Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳೆ ಹುಲಿ ಠಾಕ್ರೆ ಜೊತೆ ನಟ ರಜನಿಕಾಂತ್ ಭೇಟಿ
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಂಗಳವಾರ (ಅ.5) ಮುಂಬೈನಲ್ಲಿ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಯನ್ನು ಭೇಟಿ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿದರು. ಮಹಾರಾಷ್ಟ್ರದಲ್ಲಿ ರಜನಿಕಾಂತ್ ಅಭಿನಯದ ರೋಬೋಟ್ (ಎಂಧಿರನ್ ಹಿಂದಿ ಅವತರಣಿಕೆ) ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿರುರುವ ಹಿನ್ನೆಲೆಯಲ್ಲಿ ರಜನಿ ಮತ್ತು ಠಾಕ್ರೆ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ.
ಮುಂಬೈ ಬಾಂದ್ರಾ ಪ್ರದೇಶದಲ್ಲಿರು ಠಾಕ್ರೆ ನಿವಾಸಕ್ಕೆ ರಜನಿಕಾಂತ್ ಇಂದು ಭೇಟಿ ನೀಡಿದರು. ಬಳಿಕ ರಜನಿಕಾಂತ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಇದು ಕೇವಲ ಔಪಚಾರಿಕ ಭೇಟಿ ಅಷ್ಟೆ ಎಂದರು. ಬಳಿಕ ಶಿವಸೇನೆಯ ಮುಖ್ಯಸ್ಥ ಬಾಳಾ ಠಾಕ್ರೆ ಅವರನ್ನು ದೇವರಿಗೆ ಹೋಲಿಸಿ ಅಭಿವರ್ಣಿಸಿದರು.
ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬಾಳಾ ಠಾಕ್ರೆ ಆಗಾಗ ರಜನಿಕಾಂತ್ ಅವರನ್ನು ಹಾಡಿ ಹೊಗಳುವುದು ಸಾಮಾನ್ಯ. ಬಾಲಿವುಡ್ ತಾರೆಗಳು ರಜನಿಕಾಂತ್ ಅವರಿಂದ ಕಲಿಯುವುದು ಬಹಳಷ್ಟಿದೆ. ರಜನಿಕಾಂತ್ ಅವರ ಹೋರಾಟ ಮನೋಭಾವವನ್ನು ಬಾಲಿವುಡ್ ತಾರೆಗಳು ರೂಢಿಸಿಕೊಳ್ಳಬೇಕು ಎಂದು ಸಾಮ್ನಾದಲ್ಲಿ ಕಿವಿ ಮಾತು ಹೇಳಿದ್ದರು.
ಮೂಲತಃ ರಜನಿಕಾಂತ್ ಮಹಾರಾಷ್ಟ್ರಿಗ ಎಂಬುದು ಒಪ್ಪತಕ್ಕ ಮಾತು. ತಮ್ಮ ವಿಭಿನ್ನ ಶೈಲಿ ಹಾಗೂ ನಟನೆಯಿಂದ ತಮಿಳರ ಆರಾಧ್ಯದೈವವಾಗಿ ರಜನಿಕಾಂತ್ ಬೆಳದದ್ದು ಮಾತ್ರ ಇತಿಹಾಸ. ತಮಿಳುನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಜನಿಯನ್ನು ಠಾಕ್ರೆ ಅಭಿನಂದಿಸಿರುವುದು ಮರಾಠಿಗರನ್ನು ಅಚ್ಚರಿಗೊಳಿಸಿದೆ.