Don't Miss!
- News ಧಾರವಾಡ: ದಿಂಗಾಲೇಶ್ವರ ಶ್ರೀಗಳ ಬೆನ್ನಿಗೆ ನಿಂತ 'ವೀರಶೈವ ಲಿಂಗಾಯತ ಮಹಾಸಭಾ'
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸ್ಕರ್ಗೆ ತೆರಳಲು ಪೈಪೋಟಿಗೆ ಬಿದ್ದಿವೆ 14 ಭಾರತೀಯ ಸಿನಿಮಾಗಳು
94ನೇ ಆಸ್ಕರ್ ಪ್ರಶಸ್ತಿ ಇದೇ ಏಪ್ರಿಲ್ನಲ್ಲಿ ಮುಗಿದಿದೆ. ಇದೀಗ 95ನೇ ಆಸ್ಕರ್ನತ್ತ ದೃಷ್ಟಿ ನೆಟ್ಟಿದೆ. ವಿಶ್ವದ ಅತ್ಯುನ್ನತ ಸಿನಿಮಾ ಪ್ರಶಸ್ತಿ ಎಂದೇ ಗುರುತಿಸಲಾಗುವ ಆಸ್ಕರ್ಗೆ ಈ ಬಾರಿ ಭಾರತದಿಂದ ಹೋಗುವ ಅಧಿಕೃತ ಸಿನಿಮಾ ಯಾವುದು ಎಂಬ ಬಗ್ಗೆ ಹುಡುಕಾಟ ಆರಂಭವಾಗಿದೆ.
14 ಸಿನಿಮಾಗಳು ಈ ಬಾರಿ ಆಸ್ಕರ್ಗೆ ಭಾರತದಿಂದ ಅಧಿಕೃತವಾಗಿ ರವಾನೆಯಾಗಲು ಪರಸ್ಪರ ಸ್ಪರ್ಧೆಗೆ ಇಳಿದಿವೆ. ಅದರಲ್ಲಿ ಎರಡಷ್ಟೆ ದಕ್ಷಿಣ ಭಾರತದ ಸಿನಿಮಾಗಳಿವೆ. ಕನ್ನಡದ ಯಾವೊಂದು ಸಿನಿಮಾ ಸಹ ಸ್ಪರ್ಧೆಯಲ್ಲಿಲ್ಲ.
ಕುಂಚಾಕೊ ಬೋಬನ್, ಜೋಜು ಜಾರ್ಜ್, ನಿಮಿಷಾ ಸಜಯನ್ ನಟಿಸಿ, ಮಾರ್ಟಿನ್ ಪ್ರಕ್ಕಟ್ ನಿರ್ದೇಶಿಸಿರುವ ಮಲಯಾಳಂ ಸಿನಿಮಾ 'ನಾಯಟ್ಟು', ಯೋಗಿಬಾಬು ನಟಿಸಿ, ಮಡೊನೆ ಅಶ್ವಿನ್ ನಿರ್ದೇಶಿಸಿರುವ ತಮಿಳು ಸಿನಿಮಾ 'ಮಂಡೇಲಾ', ವಿದ್ಯಾ ಬಾಲನ್ ನಟಿಸಿರುವ ಹಿಂದಿಯ 'ಶೇರ್ನಿ', ವಿಕ್ಕಿ ಕೌಶಲ್ ನಟಿಸಿ ಇತ್ತೀಚೆಗಷ್ಟೆ ಬಿಡುಗಡೆ ಆದ 'ಸರ್ದಾರ್ ಉದ್ಧಮ್ ಸಿಂಗ್', ಅಸ್ಸಾಮ್ನ 'ಬ್ರಿಡ್ಜ್', ಗುಜರಾತಿ ಸಿನಿಮಾ 'ಚೆಲ್ಲ ಶೋ' ಇನ್ನೂ ಕೆಲವು ಸಿನಿಮಾಗಳು ಸ್ಪರ್ಧೆಯಲ್ಲಿವೆ.
ಆಯ್ಕೆ ಆಗಿರುವ 14 ಸಿನಿಮಾಗಳನ್ನು 15 ಮಂದಿಯ ಸಿನಿಮಾಕರ್ಮಿಗಳ ಪ್ಯಾನೆಲ್ ವೀಕ್ಷಿಸಿ ಒಂದು ಸಿನಿಮಾವನ್ನು ಆಯ್ಕೆ ಮಾಡಿ 95ನೇ ಆಸ್ಕರ್ಗೆ ಭಾರತದ ಅಧಿಕೃತ ಆಯ್ಕೆಯಾಗಿ ಕಳಿಸಲಿದೆ. ಸಿನಿಮಾ ವೀಕ್ಷಣೆ ಕೊಲ್ಕತ್ತದಲ್ಲಿ ನಡೆಯಲಿದೆ. ಆಸ್ಕರ್ ಅಂಗಳದಲ್ಲಿ ಮತ್ತೊಮ್ಮೆ ವಿಮರ್ಶೆಗೊಳಪಡುವ ಸಿನಿಮಾಗಳು ಕೆಲವು ವಿಭಾಗಗಳನ್ನು ದಾಟಿ ಅಂತಿಮ ನಾಲ್ಕರ ಘಟ್ಟಕ್ಕೆ ಆಯ್ಕೆ ಆಗಿ ಅವುಗಳಲ್ಲಿ ಒಂದನ್ನು ಅತ್ಯುತ್ತಮ ವಿದೇಶಿ ಸಿನಿಮಾ ಅಥವಾ ಅತ್ಯುತ್ತಮ ಸಿನಿಮಾ ಎಂದು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ವರ್ಷ ಭಾರತದಿಂದ ಮಲಯಾಳಂನ 'ಜಲ್ಲಿಕಟ್ಟು' ಸಿನಿಮಾ ಅಧಿಕೃತ ಸಿನಿಮಾವಾಗಿ ಆಸ್ಕರ್ ಪ್ರವೇಶಿಸಿತ್ತು. ಆದರೆ ಅಂತಿಮ ನಾಲ್ಕರ ಘಟ್ಟಕ್ಕೆ ಆಯ್ಕೆಯಾಗಲು ವಿಫಲವಾಗಿತ್ತು.
ಈ ಬಾರಿಯ ಆಯ್ಕೆ ಸಮಿತಿಯ ನಾಯಕತ್ವವನ್ನು ನಿರ್ದೇಶಕ ಶಾಜಿ ಎನ್ ಕರುಣ್ ವಹಿಸಿಕೊಂಡಿದ್ದಾರೆ. ಅವರ ಮುಂದಾಳತ್ವದ 15 ಮಂದಿಯ ತಂಡವು ಈ 14 ರಲ್ಲಿ ಒಂದು ಅತ್ಯುತ್ತಮ ಸಿನಿಮಾವನ್ನು ಆಯ್ಕೆ ಮಾಡಲಿದೆ. ಪಟ್ಟಿಯಲ್ಲಿ ತಮಿಳಿನ 'ಕರ್ಣನ್' ಸಿನಿಮಾ ಇಲ್ಲದೇ ಇರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತದ ಮೊದಲ ಆಸ್ಕರ್ ವಿಜೇತ ಸತ್ಯಜಿತ್ ರೇ ಅವರ ಜನ್ಮ ಶತಮಾನೋತ್ಸವ ಈ ವರ್ಷ ಆಚರಿಸಲಾಗುತ್ತಿದೆ. ಹಾಗಾಗಿ ಈ ಬಾರಿ ಆಸ್ಕರ್ ಆಯ್ಕೆ ಕೊಲ್ಕತ್ತದಲ್ಲಿ ನಡೆಯುತ್ತಿದೆ.
ಭಾರತದ 'ಮದರ್ ಇಂಡಿಯಾ', 'ಸಲಾಂ ಬಾಂಬೆ', 'ಲಗಾನ್' ಸಿನಿಮಾಗಳಷ್ಟೆ ಈವರೆಗೆ ಆಸ್ಕರ್ನ ಅಂತಿಮ ನಾಲ್ಕರ ಘಟಕ್ಕೆ ತಲುಪಲು ಯಶಸ್ವಿಯಾಗಿವೆ. ಇನ್ನಾವ ಭಾರತೀಯ ಸಿನಿಮಾಗಳು ಆಸ್ಕರ್ಗೆ ಈವರೆಗೆ ನಾಮಿನೇಟ್ ಆಗಿಲ್ಲ. ಕಮಲ್ ಹಾಸನ್ ನಟಿಸಿರುವ ಆರು ಸಿನಿಮಾಗಳು ಈವರೆಗೆ ಆಸ್ಕರ್ಗೆ ಕಳಿಸಲ್ಪಟ್ಟಿವೆ. ಸತ್ಯಜಿತ್ ರೇ ಅವರ ಮೂರು ಸಿನಿಮಾಗಳು ಆಸ್ಕರ್ಗೆ ಕಳಿಸಲ್ಪಟ್ಟಿವೆ. ಅಮೀರ್ ಖಾನ್ರ ನಾಲ್ಕು ಸಿನಿಮಾಗಳು ಆಸ್ಕರ್ಗೆ ಅರ್ಹತೆ ಗಿಟ್ಟಿಸಿಕೊಂಡಿವೆ. 'ಲಗಾನ್' ಸಿನಿಮಾ ಅಂತಿಮ ನಾಲ್ಕರ ಘಟ್ಟಕ್ಕೆ ಆಯ್ಕೆ ಸಹ ಆಗಿತ್ತು. ಆದರೆ ಪ್ರಶಸ್ತಿ ಜಯಿಸಲಿಲ್ಲ.