ಅಣ್ಣಾ ಬೆಂಬಲಿಗರಿಗೆ ಸಲ್ಮಾನ್ 'ಬಾಡಿಗಾರ್ಡ್' ಗೂಸಾ

ಕಾನ್ಪುರಕ್ಕೆ ಬಂದಿದ್ದ ಸಲ್ಮಾನ್ ರನ್ನು ಅಡ್ಡಗಟ್ಟಿದ ಅಣ್ಣಾ ಹಜಾರೆ ಬೆಂಬಲಿತ ಕಾರ್ಯಕರ್ತರು 'ಏನಪ್ಪ ಸಲ್ಲೂ, ಅಣ್ಣಾ ಉಪವಾಸ ಕೂತಿದ್ದಾರೆ. ನೀನು ಬೆಂಬಲ ಕೊಡೊದಿಲ್ವ' ಎಂದು ಕೂಗಿ ಕೇಳಿದ್ದಾರೆ.
ನಂತರ ಸಲ್ಮಾನ್ ಇದ್ದ ಕಾರಿನ ಬಳಿಗೆ ಕಾರ್ಯಕರ್ತರು ಬರುತ್ತಿದ್ದಂತೆ ಅವರ ಮೇಲೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಗಳು ಹಲ್ಲೆ ನಡೆಸಿದ್ದಾರೆ.
ಸಲ್ಮಾನ್ ಹತ್ತಿರಕ್ಕೂ ಹೋಗಲು ಬೇಡದಂತೆ ತಡೆದ ಬಾಡಿಗಾರ್ಡ್ ಗಳು ಕಾರ್ಯಕರ್ತರನ್ನು ಹಿಗ್ಗಾಮುಗ್ಗಾ ಥಳಿಸಿ ಅಲ್ಲಿಂದ ಅಟ್ಟಿದ್ದಾರೆ.
ನಾವೇನು ಸಲ್ಮಾನ್ ಗೆ ಘೇರಾವ್ ಮಾಡಲು ಹೋಗಿರಲಿಲ್ಲ. ಅಣ್ಣಾ ಟೋಪಿ(ಗಾಂಧೀ ಟೋಪಿ) ನೀಡಲು ಹೋಗಿದ್ದೆವು. ಅಷ್ಟರಲ್ಲಿ ಅವರ ಅಂಗರಕ್ಷಕರು ನಮ್ಮನ್ನು ಹೊಡೆದರು ಎಂದು ಜನ ರಾಜ್ಯ ಪಕ್ಷದ ಕಾರ್ಯಕರ್ತ ದೀಪಕ್ ಭರತ್ ಆರೋಪಿಸಿದ್ದಾರೆ.
ಸಲ್ಮಾನ್ ಹಾಗೂ ಅವರ ಬಾಡಿಗಾರ್ಡ್ ಗಳ ಅನಾಗರೀಕ ವರ್ತನೆಗೆ ಬೇಸತ್ತು ಪೊಲೀಸರಿಗೆ ದೂರು ನೀಡಲಾಗಿದೆ. ಆ.31ರಂದು ಬಿಡುಗಡೆಯಾಗಲಿರುವ 'ಬಾಡಿಗಾರ್ಡ್' ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದ ಸಲ್ಮಾನ್ ಗೆ ಅವರ ಬಾಡಿಗಾರ್ಡ್ ಗಳ ಬಡಿದಾಟ ಎಷ್ಟರಮಟ್ಟಿಗೆ ಲಾಭ ತರುವುದೋ ಗೊತ್ತಿಲ್ಲ.


Click it and Unblock the Notifications











