Don't Miss!
- News ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ-ಕುಮಾರಸ್ವಾಮಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಕಿ ಮಗನ ಪೃಷ್ಠ ಚಿವುಟಿದ ಸೆಕ್ಯುರಿಟಿಗೆ ಗೇಟ್ ಪಾಸ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ತನ್ನ ಮಗ ಆರವ್ ಎಂದರೆ ಎಲ್ಲಿಲ್ಲದ ಅಕ್ಕರೆ. ತನ್ನ ಮಗನಿಗೆ ಒಂಚೂರು ಹೆಚ್ಚು ಕಡಿಮೆಯಾದರೂ ಅಕ್ಕಿ ಉಗ್ರ ಪ್ರತಾಪಿಯಾಗಿ ಬಿಡುತ್ತಾರೆ. ಅಂತಹದಲ್ಲಿ ಅಕ್ಕಿ ಮನೆಯ ಸೆಕ್ಯುರಿಟಿಗಾರ್ಡ್ ಯಾರೂ ಇಲ್ಲದ ಸಮಯ ನೋಡಿ ಆರವ್ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎನ್ನಲಾಗಿದೆ.
ಮಗನನ್ನು ಸೆಕ್ಯುರಿಟಿ ಜೊತೆ ಬಿಟ್ಟು ಅಕ್ಕಿ ಮತ್ತು ಆತನ ಪತ್ನಿ ಟ್ವಿಂಕಲ್ ಖನ್ನಾ ಮುಂಬೈನ ಜುಹು ಪ್ರದೇಶದಲ್ಲಿರುವ ಗೆಳೆಯನ ಮನೆಗೆ ಹೋಗಿದ್ದರು. ಅವರು ಹಿಂತಿರುಗಿದ ಬಳಿಕ ಮಗನ ಪೃಷ್ಠಕ್ಕೆ ಚಿವುಟಿ ಗಾಯಗೊಳಿಸಿರುವ ಸಂಗತಿ ಗಮನಕ್ಕೆ ಬಂದಿದೆ. ಕೆಂಡಾಮಂಡಲವಾದಅಕ್ಕಿ, ಸೆಕ್ಯುರಿಟಿಗಾರ್ಡ್ನನ್ನು ಕರೆದು ಆತನ ಕೆನ್ನೆಗೆ ನಾಲ್ಕು ಬಿಗಿದಿದ್ದಾರೆ. ಸೆಕ್ಯುರಿಟಿಗಾರ್ಡ್ದೇ ಈ ಕೆಲಸ ಎಂಬುದು ಅಕ್ಕಿಯ ಆರೋಪ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸೆಕ್ಯುರಿಟಿಗಾರ್ಡ್, ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದಿದ್ದಾನೆ. ಮೀಟರ್ ರೂಮಿಗೆ ಆರವ್ ನುಗ್ಗಲು ಹೊರಟಿದ್ದ. ಅವನನ್ನು ನಾನು ತಡೆದೆ ಅಷ್ಟೆ ಎಂದಿದ್ದಾನೆ. ಅಕ್ಕಿಯ ಆಪ್ತ ಕಾರ್ಯದರ್ಶಿ ಕೂಡಲೆ ಸೆಕ್ಯುರಿಟಿ ಗಾರ್ಡ್ನನ್ನು ಕರೆದು ಕೆಲಸದಿಂದ ವಜಾಗೊಳಿಸಿದ್ದಾನೆ.
ಸೆಕ್ಯುರಿಟಿಯನ್ನು ನೇಮಿಸಿದ್ದ ಏಜೆನ್ಸಿ ಕೂಡ ಇದರಲ್ಲಿ ಆತನದೇನು ತಪ್ಪಿಲ್ಲ. ಆತನ ಕರ್ತವ್ಯ ಆತ ನಿರ್ವಹಿಸಿದ್ದಾಬೆ ಎಂದು ವಾದಿಸಿದೆ.ಆದರೆ ಅಕ್ಕಿ ಮಾತ್ರ ಇವರ ಮಾತುಗಳನ್ನು ಕೇಳಲು ಸುತಾರಾಂ ಸಿದ್ಧನಿಲ್ಲ. ಕೆಲಸ ಕಳೆದುಕೊಂಡಿರುವ ಸೆಕ್ಯುರಿಟಿಗಾರ್ಡ್ ಸದ್ಯಕ್ಕೆ ಭೇಲ್ಪುರಿ ಮಾರುತ್ತಿದ್ದಾನೆ ಎನ್ನಲಾಗಿದೆ. [ಟ್ವಿಂಕಲ್ ಖನ್ನಾ]