Don't Miss!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳು ಯಾರು? ಮಾಹಿತಿ ಇಲ್ಲಿದೆ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡದಲ್ಲಿ ನೋಡಿ ಶಿವಣ್ಣನ ಜೊತೆ ಶಿವ-ರಾತ್ರಿ'
ಉಪೇಂದ್ರ, ದುನಿಯಾ ವಿಜಿ, ವಿಜಯ ರಾಘವೇಂದ್ರ, ಪಂಕಜ್, ರಾಗಿಣಿ ದ್ವಿವೇದಿ, ರಿಷಿಕಾ ಸಿಂಗ್ ಹೀಗೆ ಕನ್ನಡ ಸಿನಿ ತಾರೆಯರ ದಂಡು ವಿವಿಧ ಹಾಡುಗಳಿಗೆ ನರ್ತಿಸಿತು. ಉಪೇಂದ್ರ 'ರಕ್ತ ಕಣ್ಣೀರು' ಚಿತ್ರದ ಡೈಲಾಗ್ ಒಗೆದರೆ ದುನಿಯಾ ವಿಜಿ 'ಹೊಡಿ ಮಗ ಹೊಡಿ ಮಗ' ಹಾಡಿಗೆ ದೊಣ್ಣೆ ಹಿಡಿದರು. 'ಶಿವ' ಚಿತ್ರದ ಹಾಡುಗಳಿಗೆ ವಿಶೇಷವಾಗಿ ನೃತ್ಯ ಸಂಯೋಜನೆ ಮಾಡಲಾಗಿತ್ತು.
ಅನೇಕ ನಿರ್ಮಾಪಕರು, ವಿತರಕರು, ರಾಜಕೀಯ ಗಣ್ಯರು ಪಾಲ್ಗೊಂಡಿದ್ದ ಈ ಸಮಾರಂಭದಲ್ಲಿ ಗೀತಾ ಶಿವರಾಜ್ ಕುಮಾರ್ ಸಹ ವೇದಿಕೆ ಏರಿದ್ದರು. ನೆಚ್ಚಿನ ತಾರೆಯರನ್ನು ನೋಡಲು ನೂಕು ನುಗ್ಗಲು ಉಂಟಾಗಿ ಲಾಠಿ ಪ್ರಹಾರ ಕೂಡ ಆಯಿತು. ಶಿವಣ್ಣನ ಬಹುನಿರೀಕ್ಷಿತ ಚಿತ್ರ 'ಶಿವ' ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದು ನಟಿ ರಾಗಿಣಿ ಶಿವಣ್ಣರಿಗೆ ನಾಯಕಿಯಾಗಿ ನಟಿಸಿದ್ದಾರೆ. ಬ್ಯಾಂಕಾಕ್, ಸಿಂಗಾಪುರ ಹಾಗೂ ಹಲವು ವಿದೇಶಗಳಲ್ಲಿ ಈ ಚಿತ್ರಕ್ಕೆ ಅದ್ದೂರಿ ಸೆಟ್ ಹಾಗೂ ಅಪರೂಪದ ಸೌಂದರ್ಯತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರ ಶಿವಣ್ಣ ಅಭಿನಯದ '101' ನೇ ಚಿತ್ರ.
ಕಾರ್ಯಕ್ರಮಕ್ಕೆ ಶಿವಣ್ಣ ಮತ್ತು ಸಹಕಲಾವಿದರು ವಾರ ಮುಂಚೆಯೇ ನಡೆಸಿದ ತಾಲೀಮು, ವೇದಿಕೆ ತಾಲೀಮು, ಅಲ್ಲಿ ನಡೆದ ಹಾಸ್ಯ ಪ್ರಸಂಗಗಳು ಮುಂತಾದ ಚಿನಕುರುಳಿ ವಿಷಯಗಳನ್ನು ಒಳಗೊಂಡ 'ಮೇಕಿಂಗ್ ಆಫ್ ಶಿವ-ರಾತ್ರಿ' ಕೂಡ ಜುಲೈ 01ರ ಭಾನುವಾರ ಸಂಜೆ 5-00 ಗಂಟೆಯಿಂದ ಪ್ರಸಾರವಾಗಲಿದೆ. 6-00 ಗಂಟೆಯಿಂದ ಜೀ ಕನ್ನಡದಲ್ಲಿ ವಿಜೃಂಭಿಸಲಿದ್ದಾನೆ ಢಂ ಢಂ ಡಮರುಗ ಭೋಲೆನಾಥ 'ಶಿವ'! (ಒನ್ ಇಂಡಿಯಾ ಕನ್ನಡ)