Don't Miss!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಲವು ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿದ್ದಕ್ಕೆ ಕಾರಣ ತಿಳಿಸಿದ ಅಭಿಷೇಕ್ ಬಚ್ಚನ್
ಅಮಿತಾಬ್ ಬಚ್ಚನ್ ನೆರಳಿದ್ದರೂ ಅಭಿಷೇಕ್ ಬಚ್ಚನ್ ಬಾಲಿವುಡ್ನಲ್ಲಿ ದೊಡ್ಡ ನಟನಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಕೆಲವು ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದರೂ ಯಶಸ್ಸು ಅವರ ಕೈ ಹಿಡಿದಿರಲಿಲ್ಲ. ಅದರಲ್ಲಿಯೂ ಮಗಳು ಜನಿಸಿದ ಬಳಿಕ ಅಭಿಷೇಕ್ ನಟಿಸಿದ ಸಿನಿಮಾಗಳು ಬಹಳ ಕಡಿಮೆ. ಅದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ.
ಮಗಳು ಆರಾಧ್ಯಾ ಹುಟ್ಟಿ ಎಂಟು ವರ್ಷಗಳಲ್ಲಿ ತಂದೆಯಾಗಿ ಏನಾದರೂ ಬದಲಾವಣೆಗಳಾಗಿದೆಯೇ ಎಂಬ ಪ್ರಶ್ನೆಗೆ ಅಭಿಷೇಕ್, ಅದು ಒಂದು ಅಂಶವನ್ನು ಬದಲಿಸಿದೆ ಎಂದು ನನಗೆ ಗೊತ್ತು. ಕೆಲವು ಬಗೆಯ ಸಿನಿಮಾಗಳು ಮತ್ತು ದೃಶ್ಯಗಳನ್ನು ಮುಂದೆ ಎಂದೂ ಮಾಡುವುದು ನನ್ನಿಂದಾಗದು. ನನ್ನ ಮಗಳಿಗೆ ಕಸಿವಿಸಿಯಾಗುವಂತಹ ಅಥವಾ ಅಯ್ಯೋ ಅಲ್ಲೇನು ಆಗುತ್ತಿದೆ? ಎಂದು ದೃಶ್ಯದ ಬಗ್ಗೆ ಪ್ರಶ್ನಿಸುವಂತಾಗುವುದನ್ನು ನಾನು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಮುಂದೆ ಓದಿ...
ಮೊದಲಿನಿಂದಲೂ ರೊಮ್ಯಾನ್ಸ್ ಕಷ್ಟ
ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನನಗೆ ಮೊದಲಿನಿಂದಲೂ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ಮುಜುಗರ. ಹೀಗಾಗಿ ನನಗೆ ಯಾವುದೇ ಹಸಿಬಿಸಿ ಸನ್ನಿವೇಶಗಳನ್ನು ಮಾಡುವುದು ಕಷ್ಟವಾಗುತ್ತಿತ್ತು. ಈಗ ಅದನ್ನು ಮಾಡುವುದೇ ಇಲ್ಲ ಎಂದಿದ್ದಾರೆ.
ಅಭಿಷೇಕ್ ಸಿನಿ ಪಯಣಕ್ಕೆ 20 ವರ್ಷ: ಅವಕಾಶಕ್ಕಾಗಿ ಅಲೆದಾಡಿದ ದಿನಗಳನ್ನು ನೆನಪಿಸಿಕೊಂಡ ಬಿಗ್ ಬಿ ಪುತ್ರ
ಇಂಟಿಮೇಟ್ ದೃಶ್ಯ ಬೇಡ
ಇದರಿಂದಾಗಿ ಸಿನಿಮಾಗಳಿಗೆ ಸಹಿ ಹಾಕುವ ಮುನ್ನ ನನ್ನ ನಿರ್ದೇಶಕರಿಗೆ, ಈ ಚಿತ್ರದಲ್ಲಿ ದೈಹಿಕ ಸಲಿಗೆಯ ದೃಶ್ಯಗಳು ಇವೆಯೇ? ಹಾಗೇನಾದರೂ ಇದ್ದರೆ ನಾನು ಮಾಡಲು ಬಯಸುವುದಿಲ್ಲ. ಹೀಗಾಗಿ ನಿಮಗೆ ಆಯ್ಕೆಯ ಅವಕಾಶವಿದೆ ಎಂದು ಹೇಳುತ್ತೇನೆ. ಕೆಲವು ಸಮಯದಲ್ಲಿ ಅಂತಹ ದೃಶ್ಯಗಳನ್ನು ಕೈಬಿಡುತ್ತಾರೆ.
ದೊಡ್ಡ ಪರದೆಯಿಂದ ಸಣ್ಣ ಪರದೆಗೆ ಬಂದ ಅಭಿಷೇಕ್ ಬಚ್ಚನ್!
ಬೇಕೇ ಬೇಕು ಎಂದರೆ ಹೊರಹೋಗುತ್ತೇನೆ
ನನ್ನ ಕಥೆ ಹೇಳುವ ಭಾಗದಲ್ಲಿ ಆ ದೃಶ್ಯ ಬಹಳ ಮುಖ್ಯ. ಅದಿಲ್ಲದೆ ಸಿನಿಮಾ ಕಥೆ ಮುಂದುವರಿಸಲು ಸಾಧ್ಯವಿಲ್ಲ ಎಂದರೆ, ನೋಡಿ ನಿಮಗೆ ಆಯ್ಕೆಯಿದೆ. ನಾನು ಸಿನಿಮಾದಿಂದ ಹೊರಗುಳಿಯಲು ಸಂತೋಷದಿಂದ ಸಿದ್ಧನಿದ್ದೇನೆ ಎನ್ನುತ್ತೇನೆ ಎಂದು ಹೇಳಿದ್ದಾರೆ.
ಸಿನಿಮಾ ಕೈತಪ್ಪಿವೆ, ಆದರೆ ಬೇಸರವಿಲ್ಲ
ಈ ಷರತ್ತಿನ ಕಾರಣಕ್ಕೇ ನೀವು ಸಿನಿಮಾ ಕಳೆದುಕೊಂಡಿದ್ದು ಇದೆಯೇ ಎಂಬ ಪ್ರಶ್ನೆಗೆ ಅಭಿಷೇಕ್ ಉತ್ತರ ಹೌದು. ಅದರಿಂದ ಬೇಸರವೇನೂ ಆಗಿಲ್ಲ. ಏಕೆಂದರೆ ನನಗೆ ಸೃಜನಶೀಲ ದೃಷ್ಟಿಕೋನವಿದೆ. ನಿರ್ಮಾಪಕರು-ನಿರ್ದೇಶಕರರೂ ಅವರದ್ದೇ ದೃಷ್ಟಿಕೋನ ಹೊಂದಿರುತ್ತಾರೆ. ಅವರು ಅದರಲ್ಲಿ ರಾಜಿಯಾಗಲು ಬಯಸದೆ ಇದ್ದರೆ ನಾನು ಸಂಪೂರ್ಣವಾಗಿ ಅದನ್ನು ಗೌರವಿಸುತ್ತೇನೆ. ಅದೇನೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ.