Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾ ಬೆಂಬಲಿಗರಿಗೆ ಸಲ್ಮಾನ್ 'ಬಾಡಿಗಾರ್ಡ್' ಗೂಸಾ
ಕಾನ್ಪುರಕ್ಕೆ ಬಂದಿದ್ದ ಸಲ್ಮಾನ್ ರನ್ನು ಅಡ್ಡಗಟ್ಟಿದ ಅಣ್ಣಾ ಹಜಾರೆ ಬೆಂಬಲಿತ ಕಾರ್ಯಕರ್ತರು 'ಏನಪ್ಪ ಸಲ್ಲೂ, ಅಣ್ಣಾ ಉಪವಾಸ ಕೂತಿದ್ದಾರೆ. ನೀನು ಬೆಂಬಲ ಕೊಡೊದಿಲ್ವ' ಎಂದು ಕೂಗಿ ಕೇಳಿದ್ದಾರೆ.
ನಂತರ ಸಲ್ಮಾನ್ ಇದ್ದ ಕಾರಿನ ಬಳಿಗೆ ಕಾರ್ಯಕರ್ತರು ಬರುತ್ತಿದ್ದಂತೆ ಅವರ ಮೇಲೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಗಳು ಹಲ್ಲೆ ನಡೆಸಿದ್ದಾರೆ.
ಸಲ್ಮಾನ್ ಹತ್ತಿರಕ್ಕೂ ಹೋಗಲು ಬೇಡದಂತೆ ತಡೆದ ಬಾಡಿಗಾರ್ಡ್ ಗಳು ಕಾರ್ಯಕರ್ತರನ್ನು ಹಿಗ್ಗಾಮುಗ್ಗಾ ಥಳಿಸಿ ಅಲ್ಲಿಂದ ಅಟ್ಟಿದ್ದಾರೆ.
ನಾವೇನು ಸಲ್ಮಾನ್ ಗೆ ಘೇರಾವ್ ಮಾಡಲು ಹೋಗಿರಲಿಲ್ಲ. ಅಣ್ಣಾ ಟೋಪಿ(ಗಾಂಧೀ ಟೋಪಿ) ನೀಡಲು ಹೋಗಿದ್ದೆವು. ಅಷ್ಟರಲ್ಲಿ ಅವರ ಅಂಗರಕ್ಷಕರು ನಮ್ಮನ್ನು ಹೊಡೆದರು ಎಂದು ಜನ ರಾಜ್ಯ ಪಕ್ಷದ ಕಾರ್ಯಕರ್ತ ದೀಪಕ್ ಭರತ್ ಆರೋಪಿಸಿದ್ದಾರೆ.
ಸಲ್ಮಾನ್ ಹಾಗೂ ಅವರ ಬಾಡಿಗಾರ್ಡ್ ಗಳ ಅನಾಗರೀಕ ವರ್ತನೆಗೆ ಬೇಸತ್ತು ಪೊಲೀಸರಿಗೆ ದೂರು ನೀಡಲಾಗಿದೆ. ಆ.31ರಂದು ಬಿಡುಗಡೆಯಾಗಲಿರುವ 'ಬಾಡಿಗಾರ್ಡ್' ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದ ಸಲ್ಮಾನ್ ಗೆ ಅವರ ಬಾಡಿಗಾರ್ಡ್ ಗಳ ಬಡಿದಾಟ ಎಷ್ಟರಮಟ್ಟಿಗೆ ಲಾಭ ತರುವುದೋ ಗೊತ್ತಿಲ್ಲ.