Don't Miss!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆಯ ಈ 6 ಕಾರ್ಯಕ್ರಮಗಳು ಕೊನೆಗೊಳ್ಳಲಿದೆ.!
ಇತ್ತೀಚಿಗೆ ಸಿನಿಮಾಗಳಿಗಿಂತ ಟಿವಿ ಕಾರ್ಯಕ್ರಮಗಳಿಗೆ ಬೇಡಿಕೆ ಹೆಚ್ಚಿದೆ. ಧಾರಾವಾಹಿಗಳು, ರಿಯಾಲಿಟಿ ಶೋಗಳು, ಸಿಂಗಿಂಗ್, ಗೇಮ್ ಶೋ, ಹೀಗೆ ಕಿರುತೆರೆಗೆ ಪ್ರೇಕ್ಷಕರು ಹೊಂದಿಕೊಂಡಿದ್ದಾರೆ.
ಆ ಪ್ರೇಕ್ಷಕರನ್ನ ಹಿಡಿದಿಡಲು ವಾರದಿಂದ ವಾರಕ್ಕೆ ನೂತನ ಕಾರ್ಯಕ್ರಮಗಳು, ನೂತನ ಧಾರಾವಾಹಿಗಳು ಆರಂಭವಾಗುತ್ತಿದ್ದು, ಟಿವಿ ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ. ಇನ್ನು ಟಿವಿ ನಿರ್ಮಾಣ ಸಂಸ್ಥೆಗಳಿಗೂ ಇದರಿಂದ ಹೆಚ್ಚಿನ ಆದಾಯ ಸಿಗುತ್ತಿರುವುದು ಇದಕ್ಕೆ ಕಾರಣ.
ಹೀಗಿರುವಾಗ, ಹಿಂದಿಯ ಕೆಲವು ಖ್ಯಾತ ಕಾರ್ಯಕ್ರಮಗಳು ಅಂತ್ಯಗೊಳ್ಳಲಿದೆ. ಸಾಕಷ್ಟು ವರ್ಷಗಳಿಂದ ಟಿವಿ ವೀಕ್ಷಕರನ್ನ ರಂಜಿಸಿದ ಶೋಗಳು ಅಂತ್ಯವಾಗುವ ಸೂಚನೆ ನೀಡಿದೆ. ಹಾಗಿದ್ರೆ ಯಾವೆಲ್ಲ ಟಿವಿ ಕಾರ್ಯಕ್ರಮಗಳು ಅಂತ್ಯವಾಗುತ್ತಿದೆ ಎಂಬುದನ್ನ ನೋಡಲು ಮುಂದೆ ಓದಿ.....
ನಾಮಕರಣ್
ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಮಕರಣ್' ಧಾರಾವಾಹಿ ಇದೇ ತಿಂಗಳಿನಲ್ಲಿ ಅಂತ್ಯವಾಗಲಿದೆ. ಮೇ 18 ರಂದು ಕೊನೆಯ ಶೋ ಮೂಡಿ ಬರಲಿದೆ ಎಂದು ಧಾರಾವಾಹಿ ತಂಡ ತಿಳಿಸಿದೆ. ಈ ಧಾರಾವಾಹಿಗೆ ಕಡಿಮೆ ಟಿ.ಆರ್.ಪಿ ಬರುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ದಿಲ್ ಸೇ ದಿಲ್ ತಕ್
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ದಿಲ್ ಸೇ ದಿಲ್ ತಕ್' ಧಾರಾವಾಹಿಯೂ ಇದೇ ತಿಂಗಳಲ್ಲಿ ಕೊನೆಗೊಳ್ಳಲಿದೆಯಂತೆ. ಆರಂಭದ ದಿನದಿಂದ ಈ ಧಾರಾವಹಿ ಹೆಚ್ಚು ಸದ್ದು ಮಾಡುತ್ತಿತ್ತು. ಆದ್ರೆ, ಇತ್ತೀಚಿನ ದಿನಗಳಲ್ಲಿ ಟಿ.ಆರ್.ಪಿ ಕೊರತೆ ಎದುರಿಸುತ್ತಿರುವ ಈ ಧಾರಾವಾಹಿ ಮೇ 28 ರಿಂದ ಅಂತ್ಯವಾಗಲಿದೆ.
'ಬದೋ ಬಾಹು'
ಪ್ರಿನ್ಸ್ ನರುಲಾ ಮತ್ತು ರೈತಾಶ್ ರಾಥೋರ್ ಅಭಿನಯಿಸಿರುವ 'ಬದೋ ಬಾಹು' ಧಾರಾವಾಹಿ ಮುಂದಿನ ತಿಂಗಳು ಕೊನೆ ಕಾಣಲಿದೆ. & ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಕಲಾವಿದರ ಸಮಸ್ಯೆಯಿಂದ ಇದನ್ನ ಅಂತ್ಯಗೊಳಿಸಿ ಬೇರೆ ಧಾರಾವಾಹಿ ಆರಂಭಿಸಲು ತಂಡ ನಿರ್ಧರಿಸಿದೆಯಂತೆ. ಆದ್ರೆ, ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಲಡೋ 2
'ಲಡೋ 2' ಧಾರಾವಾಹಿ ಈ ತಿಂಗಳ ಅಂತ್ಯಕ್ಕೆ ಕೊನೆಯಾಗಲಿದೆಯಂತೆ. ಈ ಧಾರಾವಾಹಿಗೂ ಟಿ.ಆರ್.ಪಿ ಸಮ್ಯಸ್ಯೆಯಾಗಿರುವುದರಿಂದ ಧಾರಾವಾಹಿ ನಿಲ್ಲಿಸಲು ನಿರ್ಧಾರ ಮಾಡಲಾಗಿದೆಯಂತೆ.
ಚಂದ್ರಕಾಂತ
ಏಕ್ತಾ ಕಪೂರ್ ಅವರ ಫ್ಯಾಂಟಸಿ ಶೋ 'ಚಂದ್ರಕಾಂತ-ಏಕ್ ಮಾಯಾವಿ ಪ್ರೇಮ್ ಗಾಥ' ಸೀರಿಯಲ್ ಜೂನ್ ತಿಂಗಳಲ್ಲಿ ಅಂತ್ಯವಾಗಲಿದೆಯಂತೆ. ವೀಕ್ಷಕರ ಕೊರತೆಯಿಂದ ಚಂದ್ರಕಾಂತಗೆ ಬ್ರೇಕ್ ಹಾಕಲಿದ್ದಾರೆ ಧಾರಾವಾಹಿ ತಂಡ.
ಏಕ್ ದಿವಾನ
ಸೋನಿ ಟಿವಿಯಲ್ಲಿ ಪ್ರಸಾರವಾಗುವ 'ಏಕ್ ದಿವಾನ' ಆರಂಭದಲ್ಲಿ ಅತಿ ನಿರೀಕ್ಷೆ ಹುಟ್ಟಿಸಿತ್ತು. ಆದ್ರೆ, ನಿರೀಕ್ಷೆಯನ್ನ ಹುಸಿಗೊಳಿಸಿದ ಕಾರಣ ಈ ಧಾರಾವಾಹಿಗೆ ಬ್ರೇಕ್ ಹಾಕಲಾಗುತ್ತಿದೆ. ಬಹುಶಃ ಈ ಧಾರಾವಾಹಿಯೂ ಇದೇ ತಿಂಗಳಲ್ಲಿ ಅಂತ್ಯ ಕಾಣಬಹುದು.