ಅಯೋಧ್ಯೆ ತೀರ್ಪು; ಶಾರುಖ್ ಖಾನ್ ಫುಲ್ ಖುಷ್
ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ತೀರ್ಪಿಗೆ ಬಾಲಿವುಡ್ ಜಿಂದಾಬಾದ್ ಹೇಳಿದ ಬೆನ್ನಲ್ಲೇ ಕಿಂಗ್ ಖಾನ್ ಶಾರುಖ್ ಖಾನ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವುದಾಗಿ ಹೇಳಿರುವ ಅವರು ಜನತೆಯ ಶಾಂತಿ, ಸಂಯಮವನ್ನು ಕೊಂಡಾಡಿದ್ದಾರೆ.
"ವಿವಾದಿತ ಭೂಮಿಯನ್ನು ಸಮವಾಗಿ ಹಂಚಿರುವುದು ಎಲ್ಲ ಧರ್ಮಗಳ ನಂಬಿಕೆಗಳನ್ನು ಸಮವಾಗಿ ಸ್ವೀಕರಿಸಿದಂತಾಗಿದೆ. ಈ ಸಂದರ್ಭದಲ್ಲಿ ಜನತೆ ತೋರಿದ ಸಂಯಮ ಮೆಚ್ಚತಕ್ಕದ್ದು " ಹಾಗಂತ ಟ್ವಿಟ್ಟರ್ ಪುಟಗಳಲ್ಲಿ ಶಾರುಖ್ ಬರೆದುಕೊಂಡಿದ್ದಾರೆ.
"ಹೃದಯವನ್ನು ಮೂರು ಭಾಗಗಳಾಗಿ ವಿಂಗಡಿಸಿದರೆ. ಒಂದು ಭಾಗ ಕುಟುಂಬಕ್ಕೆ, ಒಂದು ಭಾಗ ಕೆಲಸಕ್ಕೆ ಮತ್ತೊಂದು ಭಾಗ ರಕ್ತ ಪಂಪ್ ಮಾಡಲು ಎಂದು ಅವರು ಅಯೋಧ್ಯೆ ತೀರ್ಪನ್ನು ವಿಶ್ಲೇಷಿಸಿದ್ದಾರೆ. ಒಟ್ಟಿನಲ್ಲಿ ಎಲ್ಲರಿಗೂ ಪಾಸಿಂಗ್ ಮಾರ್ಕ್ಸ್ ನೀಡಿ ದೇಶಕ್ಕಾಗಿ ಹೃದಯ ಮಿಡಿಯುವಂತೆ ಮಾಡಿದ್ದಾರೆ" ಎಂದು ಟ್ವೀಟ್ಟರ್ ನಲ್ಲಿ ಟುವ್ವಿ ಟುವ್ವಿ ಹಾಡಿದ್ದಾರೆ.
More from Filmibeat
ಶಾರುಖ್ ಖಾನ್ ಅಯೋಧ್ಯೆ ವಿವಾದ ಅಲಹಾಬಾದ್ ಹೈಕೋರ್ಟ್ ಬಾಬ್ರಿ ಮಸೀದಿ ವಿವಾದ ಟ್ವಿಟ್ಟರ್ ayodhya verdict shahrukh khan twitter babri masjid


Click it and Unblock the Notifications











