Don't Miss!
- Finance ಲೋಕಸಭಾ ಚುನಾವಣೆ ಟಿಕೆಟ್ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸಂಸದ?
- News ಕೋಲಾರ ಟಿಕೆಟ್ ಗಾಗಿ ಫೈಟಿ; ಶಾಸಕರ ರಾಜೀನಾಮೆ ಎಚ್ಚರಿಕೆ - ಡಿಕೆ ಶಿವಕುಮಾರ್ ಏನಂದ್ರು?
- Technology ಇಂದು ಪೊಕೊ C61 ಫೋನಿನ ಫಸ್ಟ್ ಸೇಲ್!..ಬೆಲೆ, ಆಫರ್ ಮಾಹಿತಿ ಇಲ್ಲಿದೆ
- Lifestyle ಕೈಗೆ ಹಿಡಿದ ಬಣ್ಣ ತೆಗಿಯೋದು ತುಂಬಾ ಸಿಂಪಲ್..! ಇಂಥಾ ಪ್ರತಿಭೆ ನೀವೆಲ್ಲೂ ನೋಡಿರಲ್ಲ..!
- Automobiles Bajaj: ಯುವಕರ ಮನಗೆದ್ದಿರುವ ಪಲ್ಸರ್ ಬೈಕ್ಗಳಿವು, ಬೆಲೆ ರೂ.2 ಲಕ್ಷದೊಳಗೆ.. 50 ಕಿ.ಮೀಗಿಂತ ಹೆಚ್ಚಿನ ಮೈಲೇಜ್
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಟಿಂಗ್ ಆಪರೇಷನ್ ಕರಾಳ ಮುಖ ಬಯಲಿಗೆ
ಮುಂಬೈ, ಅ.04 : ಸಮಾಜದ ಕೊಳಕನ್ನು ಬಯಲಿಗೆಳೆಯುವ 'ಕುಟುಕು ಕಾರ್ಯಾಚರಣೆ'ಯಲ್ಲಿರುವ ಹುಳುಕುಗಳನ್ನೇ ಬಯಲಿಗೆಳೆಯುವ ವಸ್ತುವಿನ ಚಿತ್ರ ಅಕ್ಟೋಬರ್ 5ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ.
ಅನಿಮಾ ಫಿಲಂಸ್ 'ಇಟ್ಸ್ ಬ್ರೆಕಿಂಗ್ ನ್ಯೂಸ್' ಎಂಬ ಚಿತ್ರ ತಯಾರಿಸಿದ್ದು ಸೇವಾಮನೋಭಾವ ಹೊಂದಿದ್ದ ಪತ್ರಿಕೋದ್ಯಮ ಈಗ ನಂಬಿಕಾರ್ಹತೆ ಕಳೆದುಕೊಳ್ಳುತ್ತಿದ್ದು ಕೇವಲ ವ್ಯಾಪಾರವಾಗಿ ಉಳಿದಿದೆ ಎಂಬ ವಾದವನ್ನು ಮುಂದಿಟ್ಟಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಬವಾಗಿರುವ ಪತ್ರಿಕೋದ್ಯಮ ವೃತ್ತಿಪರತೆಯನ್ನು ಕಳೆದುಕೊಳ್ಳುತ್ತ ಸುದ್ದಿಯ ಸತ್ಯಾಸತ್ಯತೆಯನ್ನು ಬದಿಗಿಟ್ಟು ಸುದ್ದಿಯನ್ನು ಹುಟ್ಟುಹಾಕುವತ್ತ ತನ್ನ ಶ್ರಮವನ್ನು ಸವಿಸುತ್ತಿದೆ ಎಂಬ ಸಂದೇಶವನ್ನು ಈ ಚಿತ್ರ ಹೊಂದಿದೆ.
ವಿದ್ಯಾ ಎಂಬ ಯುವ ಪತ್ರಕರ್ತೆ ಪತ್ರಿಕೋದ್ಯಮ ಪ್ರವೇಶಿಸಿದ ಹುಮ್ಮಸ್ಸಿನಲ್ಲಿ ಕೊಳಕು ಸಮಾಜದ ಚಕ್ರವ್ಯೂಹದಲ್ಲಿ ಸಿಲುಕಿ ಹೋರಾಡಿ ಹೊರಬರುವ ಹೊತ್ತಿಗೆ ಆ ಕೊಳಕು ಸಮಾಜದ ಅವಿಭಾಜ್ಯ ಅಂಗವೇ ಆಗಿರುತ್ತಾಳೆ ಎಂಬುದು ಚಿತ್ರದ ತಿರುಳು. ವಿಶಾಲ್ ಇನಾಂದಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
'ನಜರ್' ಚಿತ್ರದಲ್ಲಿ ಅಶ್ಮಿತ್ ಪಟೇಲ್ ಜೊತೆ ಮೈಬಿಸಿಯಾಗುವಂತೆ ಅಭಿನಯಿಸಿದ್ದ ಕೋಯೆಲ್ ಪುರಿ ಈ ಚಿತ್ರದಲ್ಲಿ ಹೆಸರುಗಳಿಸುವ ಹುಮ್ಮಸ್ಸಿನಲ್ಲಿ ಪತ್ರಿಕೋದ್ಯಮದ ನೈತಿಕತೆಯನ್ನು ಗಾಳಿಗೆ ತೂರಿ ಸುದ್ದಿ ಹುಟ್ಟುಹಾಕುವ ಪತ್ರಕರ್ತೆಯಾಗಿ ನಟಿಸಿದ್ದಾರೆ. ಉಳಿದ ತಾರಾಗಣದಲ್ಲಿ ಅಭಿಮನ್ಯು ಸಿಂಗ್, ಸ್ವಾತಿ ಸೇನ್, ಅತುಲ್ ಪರ್ಚುರೆ, ಹರ್ಷ ಛಾಯಾ ಮುಂತಾದವರು ಅಭಿನಯಿಸಿದ್ದಾರೆ.
(ಯುಎನ್ಐ)