Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಥಿಕ ಬಿಕ್ಕಟ್ಟಿನಲ್ಲೂ ಬಾಲಿವುಡ್ ಜೂಜಾಟ
ಮುಂಬೈ ಭಯೋತ್ಪಾದನೆ ದಾಳಿಯ ನಂತರ ಮತ್ತೆ ಸಹಜ ಸ್ಥಿತಿಗೆ ಕನಸಿನ ನಗರಿ ಮುಂಬೈ ಮರಳುತ್ತಿರುವುದು ಸಿನಿಮಾ ಮಂದಿಗೆ ಆಶಾದಾಯಕವಾಗಿದೆ ತೋರಿದರು. ಥಿಯೇಟರ್ ನಲ್ಲಿ ಯಾವ ಸಿನಿಮಾ ಕೂಡ ವಾರದ ಮೇಲೆ ನಿಲ್ಲುತ್ತಿಲ್ಲವಂತೆ. ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿ ಪ್ರದರ್ಶನ ರದ್ದಾದ ಘಟನೆಗಳು ನಡೆದಿದೆ. ಇದೆಲ್ಲದರ ನಡುವೆ ಮುಂಬರುವ ವಾರದಲ್ಲಿ ಸುಮಾರು 225 ಕೋಟಿ ರು ನಷ್ಟು ಹಣ ಹೂಡಿಕೆಯಳ್ಳ ಚಿತ್ರಗಳ ಜೊತೆಗೆ ಜೂಜಾಟವಾಡುತ್ತಿದೆ ಮುಂಬೈ ಸಿನಿ ಪ್ರಪಂಚ.
ಕಳೆದ ನಾಲ್ಕೈದು ವಾರಗಳಲ್ಲಿ ತೆರೆಕಂಡ ಓಯೆ ಲಕ್ಕಿ ಲಕ್ಕಿ ಓಯೆ, ಸಾರಿ ಭಾಯ್, ಮಹಾರಥಿ, ದಿಲ್ ಕಬಡ್ಡಿ, ಮೀರಾ ಭಾಯ್ ನಾಟ್ ಔಟ್(ಅನಿಲ್ ಕುಂಬ್ಳೆ ನಟನೆಯ), ಓ ಮೈ ಗಾಡ್ ಚಿತ್ರಗಳು ಇನ್ನಿಲ್ಲದಂತೆ ನೆಲಕಚ್ಚಿವೆ. ಇರೋದರಲ್ಲಿ ದೋಸ್ತಾನಾ ಸ್ವಲ್ಪ ಗಳಿಕೆಯತ್ತ ಹೆಜ್ಜೆ ಹಾಕಿದೆ. ಯುವರಾಜ ಕೂಡ ಸಾಧಾರಣ ಗತಿಯಲ್ಲಿ ಸಾಗಿದೆ.
ಈ ಚಿತ್ರಗಳು ಅಕಸ್ಮಾತ್ ತೋಪೆದ್ದರೆ ನಿಜಕ್ಕೂ ಬಾಲಿವುಡ್ ಮಂದಿಗೆ ಭಾರಿ ಹೊಡೆತ ಗ್ಯಾರಂಟಿ. 225 ಕೋಟಿ ರು ಜತೆಗೆ ಶಾರುಖ್ , ಅಮೀರ್ ಗೆ ಪ್ರತಿಷ್ಠೆಗೆ ದಕ್ಕೆ ಉಂಟಾಗುವುದಂತೂ ಖಂಡಿತ. ಇನ್ನೊಂದು ವಿಷ್ಯ ರಬ್ ನೆ ಬನಾದಿ ಜೋಡಿಯ ಅನುಷ್ಕಾ, ಚಾಂದಿನಿ ಚೌಕ್ ನ ದೀಪಿಕಾ ಬೆಂಗಳೂರು ಮೂಲದವರು ಎಂಬುದು ಸಿನಿರಸಿಕರಿಗೆ ಗೊತ್ತೇ ಇದೆ. ಇವರಿಬ್ಬರ ವೃತ್ತಿ ಜೀವನಕ್ಕೆ ಈ ಚಿತ್ರಗಳು ಯಶಸ್ವಿಯಾಗುವುದು ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ಸಿನಿ ಕಾರ್ಮಿಕರಿಗೆ ಮುಂಬೈ ಸಿನಿಲೋಕದಲ್ಲಿ ಜೀವನ ಚಕ್ರ ಸರಾಗವಾಗಿ ಸಾಗಿಸಬೇಕಾದರೆ ಚಿತ್ರಗಳು ಹಿಟ್ ಆಗಲೇ ಬೇಕು.