Don't Miss!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- News ಬೆಂಗಳೂರಿನಲ್ಲಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಅಕ್ಷಯ್ ಕುಮಾರ್ ಕೈಗೆ ಕುಟುಕಿದ ಚೇಳು
ಚಿತ್ರೀಕರಣದಲ್ಲಿ ಅವಗಡಗಳಾಗುವುದು ಸಾಮಾನ್ಯ. ಆದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಸೆಟ್ಸ್ನಲ್ಲಿ ಚೇಳು ಕುಟುಕಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ "ಖತ್ರನ್ ಕೆ ಖಿಲಾಡಿ ಸೀಸನ್ 4" ಚಿತ್ರೀಕರಣದಲ್ಲಿ ಈ ಘಟನೆ ನಡೆದಿದೆ. ಚೇಳು ಕಡಿತದ ಬಳಿಕ ಸುಧಾರಿಸಿಕೊಂಡು ಅಕ್ಷಯ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗಿ ಸುದ್ದಿ.
ಕಲರ್ಸ್ ವಾಹಿನಿಗಾಗಿ ಈ ಕಾರ್ಯಕ್ರಮ ಚಿತ್ರೀಕರಿಸಲಾಗುತ್ತಿತ್ತು. "ಅವರ ಎಡಗೈ ತೋರು ಬೆರಳಿಗೆ ಚೇಳು ಕುಟುಕಿದೆ" ಎಂದು ವಾಹಿನಿ ತಿಳಿಸಿದೆ. ಚೇಳು ಕಡಿತದಿಂದ ಅಸಾಧ್ಯ ನೋವು ಅನುಭವಿಸಿದ ಅಕ್ಕಿ ಬಳಿಕ ನಂಜು ನಿರೋಧಕ ದ್ರವ ಲೇಪನವನ್ನು ನಾಲ್ಕು ಬಾರಿ ಹಚ್ಚಿಕೊಂಡು ನೋವು ಶಮನಕ್ಕೆ ಹರಸಾಹಸ ಪಟ್ಟಿದ್ದಾರೆ. ಆದರೂ ನೋವು ಮಾತ್ರ ಇನ್ನೂ ಕಾಡುತ್ತಿದೆಯಂತೆ.
ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ 10 ನಿಮಿಷಗಳ ಕಾಲ ಮಂಜುಗಡ್ಡೆ ಇಟ್ಟು ತಣ್ಣಗೆ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತೆ ಮತ್ತೆ ಆಯಿಂಟ್ಮೆಂಟ್ ಹಚ್ಚಿ ಆರೈಕೆ ಮಾಡಲಾಯಿತು. ಅಸಾಧ್ಯ ನೋವಿನ ನಡುವೆಯೂ ಚಿತ್ರೀಕರಣ ಮುಗಿಸಿದ್ದಾಗಿ ಕಲರ್ಸ್ ವಾಹಿನಿ ತಿಳಿಸಿದೆ. "ಈಗಷ್ಟೇ ಕೇಪ್ ಟೌನ್ನಲ್ಲಿ ಚೇಳು ಕುಟುಕಿತು. ಅಬ್ಬಬ್ಬಾ ಎಂಥಾ ಚೇಳು ಎಂಥಾ ಕಡಿತಾ ಅಂತೀರಾ!" ಎಂದು ಅಕ್ಕಿ ಟ್ವೀಟ್ ಮಾಡಿದ್ದಾರೆ.