಕ ಚಿಂತನೆ, ಅಲೆಯನ್ನು ಎಬ್ಬಿಸಿದ ಕರ್ನಾಟಕದ ಪ್ರಪ್ರಥಮ ಇನ್ಫೋಟೈನ್ಮೆಂಟ್ ಚಾನೆಲ್ 'ಸರಳ ಜೀವನ' ವಾಹಿನಿಯಲ್ಲಿ ಹೊಸ ವರ್ಷದ ದಿನವಾದ ಯುಗಾದಿಯ ದಿನದಂದು (ಏ 8) ವಿನೂತನ ಕಾರ್ಯಕ್ರಮ ಪ್ರಸಾರವಾಗಲಿದೆ.
ರಸದೌತಣದ ಕಾರ್ಯಕ್ರಮಗಳು, ನವ ವಸಂತಕ್ಕೆ ಕಾಲಿಡುತ್ತಿರುವ ಸಡಗರ, ಸಂಭ್ರಮದ ಯುಗಾದಿ ಹಬ್ಬದ ಪ್ರಯುಕ್ತ 'ಸರಳ ಜೀವನ ವಾಹಿನಿ' ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಯುಗಾದಿ ಹಬ್ಬದಂದು (ಏ 8) ಸರಳ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಪಟ್ಟಿ ಇಂತಿದೆ
ಯುಗಾದಿ ವರ್ಷ ಭವಿಷ್ಯ ಬೆಳಿಗ್ಗೆ 9:00ಕ್ಕೆ - ಮಹಾಬಲ್ಲಾಳ ಕುಲ್ಕೆರೆ ಹಾಗೂ ಡಾ. ಕೃಷ್ಣಕುಮಾರ ಅವರಿಂದ
ಯುಗಾದಿ ಭೋಜನ ಬೆಳಿಗ್ಗೆ 11:00ಕ್ಕೆ - ಚಲನಚಿತ್ರ ತಾರೆ ಮತ್ತು ನಿರ್ದೇಶಕಿ ರೂಪಾ ಐಯ್ಯರ್ ಅವರೊಂದಿಗೆ ಚಿಟ್ ಚಾಟ್ ಹಾಗೂ ವಿಶೇಷ ಅಡುಗೆ ತಯಾರಿ. ಜ್ಞಾನಪದ ಜುಗಲ್ ಬಂದಿ ಮಧ್ಯಾಹ್ನ 12:00ಕ್ಕೆ.
ಆಚಾರ ವಿಚಾರ ಯುಗಾದಿ ವಿಶೇಷ ಮಧ್ಯಾಹ್ನ 1:00ಕ್ಕೆ - ಶ್ರೀ. ಗಗನ ಗುರುದತ್ತ ಗುರೂಜಿಯವರೊಂದಿಗೆ ಯುಗಾದಿ ಹಬ್ಬದ ಆಚರಣೆಯ ಕುರಿತ ವಿಶೇಷ ಚರ್ಚಾ ಕಾರ್ಯಕ್ರಮ.
ಯುಗಾದಿ ಅರಿವು ಆಚರಣೆ ಮಧ್ಯಾಹ್ನ 1:30ಕ್ಕೆ- ಡಾ. ಕಿಶೋರ್ ಅವರೊಂದಿಗೆ ಯುಗಾದಿ ಹಬ್ಬದ ವೈಜ್ಞಾನಿಕ ಹಿನ್ನೆಲೆ ಅರಿಯುವ ಚರ್ಚಾ ಕಾರ್ಯಕ್ರಮ.
ಯುಗಾದಿ ಏಕೆ, ಹಾಗೂ ಹೇಗೆ? ಮಧ್ಯಾಹ್ನ 2:30ಕ್ಕೆ - ಬೇರೆ ಬೇರೆ ರಾಜ್ಯಗಳಲ್ಲಿ ಯುಗಾದಿ ಹಬ್ಬದ ಆಚರಣೆ ಹಾಗೂ ವಿಶೇಷ ಅತಿಥಿಗಳೊಂದಿಗೆ ಯುಗಾದಿ ಹಬ್ಬದ ಆಚರಣೆಯ ಮಹತ್ವ ಕುರಿತ ವಿಷಯ ವಿನಿಮಯ ಕಾರ್ಯಕ್ರಮ.
ಯುಗಾದಿ ಬೆಳಕು ಸಂಜೆ 4:30ಕ್ಕೆ : ಕುಮಾರಸ್ವಾಮಿ ಲೇಔಟ್ನಲ್ಲಿರುವ ಪಂಡಿತ್ ಪುಟ್ಟರಾಜ್ ಗವಾಯಿ ಅಂಗವಿಕಲರ ಟ್ರಸ್ಟಿನ ಅಂಧ ಹೆಣ್ಣು ಮಕ್ಕಳ ಉಚಿತ ವಸತಿ ಸಂಗೀತ ಪಾಠಶಾಲೆಯ ಮಕ್ಕಳೊಂದಿಗೆ ಹಬ್ಬದ ಆಚರಣೆ.
ಡಾ. ಚಂದ್ರಶೇಖರ್ ಗುರೂಜಿ ಹಾಗೂ ಕಿರಗೂರಿನ ಗಯ್ಯಾಳಿಗಳು ಚಲನಚಿತ್ರದ ತಾರೆ ಮಾನಸ ಜೋಶಿಯವರ ಆತಿಥ್ಯದಲ್ಲಿ ಮಕ್ಕಳೊಂದಿಗೆ ಹಬ್ಬದ ಆಚರಣೆ ಮತ್ತು ಹಬ್ಬದೂಟದ ಸಂಭ್ರಮ.
ಸಂಜೆ 6ಕ್ಕೆ - ಜೋಗಿಲ ಸಿದ್ಧರಾಜು, ವಿನುತಾ ಬೂದಿಹಾಳ, ನಿರ್ಮಲ ಹಾಗೂ ರಾಜೇಶ್ ಅವರಿಂದ ಜಾನಪದ ಹಾಡುಗಳ ಜುಗಲ್ ಬಂದಿ.