Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಇತಿಹಾಸ ಸೃಷ್ಟಿಸಿದ ಜೀ ಕನ್ನಡ 'ರಾಧಾ ಕಲ್ಯಾಣ'
ಈಗಿರುವ ಫಾಸ್ಟ್ ದುನಿಯಾದಲ್ಲಿ ಟಿವಿ ಧಾರಾವಾಹಿಯೊಂದು 100, 200 ಕಂತುಗಳನ್ನು ಪೂರೈಸುವುದೇ ಸವಾಲಿನ ಕೆಲಸ. ಆದರೆ ಜೀ ಕನ್ನಡ ವಾಹಿನಿಯ ರಾಧಾ ಕಲ್ಯಾಣ ಧಾರಾವಾಹಿ 1000 ಕಂತುಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.
ಜೀ ಕನ್ನಡ ವಾಹಿನಿಯಲ್ಲಿ ಕಳೆದ ಮೂರುವರೆ ವರ್ಷಗಳಿಂದ ಪ್ರಸಾರವಾಗುತ್ತಿರುವ ಅಶು ಬೆದ್ರೆ ವೆಂಚರ್ ನಿರ್ಮಾಣದ 'ರಾಧಾ ಕಲ್ಯಾಣ' ಧಾರಾವಾಹಿ ಒಂದು ಸಾವಿರ ಕಂತುಗಳನ್ನು ಪೂರೈಸಿದೆ. [ಸಾವಿರ ಸಂಚಿಕೆಗಳತ್ತ ಜೀ ಕನ್ನದ ರಾಧಾ ಕಲ್ಯಾಣ]
ಈ ಧಾರಾವಾಹಿ ಕಿರುತೆರೆ ಇತಿಹಾಸದಲ್ಲೊಂದು ಮೈಲಿಗಲ್ಲು. ಕನ್ನಡ ಧಾರಾವಾಹಿಯೊಂದನ್ನು ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಮಾಡಲ್ಪಟ್ಟ ದಾಖಲೆಯು ರಾಧಾ ಕಲ್ಯಾಣದ ಹೆಸರಿನಲ್ಲಿದೆ. ಇದಿಷ್ಟೇ ಅಲ್ಲದೆ ಗೋವಾ, ದೂದ್ ಸಾಗರ್, ಮಂಗಳೂರಿನ ಅನೇಕ ರಮಣೀಯ ತಾಣಗಳಲ್ಲಿ ವಿಶಿಷ್ಟ ಶೈಲಿಯಲ್ಲಿ ಚಿತ್ರೀಕರಿಸಿಚ ಹೆಗ್ಗಳಿಕೆ ರಾಧಾ ಕಲ್ಯಾಣ ಧಾರಾವಾಹಿಯದು.
ಕನ್ನಡ ಧಾರಾವಾಹಿ ಲೋಕದಲ್ಲಿ ಮದುವೆ ದೃಶ್ಯಗಳನ್ನು ಅತ್ಯಂತ ಅದ್ದೂರಿಯಾಗಿ ಚಿತ್ರೀಕರಿಸಿದ್ದು ರಾಧಾ ಕಲ್ಯಾಣದಲ್ಲಿ. ಕಥೆಯಲ್ಲಾಗಲಿ, ಮೇಕಿಂಗ್ ವಿಚಾರದಲ್ಲಾಗಲಿ ಒಂದಿನಿತೂ ರಾಜಿ ಮಾಡಿಕೊಳ್ಳದೆ, ಹೆಲಿಕ್ಯಾಮ್ ಮುಂತಾದ ತಂತ್ರಜ್ಞಾನಗಳನ್ನು ಈ ಧಾರಾವಾಹಿಯಲ್ಲಿ ಬಳಸಿಕೊಳ್ಳಲಾಗಿದೆ.
'ರಾಧಾ ಕಲ್ಯಾಣ' ಸಾವಿರ ಕಂತುಗಳನ್ನು ಪೂರೈಸಿದ ಸಂಭ್ರಮವನ್ನು ಹಂಚಿಕೊಳ್ಳುವ ಸಲುವಾದ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಮಾ.17ರಂದು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಈ ಪತ್ರಿಕಾಗೋಷ್ಠಿಯಲ್ಲಿ ಜೀ ಕನ್ನಡದ ಮುಖ್ಯಸ್ಥರಾದ ಶೀಜು ಪ್ರಭಾಕರನ್, ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಕಥಾ ವಿಭಾಗದ ಮುಖ್ಯಸ್ಥ ಸುದನ್ಯ ದೇರಾಜೆ, ವ್ಯವಸ್ಥಾಪಕ ಪುನೀತ್ ಹೆಗ್ಡೆ, ಖ್ಯಾತ ಲೆಕ್ಕ ಪತ್ರಶೋಧಕ ಎಸ್ ಎಸ್ ನಾಯಕ್, ಧಾರಾವಾಹಿ ನಿರ್ಮಾಪಕ ಅಶು ಬೆದ್ರೆ, ನಿರ್ದೇಶಕ ಗಣೇಶ್ ಶಾಸ್ತ್ರಿ, ಛಾಯಾಗ್ರಾಹಕ ರುದ್ರಮುನಿ, ಕಲಾವಿದರಾದ ಕೃತ್ತಿಕಾ ರವೀಂದ್ರ, ಪ್ರವೀಣ್, ರಮೇಶ್ ಭಟ್, ಭವ್ಯಶ್ರೀ ರೈ ಮುಂತಾದವರು ಉಪಸ್ಥಿತರಿದ್ದರು. (ಫಿಲ್ಮಿಬೀಟ್ ಕನ್ನಡ)