Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ ತ್ರಿ ಇಡಿಯಟ್ಸ್ ಗೆ ಪುನೀತ್, ಸುದೀಪ್!
ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದ 'ತ್ರಿ ಇಡಿಯಟ್ಸ್' ಚಿತ್ರ ಕನ್ನಡಕ್ಕೆ ರೀಮೇಕ್ ಆಗಲಿದೆಯೇ? ಒಂದು ಮೂಲದ ಪ್ರಕಾರ 'ತ್ರಿ ಇಡಿಯಟ್ಸ್' ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ಪುನೀತ್ ಅಥವಾ ಸುದೀಪ್ ನಾಯಕ ನಟನಾಗಿ 'ತ್ರಿ ಇಡಿಯಟ್ಸ್' ಚಿತ್ರ ಕನ್ನಡದಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.
ಈಗಾಗಲೆ ಜೆಮಿನಿ ಫಿಲ್ಮ್ ಸರ್ಕ್ಯೂಟ್ ಈ ಚಿತ್ರದ ದಕ್ಷಿಣ ಭಾರತದ ರೀಮೇಕ್ ಹಕ್ಕುಗಳನ್ನುತನ್ನದಾಗಿಸಿಕೊಂಡಿದೆ. ಅಮೀರ್ ಸ್ಥಾನವನ್ನು ಕನ್ನಡದಲ್ಲಿ ಪುನೀತ್ ಅಥವಾ ಸುದೀಪ್ ತುಂಬವ ಸಾಧ್ಯತೆ ಇದೆ. ತೆಲುಗು ಮತ್ತು ತಮಿಳಿನಲ್ಲಿ ಅಮೀರ್ ಸ್ಥಾನವನ್ನು ಪವನ್ ಕಲ್ಯಾಣ್ ಮತ್ತು ಸೂರ್ಯ ತುಂಬಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಹಿಂದೆ 'ಮುನ್ನಾಭಾಯ್ ಎಂಬಿಬಿಎಸ್' ಚಿತ್ರದ ರೀಮೇಕ್ ಹಕ್ಕುಗಳನ್ನು ಜೆಮಿನಿ ಫಿಲ್ಮ್ ಸರ್ಕ್ಯೂಟ್ ಪಡೆದುಕೊಂಡಿತ್ತ್ತು. ಈ ಚಿತ್ರ ಕನ್ನಡದಲ್ಲಿ 'ಉಪ್ಪಿದಾದ ಎಂಬಿಬಿಎಸ್'(), ತಮಿಳಿನಲ್ಲಿ 'ವಸೂಲ್ ರಾಜಾ ಎಂಬಿಬಿಎಸ್' (ಕಮಲ ಹಾಸನ್ )ಹಾಗೂ ತೆಲುಗಿನಲ್ಲಿ 'ಶಂಕರ್ ದಾದಾ ಎಂಬಿಬಿಎಸ್'(ಚಿರಂಜೀವಿ) ಎಂದಾಗಿತ್ತು. ತೆಲುಗು, ತಮಿಳಿನಲ್ಲಿ ಚಿತ್ರ ಯಶಸ್ವಿಯಾಗಿತ್ತು. ಆದರೆ ಕನ್ನಡಲ್ಲಿ ಪರ್ವಾಗಿಲ್ಲ ಅನ್ನಿಸಿಕೊಂಡಿತ್ತು.
ಚೇತನ್ ಭಗತ್ ಅವರ ಜನಪ್ರಿಯ ಕಾದಂಬರಿ 'Five Point Someone' ಆಧಾರವಾಗಿ 'ತ್ರಿ ಇಡಿಯಟ್ಸ್' ಚಿತ್ರವನ್ನು ತೆರೆಗೆ ತರಲಾಗಿದೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಚಿತ್ರಕ್ಕೆ ವಿಧು ವಿನೋದ್ ಚೋಪ್ರಾ ನಿರ್ಮಾಪಕರು. ವಿಶ್ವದಾದ್ಯಂತ ಈ ಚಿತ್ರ 43 ದಶಲಕ್ಷ ಫೌಂಡ್ ಗಳನ್ನು ಗಳಿಸಿದೆ. ಬಾಲಿವುಡ್ ನಲ್ಲಿ ದಾಖಲೆ ಬರೆದ ತ್ರಿ ಇಡಿಯಟ್ಸ್ ಹೊಸ ಇತಿಹಾಸ ನಿರ್ಮಿಸಿದೆ.
ಚಿತ್ರಕ್ಕೆ ಕನ್ನಡದಲ್ಲಿ ಮೂರು ಮೂರ್ಖರು, ಮೂರು ಹೆಡ್ಡರು, ಮೂರು ಅವಿವೇವಿಕಗಳು ಎಂದು ಹೆಸರಿಡುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಯಾವುದೂ ಇನ್ನೂ ಅಂತಿಮವಾಗಿಲ್ಲ. ಕಾಲವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.ಸದ್ಯಕ್ಕೆ ಗಾಂಧಿನಗರದಲ್ಲಿ 'ತ್ರಿ ಇಡಿಯಟ್ಸ್' ಹೊಸ ಸಂಚಲನ ಮೂಡಿಸಿದೆ.