Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿ ಜಿಂಟಾ, ವಾಡಿಯಾ ಈಗ ಭಗ್ನ ಪ್ರೇಮಿಗಳು
'ಗುಳಿಕೆನ್ನೆ ಚೆಲುವೆ' ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ನಡುವಿನ ಸಂಬಂಧಗಳು ಕಡಿದು ಹೋಗುವ ಲಕ್ಷಣಗಳು ಗೋಚರವಾಗಿದೆ. ದಕ್ಷಿಣಆಫ್ರಿಕಾದಲ್ಲಿ ನಡೆದ ಐಪಿಎಲ್ ಟೂರ್ನಿ ನಂತರ ಈಕೆ ಒಂಟಿಯಾಗಿದ್ದಾರೆನ್ನುವ ಸುದ್ದಿ ಜೋರಾಗಿದೆ. ಅತ್ತ ಐಪಿಎಲ್ ನಲ್ಲಿ ಈಕೆ ಒಡೆತನದ ಪಂಜಾಬ್ ಕಿಂಗ್ಸ್ ಎಲೆವೆನ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದರೆ ಇತ್ತ ಈಕೆಯ ಪ್ರಿಯಕರ ನೆಸ್ ವಾಡಿಯಾ ಕೂಡಾ ಈಕೆಯಿಂದ ದೂರ ಸರಿಯುತ್ತಿದ್ದಾರಂತೆ.
ಇದಕ್ಕೆ ಕಾರಣ ನೆಸ್ ವಾಡಿಯಾ ಪ್ರೀತಿ ಜಿಂಟಾರನ್ನು ಚಿತ್ರರಂಗದಿಂದ ದೂರ ಉಳಿದರೆ ಮಾತ್ರ ನಿನ್ನೊಂದಿಗೆ ಎಲ್ಲಾ ಸಂಬಂಧಗಳು ಮುಂದುವರಿಯುತ್ತದೆ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದಾನೆಂದು ಸುದ್ದಿ. ಇದರಿಂದ ಪ್ರೀತಿ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿ ಬಿಟ್ಟಿದ್ದಾಳಂತೆ.
ವಿಷಯ ಹೀಗಿದ್ದರೂ ಪ್ರೀತಿ ಜಿಂಟಾ ಮಾತ್ರ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ಯಶ್ ರಾಜ್ ರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣಾ ಆಫ್ರಿಕಾದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುತ್ತಿದ್ದರೆ ಇಬ್ಬರೂ ಮುನಿಸಿಕೊಂಡು ದೂರ ದೂರಕ್ಕೆ ಸರಿದಿದ್ದರು. ಈಗ ಇವರಿಬ್ಬರ ಹೃದಯಗಳು ಭಾರವಾಗಿದ್ದು ನೀನೊಂದು ತೀರ ನಾನೊಂದು ತೀರ... ಎಂದು ಹಾಡುವಂತಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)