Don't Miss!
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಬಾ ರಾಮದೇವ್ ಪಂಚೆ ತೊಟ್ಟ ಸಂಜು ಬಾಬಾ
ನಿರ್ದೇಶಕ ಮಣಿಶಂಕರ್ ಗೆ ಥಟ್ಟನೆ ಜ್ಞಾನೋದಯವಾಗಿದೆ. ಬಾಬಾ ರಾಮದೇವ್ ಅವರ ಒಡನಾಟ ಹೊಂದಿರುವ ಮಣಿಗೆ ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಆಮರಣಾಂತ ಉಪವಾಸ ಹಾಗೂ ಇತ್ತೀಚೆಗೆ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಘಟನೆಗಳು ಚಿತ್ರಕಥೆಗೆ ಸ್ಪೂರ್ತಿ ನೀಡಿದೆ.
ಬಾಬಾ ರಾಮದೇವ್ ಅವರನ್ನು ನಾಯಕನನ್ನಾಗಿ ಕಪ್ಪು ಹಣ ವಿರುದ್ಧ ಬೆಳ್ಳಿತೆರೆಯ ಮೂಲಕ ಸಮರ ಸಾರಲು ಮಣಿ ಸಿದ್ಧತೆ ನಡೆಸಿದ್ದಾರೆ. ಯೋಗ ಗುರು ಬಾಬಾ ರಾಮದೇವ್ ಪಾತ್ರಕ್ಕೆ ಖಳನಾಯಕ್ ಖ್ಯಾತಿಯ ಸಂಜು ಬಾಬಾ ಯಾನೆ ಸಂಜಯ್ ದತ್ ಅವರನ್ನು ಆರಿಸಿಕೊಂಡಿದ್ದಾರೆ.
'ಈಗಾಗಲೇ ಚಿತ್ರಕ್ಕೆ ಸಂಜಯ್ ದತ್ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿದ್ದೇನೆ. ಆದರೆ ನಟನಿಗೆ ಯಾವುದೇ ವಿಷಯ ತಿಳಿಸಿಲ್ಲ. ಆತ ನನ್ನ ಮಾತನ್ನು ತಳ್ಳಿ ಹಾಕುವುದಿಲ್ಲ. ಚಿತ್ರದ ಕಥೆ ಆ ರೀತಿ ಹೆಣೆಯಲಾಗಿದೆ' ಎಂದು ಮಣಿಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಬಾ ನಿರಶನವು ಪ್ರಮುಖ ಘಟ್ಟ ತಲುಪುತ್ತಿದ್ದಂತೆ ನೇರವಾಗಿ ರಾಮಲೀಲಾ ಮೈದಾನದಲ್ಲಿ ಝಂಡಾ ಊರಿದನಿರ್ದೇಶಕ ಮಣಿ, ಅಲ್ಲಿನ ಪ್ರತಿಯೊಂದು ಘಟನೆಯನ್ನೂ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರಂತೆ. ಹಾಗಾಗಿ ಚಿತ್ರದಲ್ಲಿ ಎಲ್ಲವೂ ರಿಯಲ್ ಆಗಿ ದೃಶ್ಯಗಳನ್ನು ಕಾಣ ಬಹುದಾಗಿದೆ.
ಈ ಹಿಂದೆ ವಿದೇಶಿ ಬ್ಯಾಂಕುಗಳಲ್ಲಿನ ಹಣ ವಾಪಸಾತಿ ಕುರಿತಾದ 'ನಾಕ್ ಔಟ್" ಎಂಬ ಚಿತ್ರ ನಿರ್ದೇಶಿಸಿದ್ದ ಮಣಿ, ಚಿತ್ರದಲ್ಲಿ ರಾಜಕಾರಣಿಗಳೆಲ್ಲರ ವಿದೇಶಿ ಹಣ ವಾಪಸಾತಿಗಾಗಿ ಬೇಡಿಕೆ ಇಟ್ಟಿರುವುದನ್ನು ನೆನಪಿಸಿಕೊಳ್ಳುತ್ತಾರೆ. ಇದೀಗ ರಾಮದೇವ್ ನಡೆಸುತ್ತಿರುವ ಹೋರಾಟ ಅದೇ ಉದ್ದೇಶಕ್ಕಾಗಿದೆ. ಹಾಗಾಗಿ ಅವರ ಬಗ್ಗೆ ಚಿತ್ರ ನಿರ್ಮಿಸಲು ನನಗೆ 'ಕೆಒ" (ನಾಕ್ ಔಟ್) ಪ್ರೇರಣೆಯಾಗಿದೆ ಎಂದಿದ್ದಾರೆ.