ಮಲಯಾಳಂನ ಸೂಪರ್ ಹಿಟ್ ದೃಶ್ಯಂ-2 ಚಿತ್ರದ ಕನ್ನಡ ರಿಮೇಕ್ ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಸಜ್ಜಾಗಿದ್ದಾರೆ. ರಾಜೇಂದ್ರ ಪೊನ್ನಪ್ಪ ಆಗಿ ರವಿಚಂದ್ರನ್ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಏಳು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ದೃಶ್ಯಂ ಸಿನಿಮಾದ ಮುಂದುವರೆದ ಭಾಗ ಇದಾಗಿದೆ. ಮಲಯಾಳಂನಲ್ಲಿ ಈಗಾಗಲೇ ದೃಶ್ಯಂ-2 ತೆರೆಗೆ ಬಂದು ಭರ್ಜರಿ ಸಕ್ಸಸ್ ಕಂಡಿದೆ. ಸದ್ಯ ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿದ್ದು, ಕನ್ನಡಕ್ಕು ಎಂಟ್ರಿ ಕೊಡುತ್ತಿದೆ.
ಮುಂದುವರೆಯಲಿದೆ ರಾಜೇಂದ್ರ ಪೊನ್ನಪ್ಪ ಕುತೂಹಲಕಾರಿ ಕತೆ: 'ದೃಶ್ಯ 2'ಗೆ ರವಿಚಂದ್ರನ್ ರೆಡಿ
Advertisement
Advertisement
ಮೊದಲ ಭಾಗದಲ್ಲಿ ರವಿಚಂದ್ರನ್, ನವ್ಯಾ ನಾಯರ್, ಅಚ್ಯುತ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಎರಡನೇ ಭಾಗದಲ್ಲೂ ಇವರೇ ಮುಂದುವರೆಯಲಿದ್ದು, ಇನ್ನು ಕೆಲವು ಕಲಾವಿದರು ಸೇರ್ಪಡೆಯಾಗುತ್ತಿದ್ದಾರೆ. ದೃಶ್ಯಂ-2ಗೆ ಕನ್ನಡದ ಮತ್ತೊಬ್ಬ ಖ್ಯಾತ ಕಲಾವಿದ ಪ್ರಮೋದ್ ಶೆಟ್ಟಿ ಸೇರ್ಪಡೆಗೊಂಡಿದ್ದಾರೆ. ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ರಿಮೇಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ಪ್ರಮೋದ್, ಪೊಲೀಸ್ ಅಧಿಕಾರಿ ಮುರಳಿ ಗೋಪಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೃಶ್ಯಂ-2ನಲ್ಲಿ ನಟಿಸಲು ಪ್ರಮೋದ್ ಶೆಟ್ಟಿ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಅಂದಹಾಗೆ ದೃಶ್ಯಂ-2ಗೆ ಪಿ ವಾಸು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಭಾಗ ಕೂಡ ಪಿ ವಾಸು ಸಾರಥ್ಯದಲ್ಲಿ ಮೂಡಿಬಂದಿತ್ತು.
ವೈರಲ್ ಆಗ್ತಿದೆ ವಿಜಯ್ ದೇವರಕೊಂಡ ರಶ್ಮಿಕಾಗೆ ಪ್ರಪೋಸ್ ಮಾಡ್ತಿರೋ ವಿಡಿಯೋ | Filmibeat Kannada
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಮುಂದಿನ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದ ಚಿತ್ರೀಕರಣ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. ರಾಜೇಂದ್ರ ಪೊನ್ನಪ್ಪ ಆಗ ರವಿಚಂದ್ರನ್ ಮತ್ತೆ ಅಭಿಮಾನಿಗಳ ಮನ ಗೆಲ್ಲುತ್ತಾರಾ? ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಹಾಗೆ ಕನ್ನಡದಲ್ಲೂ ದೃಶ್ಯಂ-2 ಸಕ್ಸಸ್ ಕಾಣುತ್ತಾ ಎಂದು ಕಾದುನೋಡಬೇಕು.