Don't Miss!
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆರೆಮೇಲೆ ಬರಲಿದೆ 76 ಮಕ್ಕಳನ್ನು ರಕ್ಷಿಸಿದ ದಕ್ಷ ಮಹಿಳಾ ಪೊಲೀಸ್ ಕಥೆ
ದೆಹಲಿಯ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ಸೀಮಾ ಢಾಕ ಅವರ ಜೀವನ ಕಥೆ ತೆರೆಮೇಲೆ ಬರಲಿದೆ. ಸೀಮಾ ಅವರ ಯಶಸ್ಸಿನ ಕಥೆಯನ್ನು ವೆಬ್ ಸಿರೀಸ್ ಮೂಲಕ ಜನರ ಮುಂದೆ ತರಲು ಬಾಲಿವುಡ್ ನಿರ್ಮಾಣ ಸಂಸ್ಥೆಯ ಮುಂದಾಗಿದೆ.
ದೆಹಲಿ ಮೂಲದ ಮಹಿಳಾ ಪೊಲೀಸ್ ಸೀಮಾ ಕೇವಲ 3 ತಿಂಗಳಲ್ಲಿ ಕಾಣೆಯಾಗಿದ್ದ 76 ಮಂದಿ ಮಕ್ಕಳನ್ನು ಪತ್ತೆ ಹಚ್ಚುವ ಮೂಲಕ ಸಾಹಸ ಮಾಡಿದ್ದರು. ಈ ಸಾಹಸ ಗುರುತಿಸಿದ ದೆಹಲಿ ಪೊಲೀಸ್ ಇಲಾಖೆಗೆ ಸೀಮಾ ಅವರಿಗೆ ಬಡ್ತಿ ನೀಡಿ ಗೌರವಿಸಿತ್ತು.
'ಇಂಡಿಯಾ ಲಾಕ್ಡೌನ್' ಚಿತ್ರೀಕರಣ ಮುಗಿಸಿದ ಮಧುರ್ ಭಂಡಾರ್ಕರ್
ಸೀಮಾ ಅವರ ಈ ಪತ್ತೆದಾರಿ ಹಿಂದಿನ ರೋಚಕ ಕಥೆಯನ್ನು ಈಗ ಸಿನಿಮಾ ಮಾಡಲು ಹೊರಟಿದೆ ಎಬಿಇ ನಿರ್ಮಾಣ ಸಂಸ್ಥೆ. ಈಗಾಗಲೇ ಚಿತ್ರದ ಹಕ್ಕು ಖರೀದಿಸಿದೆ. ವೆಬ್ ಸಿರೀಸ್ ಮೂಲಕ ಒಟಿಟಿಯಲ್ಲಿ ಈ ಚಿತ್ರ ತೆರೆಗೆ ಬರಲಿದೆ
ತಮ್ಮ ಯಶೋಗಾಥೆ ಸಿನಿಮಾ ರೂಪ ಪಡೆಯುತ್ತಿರುವುದರ ಬಗ್ಗೆ ಮಾತನಾಡಿದ ಸೀಮಾ ಖುಷಿ ಹಂಚಿಕೊಂಡಿದ್ದಾರೆ.
''ಸಾಮಾನ್ಯವಾಗಿ ಮಹಳೆಯರು ಇಂತಹ ಕೇಸ್ಗಳಲ್ಲಿ ಗುರಿ ಮುಟ್ಟುವುದು ಅಸಾಧ್ಯ ಎಂಬ ಮಾತಿದೆ. ಆದರೆ, ನಾನು ಅದಕ್ಕೆ ವಿರುದ್ಧವಾದ ಉದಾಹರಣೆ. ನಾನು ಟೀಕೆಗಳಿಗೆ ತಲೆಕೊಡಲಿಲ್ಲ. ನನ್ನ ಕೆಲಸ ಮತ್ತು ಗುರಿ ಮುಟ್ಟುವುದು ಮಾತ್ರ ಉದ್ದೇಶವಾಗಿತ್ತು. ಆ ನಿಟ್ಟಿಯಲ್ಲಿ ರಾತ್ರಿ-ಹಗಲು ಕೆಲಸ ಮಾಡ್ತಿದ್ದೆ. ಕೇಸ್ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕ್ತಿದ್ದೆ, ಅಪಹರಣಕಾರರ ಚಲನವಲನ ಹುಡುಕುವುದು ಮಾಡ್ತಿದೆ. ಯಾವುದರ ಬಗ್ಗೆಯೂ ನನಗೆ ಭಯ ಇರಲಿಲ್ಲ. ಅಂತಿಮವಾಗಿ ಮಕ್ಕಳನ್ನು ಪತ್ತೆ ಹಚ್ಚಬೇಕು, ಅವರ ಕುಟುಂಬದ ಜೊತೆ ಸೇರಿಸಬೇಕು ಎನ್ನುವುದಷ್ಟೇ ನನ್ನ ಗುರಿಯಾಗಿತ್ತು'' ಎಂದು ಸೀಮಾ ಹೇಳಿಕೊಂಡಿದ್ದಾರೆ.
Recommended Video
ಸೀಮಾ ಅವರ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವುದರ ಬಗ್ಗೆ ಸದ್ಯಕ್ಕೆ ಉತ್ತರ ಇಲ್ಲ. ಆದರೆ, ತಾಪ್ಸಿ ಪನ್ನು, ರಾಣಿ ಮುಖರ್ಜಿ ಅಥವಾ ವಿದ್ಯಾ ಬಾಲನ್ ಈ ಪಾತ್ರಕ್ಕೆ ಸೂಕ್ತ ಎನ್ನಲಾಗುತ್ತಿದೆ. ಈ ಮೂವರಲ್ಲಿ ಯಾರು ಆಸಕ್ತಿ ತೋರಬಹುದು ಎಂಬ ಕುತೂಹಲ ಪ್ರೇಕ್ಷಕರನ್ನು ಕಾಡ್ತಿದೆ.