Don't Miss!
- News 1951 ರಿಂದ 2019 : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ವಿವರ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡದಲ್ಲಿ ಶೀಘ್ರದಲ್ಲೇ ನೋಡಲಿದ್ದೀರಿ 'ಕನಕ'
ಬಸ್ ಲೇಡಿ ಕಂಡಕ್ಟರ್ ಒಬ್ಬರ ಜೀವನದ ಕಥೆ ಹೊಂದಿರುವ ಈ ಧಾರಾವಾಹಿ, ನಿಸ್ಸಂಶಯವಾಗಿಯೂ ಹೊಸ ದಾಖಲೆ ಮೆರೆಯಲಿದೆ ಎಂಬುದು ಇಡೀ ಧಾರಾವಾಹಿ ತಂಡದ ಅನಿಸಿಕೆ. ಇತ್ತೀಚಿಗೆ ಬಸ್ಸುಗಳಲ್ಲಿ ಲೇಡಿ ಕಂಡಕ್ಟರ್ ಗಳು ಹೆಚ್ಚಾಗಿ ಕಾಣಲು ಸಿಗುತ್ತಾರೆ. ಜೊತೆಗೆ ಅವರು ಕರ್ತವ್ಯಗಳನ್ನು ಪುರುಷರ ಸಮಾನವಾಗಿ ನಿರ್ವಹಿಸುತ್ತಿದ್ದಾರೆ.
ಈ ಕಥೆಯಲ್ಲಿ ಮಹಿಳಾ ಕಂಡಕ್ಟರ್ ಜೀವನಗಾಥೆಯನ್ನು ಕಿರುತೆರೆಯ ಮೇಲೆ ತರುವ ಪ್ರಯತ್ನ ನಡೆಸಲಾಗಿದೆ. ಎಲ್ಲರಂತೆ ಜೀವನ ನಡೆಸಿಯೂ ಕಂಡಕ್ಟರ್ ಕರ್ತವ್ಯಗಳನ್ನು ನಡೆಸುವಾಗಿನ ಅವರ ಕೆಟ್ಟ ಹಾಗೂ ಒಳ್ಳೆಯ ಅನುಭವಗಳು, ಕೆಲಸ ಪಡೆಯಲು ಪಟ್ಟ ಶ್ರಮ, ಸದ್ಯದ ಪರಿಸ್ಥಿತಿ ಎಲ್ಲವೂ ಕಥೆಯೊಂದರ ರೂಪದಲ್ಲಿ ಅನಾವರಣಗೊಳ್ಳಲಿದೆ.
ಈ ಮೊದಲು ಸುವರ್ಣ ವಾಹಿನಿಯಲ್ಲಿ 'ಲಕುಮಿ' ಎಂಬ ಜನಪ್ರಿಯ ಧಾರಾವಾಹಿಯನ್ನು ಈ ಮಿಲನ ಪ್ರಕಾಶ್ ಪ್ರಪ್ರಥಮವಾಗಿ ನಿರ್ದೇಶಿಸಿದ್ದರು. ಅದು ತುಂಬಾ ಜನಪ್ರಿಯವಾಗಿ ಪ್ರಕಾಶ್ ಅವರಿಗೆ ಕಿರುತೆರೆಯಲ್ಲೂ ಬಹಳಷ್ಟು ಖ್ಯಾತಿ ತಂದುಕೊಟ್ಟಿತ್ತು. ಆದರೆ, ನಂತರ ಬಂದ 'ಗೊಂಬೆಯಾಟವಯ್ಯ' ಅಷ್ಟೊಂದು ಜನಪ್ರಿಯತೆ ಪಡೆಯಲಿಲ್ಲ. ಇದೀಗ ಸುವರ್ಣ ವಾಹಿನಿಯಲ್ಲಿ ಅವರ 'ಚುಕ್ಕಿ' ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಇದೀಗ, ಜೀ ಕನ್ನಡ ವಾಹಿನಿಗೆ 'ಕನಕ' ಎಂಬ ಹೆಸರಿನ ಧಾರಾವಾಹಿ ನಿರ್ಮಾಣವಾಗುತ್ತಿದೆ. ಶೀಘ್ರದಲ್ಲೇ ಪ್ರಸಾರವಾಗಲಿರುವ ಇದು ಖಂಡಿತವಾಗಿಯೂ ಜನಮನ್ನಣೆ ಪಡೆಯಲಿದೆ ಎಂಬುದು ನಿರ್ದೇಶಕ ಮಿಲನ ಪ್ರಕಾಶ್ ಹಾಗೂ ಜೀ ವಾಹಿನಿಯ ತಂಡದ ಅಭಿಪ್ರಾಯ. ಧಾರಾವಾಹಿ ಪ್ರಸಾರ ಕಂಡ ನಂತರ ವೀಕ್ಷಕರ ಪ್ರತಿಕ್ರಿಯೆ ತಿಳಿಯಲಿದೆ. (ಒನ್ ಇಂಡಿಯಾ ಕನ್ನಡ)