Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧೋನಿ ದಿಢೀರ್ ಮದುವೆಗೆ ಕಾರಣ ಜೋತಿಷ್ಯವಲ್ಲ ಗುರು!
ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಾರಾತುರಿಯಲ್ಲಿ ಮದುವೆಯಾಗಿದ್ದು ಯಾಕೆ? ಇದಕ್ಕೆ ಜೋತಿಷ್ಯ ಕಾರಣವೆ? ಮುಂದಿನ ದಿನಗಳಲ್ಲಿ ಬಿಡುವಿಲ್ಲದ ಕ್ರಿಕೆಟ್ ಪಂದ್ಯಾವಳಿಗಳಿರುವುದೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಧೋನಿ ದಿಢೀರ್ ಮದುವೆಗೆ ಇದ್ಯಾವುದೂ ಕಾರಣವಲ್ಲ ಎಂಬ ಮಹತ್ವದ ಸಂಗತಿ ಬಹಿರಂಗವಾಗಿದೆ!
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡುವಿನ ಕಣ್ಣಾಮುಚ್ಚಾಲೆಯೇ ಧೋನಿ ದಿಢೀರ್ ಮದುವೆಯಾಗಲು ಕಾರಣ ಎನ್ನಲಾಗಿದೆ. ಅಷ್ಟೆ ಅಲ್ಲದೆ ಬಾಲಿವುಡ್ ನ ಹಲವಾರು ಮಂದಿ ನಟಿಯರೊಂದಿಗೆ ಧೋನಿ ಕಾಣಿಸಿಕೊಳ್ಳುತ್ತಿದ್ದರು. ವಿಷಯ ಗಂಭೀರವಾಗುವುದಕ್ಕೂ ಮುನ್ನ ಧೋನಿಯನ್ನು ಗೃಹಸ್ಥಾಶ್ರಮಕ್ಕೆ ಸೇರಿಸಬೇಕು ಎಂದು ಅವರ ಮನೆಯವರು ತೀರ್ಮಾನಿಸಿದ್ದರು.
ಇದರ ಪರಿಣಾಮವೆ ಸಾಕ್ಷಿ ಸಿಂಗ್ ರಾವತ್ ಜೊತೆಗೆ ಸಪ್ತಪದಿ. ರಾತ್ರೋರಾತ್ರಿ ಧೋನಿಗೆ ಮದುವೆ ಶಾಸ್ತ್ರ ಮಾಡಿ ಮುಗಿಸಿದರು. ಡೆಹ್ರಾಡೂನ್ ನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಬೆರಳೆಣಿಕೆಯಷ್ಟು ಮಂದಿಯನ್ನು ಮಾತ್ರ ಆಹ್ವಾನಿಸಲಾಗಿತ್ತು. ಸಾಕ್ಷಿ ಹಾಗೂ ಧೋನಿ ಮನೆಯವರು ಗುಟ್ಟಾಗಿ ಮದುವೆ ಮಾಡಿ ಮುಗಿಸಿದ್ದು ಮಾಧ್ಯಮಗಳಲ್ಲಿ ರಟ್ಟಾಯಿತು.
ಅದರಲ್ಲೂ ಮುಖ್ಯಮಾಗಿ ದೀಪಿಕಾ ಜೊತೆ ಕಾಣಿಸಿಕೊಂಡ ಧೋನಿ ಸಾಕಷ್ಟು ಸುದ್ದಿ ಮಾಡಿದ್ದರು. ದಿನಕ್ಕೊಬ್ಬಳು ಬಾಲಿವುಡ್ ನಟಿಯ ಜೊತೆ ಧೋನಿ ಕಾಣಿಸಿಕೊಳ್ಳುತ್ತಿದ್ದ. ಮಗ ದಾರಿ ತಪ್ಪುತ್ತಿದ್ದಾನೆ ಎಂದು ತಿಳಿದ ಧೋನಿ ಮನೆಯವರು ದಿಢೀರ್ ಅಂತ ಮದುವೆ ಮಾಡಿ ಮುಗಿಸಿದ್ದಾರೆ.
ಭಾರತದ ಕ್ರಿಕೆಟ್ ತಂಡದ ನಾಯಕನ ಮದುವೆ ಎಂದರೆ ಅದ್ದೂರಿಯಾಗಿ ನಡೆಯುತ್ತದೆ ಎಂಬ ಊಹೆ ಸಹಜವಾಗಿ ಎಲ್ಲರಿಗೂ ಇರುತ್ತದೆ. ಹೀಗೆ ಏಕಾಏಕಿ ದಿಢೀರ್ ಮದುವೆ ನಡೆದು ಹೋದರೆ ಎಂಥವರಿಗೂ ಅನುಮಾನ ಬಾರದೆ ಇರದು ಅಲ್ಲವೆ? ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ. ನೀವೇನಂತೀರಾ?