Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧನುಷ್ ಮಾಡಬೇಕಿದ್ದ ಖ್ಯಾತ ಕ್ರೀಡಾಪಟುವಿನ ಪಾತ್ರದಲ್ಲಿ ಅಮೀರ್ ಖಾನ್
ಬಾಲಿವುಡ್ನಲ್ಲಿ ಈಗ 'ಬಯೋಪಿಕ್'ಗಳ ಕಾಲ. ಸಾಲು-ಸಾಲು ಬಯೋಪಿಕ್ಗಳು ತಯಾರಾಗಿ ಹಿಟ್ ಸಹ ಆಗಿವೆ. ಕೆಲವು ಮುಗ್ಗರಿಸಿವೆ ಕೂಡ. ಇನ್ನೂ ಕೆಲವು ಬಯೋಪಿಕ್ ಸಿನಿಮಾಗಳು ಚಿತ್ರೀಕರಣಗೊಳ್ಳುತ್ತಿವೆ.
ಅದರಲ್ಲಿಯೂ ಕ್ರೀಡಾ ತಾರೆಗಳ ಜೀವನವನ್ನು ತೆರೆಗೆ ತರಲು ಬಾಲಿವುಡ್ ನಿರ್ದೇಶಕ, ನಿರ್ಮಾಪಕರುಗಳು ನಾ-ಮುಂದು, ತಾ ಮುಂದು ಎಂದು ನೂಕುನುಗ್ಗಲಾಡುತ್ತಿದ್ದಾರೆ. ಹಲವಾರು ಮಂದಿ ಕ್ರೀಡಾಪಟುಗಳ ಜೀವನವನ್ನು ಸಿನಿಮಾ ಮಾಡಲಾಗಿದೆ. ಯುವ ಕ್ರೀಡಾಪಟುಗಳ ಜೀವನವೂ ಸಿನಿಮಾ ಆಗುತ್ತಿದೆ.
ಅಮೀರ್ ಖಾನ್ ಸಿನಿಮಾದಿಂದ ಹೊರಬಂದಿದ್ದಕ್ಕೆ ನಿಜ ಕಾರಣ ಕೊಟ್ಟ ವಿಜಯ್ ಸೇತುಪತಿ
ಹಲವು ಸ್ಟಾರ್ ನಟರು ಬಯೋಪಿಕ್ಗಳಲ್ಲಿ ನಟಿಸಲು ಉತ್ಸುಕರಾಗಿ ಕಾಯುತ್ತಿದ್ದಾರೆ. ಇದೀಗ ನಟ ಅಮೀರ್ ಖಾನ್ ಅವರು ಕ್ರೀಡಾಪಟು ಒಬ್ಬರ ಜೀವನದ ಬಗ್ಗೆ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ನಟಿಸಲು ತಯಾರಾಗಿದ್ದಾರೆ.
ವಿಶ್ವನಾಥನ್ ಆನಂದ್ ಪಾತ್ರದಲ್ಲಿ ಅಮೀರ್ ಖಾನ್
ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್, ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಜೀವನ ಕುರಿತ ಸಿನಿಮಾ ತಯಾರಾಗುತ್ತಿದ್ದು. ಆ ಸಿನಿಮಾದಲ್ಲಿ ಖ್ಯಾತ ನಟ ಅಮೀರ್ ಖಾನ್ ನಟಿಸಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಮೊದಲು ದೊರೆತಿದ್ದು ಅಮೀರ್ ಖಾನ್ ಗೆ ಅಲ್ಲ.
ಧನುಷ್ ಅನ್ನು ಆಯ್ಕೆ ಮಾಡಲಾಗಿತ್ತು
ಆನಂದ್ ಎಲ್ ರಾಯ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ನಟ ಧನುಶ್ ಅವರನ್ನು ವಿಶ್ವನಾಥನ್ ಆನಂದ್ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ನಿರ್ಮಾಪಕ ಮಹಾವೀರ್ ಜೈನ್ ಅವರಿಗೆ ಆಯ್ಕೆ ಸರಿಬರದ ಕಾರಣ ಈಗ ಅಮೀರ್ ಖಾನ್ ಅವರನ್ನು ಕೇಳಲಾಗಿದ್ದು, ಅಮೀರ್ ಖಾನ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಶ್ವನಾಥನ್ ಆನಂದ್ ಪಾತ್ರಕ್ಕೆ ಧನುಷ್ಗಿಂತಲೂ ಅಮೀರ್ ಖಾನ್ ಹೆಚ್ಚು ಸೂಕ್ತವೂ ಹೌದು.
ಆನಂದ್ ಎಲ್ ರಾಯ್ಗೆ ಓಕೆ ಎಂದಿರುವ ವಿಶ್ವನಾಥನ್
ವಿಶ್ವನಾಥನ್ ಆನಂದ್ ಅವರ ಜೀವನವನ್ನು ಸಿನಿಮಾ ಮಾಡಲು ಹಲವರು ಅನುಮತಿಗಾಗಿ ಕೇಳಿದ್ದರು. ಆದರೆ ಬೇಡವೆಂದೇ ಹೇಳಿಕೊಂಡು ಬರುತ್ತಿದ್ದ ವಿಶ್ವನಾಥನ್ ಆನಂದ್ ಈಗ ಆನಂದ್ ಎಲ್ ರಾಯ್ಗೆ ಓಕೆ ಎಂದಿದ್ದಾರೆ. ಲಾಲ್ ಸಿಂಗ್ ಛಡ್ಡಾ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಅಮೀರ್ ಖಾನ್, ಆ ಸಿನಿಮಾದ ಬಳಿಕ ಬಯೋಪಿಕ್ನಲ್ಲಿ ನಟಿಸುವ ಸಾಧ್ಯತೆ ಇದೆ.
Recommended Video
ಹಲವು ಬಯೋಪಿಕ್ ಸಿನಿಮಾಗಳು ಬರುತ್ತಿವೆ
ಮಿಲ್ಕಾ ಸಿಂಗ್, ಮೇರಿ ಕೋಂ, ಅಜರುದ್ದೀನ್ ಕುರಿತ ಸಿನಿಮಾ, ಎಂ.ಎಸ್.ಧೋನಿ, ಹಾಕಿ ಆಟಗಾರ ಸಂದೀಪ್ ಸಿಂಗ್ ಕುರಿತ 'ಸೂರ್ಮಾ', 'ಪಾನ್ ಸಿಂಗ್ ತೋಮರ್', ಪೋಗಟ್ ಸಹೋದರಿಯರ ಬಗ್ಗೆ 'ದಂಗಲ್' ಇನ್ನೂ ಅನೇಕ ಬಯೋಪಿಕ್ ಸಿನಿಮಾಗಳು ಬಂದಿವೆ. ಇದೀಗ ಕಪಿಲ್ ದೇವ್ ಬಗ್ಗೆ '83' ಸಿನಿಮಾ, ಹಾಗೂ ಫುಟ್ಬಾಲ್ ಕೋಚ್ ವಿಜಯ್ ಬಾರ್ಸೆ ಬಗ್ಗೆ 'ಜುಂಡ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸೈನಾ ನೆಹ್ವಾಲ್, ಪಿವಿ ಸಿಂಧು ಬಗ್ಗೆ ಸಿನಿಮಾಗಳು ಸಹ ತೆರೆಗೆ ಬರುತ್ತಿವೆ.