Don't Miss!
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪ್ರಿಯಾಂಕಾ ಚೋಪ್ರಾರಿಂದ ನನಗೆ ಯಾವುದೇ ಸಹಾಯ ಆಗಿಲ್ಲ': ಸಹೋದರಿ ಮೀರಾ
'ವೃತ್ತಿಜೀವನದಲ್ಲಿ ನನ್ನ ಸಹೋದರಿ ಪ್ರಿಯಾಂಕಾ ಚೋಪ್ರಾ ನನಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಿಲ್ಲ, ಅವಳಿಂದ ನನಗೆ ಯಾವುದೇ ಅವಕಾಶಗಳು ಸಿಕ್ಕಿಲ್ಲ' ಎಂದು ನಟಿ ಮೀರಾ ಚೋಪ್ರಾ ಹೇಳಿಕೊಂಡಿದ್ದಾರೆ.
2005ರ ತಮಿಳಿನ 'ಅನ್ಬೆ ಆರುಯಿರ್' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಮೀರಾ ಚೋಪ್ರಾ ಬಳಿಕ ಸತೀಶ್ ಕೌಶಿಕ್ ಅವರ 2014 ರ 'ಗ್ಯಾಂಗ್ ಆಫ್ ಘೋಸ್ಟ್ಸ್' ಮೂಲಕ ಬಾಲಿವುಡ್ಗೆ ಕಾಲಿಟ್ಟರು. ಅಲ್ಲಿಂದ ದಕ್ಷಿಣ ಮತ್ತು ಹಿಂದಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ನನ್ನ ದೇಶ ಸಂಕಷ್ಟದಲ್ಲಿದೆ ಸಹಾಯ ಮಾಡಿ: ಅಮೆರಿಕ ಅಧ್ಯಕ್ಷರಿಗೆ ಪ್ರಿಯಾಂಕಾ ಮನವಿ
ಜೂಮ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಮೀರಾ ಚೋಪ್ರಾ ''ಪ್ರಿಯಾಂಕಾ ಸಹೋದರಿ ಎನ್ನುವ ಕಾರಣಕ್ಕೆ ನನಗೆ ಯಾವುದೇ ಅವಕಾಶ ಸಿಕ್ಕಿಲ್ಲ. ಹಾಗೂ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಕ್ಕಾಗಿ ಆಕೆಯನ್ನು ಜನ ಗಂಭೀರವಾಗಿ ಪರಿಗಣಿಸಿದರು'' ಎಂದು ಹೇಳಿಕೊಂಡಿದ್ದಾರೆ.
'ನಾನು ಬಾಲಿವುಡ್ನಲ್ಲಿ ನಟಿಸಲು ಬಂದಾಗ ಮಾತ್ರ ಪ್ರಿಯಾಂಕಾ ಚೋಪ್ರಾಳ ಸಹೋದರಿ ಕೂಡ ಬರುತ್ತಿದ್ದಾಳೆ ಎನ್ನುವ ಸುದ್ದಿ ಕೇಳ್ಪಟ್ಟೆ. ಆದರೆ ಪ್ರಿಯಾಂಕಾ ತಂಗಿ ಎನ್ನುವ ಕಾರಣಕ್ಕೆ ನಿರ್ಮಾಪಕರು ನನ್ನನ್ನು ಯಾರೂ ಆಯ್ಕೆ ಮಾಡಿಕೊಂಡಿಲ್ಲ' ಎಂದು ನಟಿ ತಿಳಿಸಿದ್ದಾರೆ.
'ಸಿನಿಮಾ ತಿಳಿದಿರುವ ಕುಟುಂಬದಿಂದ ಬರುತ್ತಿದ್ದೇನೆ ತಿಳಿದಿದ್ದರಿಂದ ಯಾರೂ ನನ್ನನ್ನು ಲಘುವಾಗಿ ಪರಿಗಣಿಸಲಿಲ್ಲ. ಅದು ನನಗೆ ದೊರೆತ ಏಕೈಕ ಸವಲತ್ತು. ಇಲ್ಲದಿದ್ದರೆ, ನಾನು ಕಷ್ಟಪಡಬೇಕಾಗಿತ್ತು' ಎಂದು ಮೀರಾ ಚೋಪ್ರಾ ಜೂಮ್ ಟಿವಿ ಜೊತೆ ಮಾತನಾಡಿದ್ದಾರೆ.
Recommended Video
ಬಂಗಾರಂ, ಜಾಂಬವಂ, ಮರುಧಾಮಲೈ, ಕಲೈ, ವನಾ, ಜಗನ್ಮೋಹಿನಿ ಮತ್ತು ಕಿಲಾಡಿ ಅಂತಹ ಚಿತ್ರಗಳಲ್ಲಿ ಮೀರಾ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ 'ಸೆಕ್ಷನ್-375' ವೆಬ್-ಸರಣಿ ನಟಿಸಿದರು. ಇದರಲ್ಲಿ ರಿಚಾ ಚಡ್ಡಾ, ಅಕ್ಷಯ್ ಖನ್ನಾ ಮತ್ತು ರಾಹುಲ್ ಭಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.