Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಲಂನಲ್ಲಿ ಖ್ಯಾತ ಸಂಕಲನಕಾರನ ದುರಂತ ಬದುಕು
ನೂರಕ್ಕೂ ಅಧಿಕ ಚಿತ್ರಗಳಿಗೆ ಸಂಕಲನ ಮಾಡಿರುವ ಬಾಲಿವುಡ್ನ ಖ್ಯಾತ ಸಂಕಲನಕಾರ ಎಂ ಎಸ್ ಶಿಂಧೆ ಈಗ ಮುಂಬೈನ ಕೊಳಗೇರಿಯೊಂದರಲ್ಲಿ ಬದುಕು ದೂಡುತ್ತಿದ್ದಾರೆ. ಕಳೆದ ಆರು ತಿಂಗಳಿಂದಅವರ ವಿಳಾಸ ಜಗತ್ತಿನ ಅತಿದೊಡ್ಡ ಕೋಳಗೇರಿ ಧಾರಾವಿಗೆ(ಮುಂಬೈ) ಸ್ಥಳಾಂತರವಾಗಿದೆ. ನಿಜವಾದ ಬದುಕು ಜಟಕಾ ಬಂಡಿ ಇಲ್ಲಿದೆ ಓದಿ.
ಬಾಲಿವುಡ್ನ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಾದ ಶೋಲೆ, ಸೀತಾ ಔರ್ ಗೀತಾ, ಸಾಗರ್ ಚಿತ್ರಗಳಿಗೆ ಸಂಕಲನಕಾರರಾಗಿ ಶಿಂಧೆ ಕೆಲಸ ಮಾಡಿದ್ದರು. 81ವರ್ಷದ ಶಿಂಧೆ ಹೇಗಾದರೂ ಮಾಡಿ ಈ ನರಕದಿಂದ ನನ್ನನ್ನು ಪಾರು ಮಾಡಿ ಎಂದು ಅಂಗಲಾಚಿದ್ದಾರೆ. ಅವರ ನರಕಸದೃಶ ಜೀವನಗಾಥೆಯನ್ನು ಇಂಗ್ಲಿಷ್ ದೈನಿಕ 'ಟೈಮ್ಸ್ ಆಫ್ ಇಂಡಿಯಾ' ಬೆಳಕಿಗೆ ತಂದಿದೆ.
"ನಾವು ವಾಸಿಸುತ್ತಿದ್ದ (48 ವರ್ಷಗಳಿಂದ ಅವರು ಅಲ್ಲೇ ವಾಸಿಸುತ್ತಿದ್ದರು) ಕಟ್ಟಡ ಕುಸಿದು ಬಿದ್ದ ಕಾರಣ ನಮ್ಮನ್ನು ಬಲವಂತವಾಗಿ ಇಲ್ಲಿಗೆ ಸ್ಥಳಾಂತರಿಸಲಾಯಿತು. ಕುಸಿದು ಬಿದ್ದ ಕಟ್ಟಡದ ಮಾಲೀಕನೂ ನಮಗೆ ಯಾವುದೇ ನೆರವು ನೀಡಲಿಲ್ಲ. ಬಳಿಕ ಮುಂಬೈ ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿ ಈಗಿರುವ 160 ಚದರ ಅಡಿಯ ಕೊಠಡಿಯನ್ನು ನೀಡಲಾಗಿದೆ."
ಆರ್ಥಿಕ ಹಾಗೂ ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿರುವ ಶಿಂಧೆ ಅವರ ಬದುಕು ಮೂರಾ ಬಟ್ಟೆಯಾಗಿದೆ. ಅವರು ಕಣ್ಣಿನ ಪೊರೆ ತೆಗೆಸಲು ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಿದೆ. ಯಾರಾದರೂ ಸಹಾಯ ಮಾಡುತ್ತಾರಾ ಎಂದು ಎದುರು ನೋಡುತ್ತಿದ್ದಾರೆ. ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಇವರನ್ನು ಬಾಲಿವುಡ್ ಸಂಪೂರ್ಣವಾಗಿ ಮರೆತಿರುವುದು ದುರಂತ.
ಶಿಂಧೆ ಅವರ ಪುತ್ರಿ ಅಚಲಾ ಸಂಕಲನಕಾರರ ಸಂಘಕ್ಕೆ ಮೊರೆಹೋಗಿದ್ದರು. ಕಳೆದ ವರ್ಷ ಅವರು ರು.5000 ಚೆಕ್ ಕೊಟ್ಟು ಕೈತೊಳೆದುಕೊಂಡಿದ್ದರು. ಬಳಿಕ ಸರಕಾರವಾಗಲಿ, ಚಿತ್ರೋದ್ಯಮವಾಗಲಿ ಶಿಂಧೆ ಮನೆ ಕಡೆಗೆ ಅಪ್ಪಿ ತಪ್ಪಿಯೂ ಸುಳಿದಿಲ್ಲ. ಯಾರಾದರೂ ಬಂದು ಸಹಾಯ ಮಾಡುತ್ತಾರಾ ಎಂದು ಈ ಹಿರಿಯ ಜೀವ ಎದುರು ನೋಡುತ್ತಿದೆ.