ನಿರ್ದೇಶಕ ಶ್ರೀನಿವಾಸ್ ರಾಜು ಮೂರು ಭಾಗಗಳಲ್ಲಿ 'ದಂಡುಪಾಳ್ಯ'ದ ಪುರಾಣವನ್ನ ಬಿಚ್ಚಿಟ್ಟಿದ್ದರು. ಮೂರು ಭಾಗ ತೆರೆಕಂಡ ಮೇಲೆ 'ದಂಡುಪಾಳ್ಯ' ಹಂತಕರ ಕಥೆಗೆ ಅವರು ಪೂರ್ಣ ವಿರಾಮ ಇಟ್ಟಿದ್ದರು.
ಇದೀಗ ಸ್ಯಾಂಡಲ್ ವುಡ್ ನಲ್ಲಿ 'ದಂಡುಪಾಳ್ಯ-4' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಶ್ರೀನಿವಾಸ್ ರಾಜು ತೆರೆಗೆ ತಂದ 'ದಂಡುಪಾಳ್ಯ' ಸರಣಿಗೂ 'ದಂಡುಪಾಳ್ಯ-4' ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಕೆ.ಟಿ.ನಾಯಕ್ ಎಂಬುವರು 'ದಂಡುಪಾಳ್ಯ-4' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಜೈಲಿನಿಂದ ತಪ್ಪಿಸಿಕೊಳ್ಳಲು 'ದಂಡುಪಾಳ್ಯ' ಗ್ಯಾಂಗ್ ಮಾಡಿದ ತಂತ್ರಗಳೇ 'ದಂಡುಪಾಳ್ಯ-4' ಚಿತ್ರದ ಕಥೆಯಂತೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಸುಮನ್ ರಂಗನಾಥ್ ಅಭಿನಯಿಸುತ್ತಿದ್ದಾರೆ. ಸಿನಿಮಾದಲ್ಲಿ ಬರುವ ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಮುಮೈತ್ ಖಾನ್ ಬರ್ತಿದ್ದಾರೆ.
ಮುಮೈತ್ ಖಾನ್ ಅಂದ್ರೆ ಯಾರು ಅಂತ ಗೊತ್ತಲ್ವಾ.? ತೆಲುಗಿನ 'ಪೊಕಿರಿ', 'ಕೆವ್ವು ಕೇಕಾ' ಮುಂತಾದ ಚಿತ್ರಗಳ ಐಟಂ ಸಾಂಗ್ ಗಳಲ್ಲಿ ಸೊಂಟ ಬಳುಕಿಸಿದ್ದ ಮದನಾರಿ ಈ ಮುಮೈತ್ ಖಾನ್. ಐಟಂ ಸಾಂಗ್ ಗಳಿಂದಲೇ ಖ್ಯಾತಿ ಪಡೆದಿರುವ ಮುಮೈತ್ ಖಾನ್ ಇದೀಗ 'ದಂಡುಪಾಳ್ಯ-4' ಚಿತ್ರದ ಹಾಡೊಂದಕ್ಕೆ ಡ್ಯಾನ್ಸ್ ಮಾಡಲಿದ್ದಾರೆ. ಈಗಾಗಲೇ ಕನ್ನಡದಲ್ಲಿ 'ರಾಜಧಾನಿ' ಹಾಗೂ 'ಪೊರ್ಕಿ' ಐಟಂ ಸಾಂಗ್ ಗಳಲ್ಲಿ ಮುಮೈತ್ ಖಾನ್ ಸ್ಪೆಪ್ ಹಾಕಿದ್ದರು. ಇದೀಗ ಲಾಂಗ್ ಗ್ಯಾಪ್ ಬಳಿಕ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಅಂದ್ಹಾಗೆ, 'ದಂಡುಪಾಳ್ಯ-4' ಚಿತ್ರದಲ್ಲಿ ಸುಮನ್ ರಂಗನಾಥ್ ಜೊತೆಗೆ ತೆಲುಗು ನಟ ಸಂಜೀವ್, ವಿಠಲ್ ರಾಮದುರ್ಗ, ಮುಲೇಟ್ ಓಮು, ಸ್ನೇಹಾ, ರಿಚಾ ಶಾಸ್ತ್ರಿ, ಅರಣ್ ಬಚ್ಚನ್ ಅಭಿನಯಿಸುತ್ತಿದ್ದಾರೆ.