Don't Miss!
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೈವರ ಮುನಿಸು, ಏನಿದು ತಿಮ್ಮಪ್ಪನ ಟಿವಿ ಗದ್ದಲ
ತಿರುಮಲೇಶ ವೆಂಕಪ್ಪನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಜಗತ್ತಿನೆಲ್ಲೆಡೆ ಎಲ್ಲೆಲ್ಲಿ ಭಾರತೀಯರಿದ್ದಾರೋ ಅವರಿಗೆಲ್ಲಾ ಗೊತ್ತಿದ್ದಾನೆ ನಮ್ಮ ಗೋವಿಂದ. ನಮ್ಮ ಕನ್ನಡದವರೂ ಕೂಡ ವೆಂಕಪ್ಪನ ಬಳಿ ಹೋಗಿ ಬರುತ್ತಾರೆ ಸಾಕಷ್ಟು ಜನ.
ತಿರುಪತಿ ದೇವಸ್ಥಾನ ಸಮಿತಿಯು ಸ್ವಂತದ್ದೊಂದು ಟಿವಿ ಚಾನೆಲ್ ಹೊಂದಿದೆ. ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್ವಿಬಿಸಿ) ಎಂಬ ಹೆಸರಿನ ಈ ಚಾನೆಲ್ ನಲ್ಲಿ ತಿರುಮಲದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳ ನೇರ ಪ್ರಸಾರವಿರುತ್ತದೆ.
ಕೂಡಲೇ
ತಿರುಮಲದ
ದರ್ಶನ
ಪಡೆಯಬೇಕೆಂದರೆ
ಎಸ್ವಿಬಿಸಿ
ಚಾನೆಲ್
ನೋಡಿಕೊಂಡರೆ
ಸಾಕು
ವೆಂಕಪ್ಪನ
ದರ್ಶನವಾದಂತೆ
ಭಾಸವಾಗುತ್ತದೆ
ಅಪ್ಪಟ
ಆಸ್ತಿಕರಿಗೆ.[ತಿರುಪತಿ
ತಿಮ್ಮಪ್ಪನ
ಬ್ರಹ್ಮೋತ್ಸವ
ಸಂಭ್ರಮ]
ಆದರೆ, ಈಗ ಎಸ್ವಿಬಿಸಿನಲ್ಲಿ ಶಿವನ ಬಗ್ಗೆ ಬಹಳಷ್ಟು ಕಾರ್ಯಕ್ರಮಗಳನ್ನು ತೋರಿಸಲಾಗುತ್ತದೆ ಎಂದು ವಿಷ್ಣುಪ್ರಿಯ ಭಕ್ತರು ಚಾನೆಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಸ್ಪಂದಿಸಿದ ಚಾನೆಲ್ ಸಿಬ್ಬಂದಿ ಭಕ್ತರ ಬೇಡಿಕೆಗೆ ಮನ್ನಣೆ ನೀಡಿ ಶಿವನ ಕುರಿತಾದ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿದ್ದಾರೆ.
ಆದರೆ, ಮಜವಾದ ವಿಷಯವೆಂದರೆ ವೆಂಕಟೇಶ್ವರನಲ್ಲಿಯೇ ಈಶ್ವರನಿದ್ದಾನೆ ಎಂಬುದು ವಿಷ್ಣುಪ್ರಿಯರಿಗೆ ಅರ್ಥವಾಗದೇ ಇರುವುದು ವಿಪರ್ಯಾಸ. ಯಾಕೆಂದರೆ ವೆಂಕಟ+ಈಶ್ವರ= ವೆಂಕಟೇಶ್ವರ ಎಂಬುದನ್ನು ಆ ವೆಂಕಪ್ಪನಿಗೆ ಅವರಿಗೆ ತಿಳಿ ಹೇಳಬೇಕು.
ಆಂಧ್ರಪ್ರದೇಶದಲ್ಲಿರುವ ಶ್ರೀಶೈಲ, ಮಲ್ಲವರಂ, ವಲ್ಲುರಮ್ಮ, ಸಿಂಗರಾಯನಕೊಂಡ, ಅಲ್ಲದೆ ಅನೇಕ ಕಡೆ ಇರುವ ಪ್ರಸನ್ನ ಆಂಜನೇಯ ದೇಗುಲಗಳು, ಸಾಯಿಬಾಬಾ ದೇಗುಲ ಎಲ್ಲವನ್ನು ದೇಗುಲ ಪ್ರವಾಸ ಮಾಲಿಕೆಯಡಿಯಲ್ಲಿ ಪ್ರಸಾರ ಮಾಡಲು ಎಸ್ ವಿಬಿಸಿ ಮುಂದಾಗಿದೆ. ಅಲ್ಲದೆ, ಕಾರ್ತಿಕ ಸೋಮವಾರದಂದು ವಿಶೇಷ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ.