Don't Miss!
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ನಟ ಶಾರುಖ್ ಖಾನ್ ಆಫೀಸ್ ಈಗ ಐಸಿಯು ವಾರ್ಡ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಕೊರೊನಾ ರೋಗಿಗಳ ಚಿಕಿತ್ಸೆಗೆ ತನ್ನ ಆಫೀಸ್ ಅನ್ನೆ ಬಿಟ್ಟುಕೊಟ್ಟಿದ್ದಾರೆ. ಕಳೆದ ಏಪ್ರಿಲ್ ನಲ್ಲಿಯೇ ಬಾಂಬೆ ಮುನ್ಸಿಪಲ್ ಕಾರ್ಪೋರೇಷನ್ ಗೆ ಕೊರೊನಾ ರೋಗಿಗಳ ಚಿಕಿತ್ಸೆಗೆ ಆಫೀಸ್ ನೀಡಿದ್ದರು. ಇದೀಗ ಅದೇ ಆಫೀಸ್ ಅನ್ನು ಐಸಿಯು ಆಗಿ ಪರಿವರ್ತನೆ ಮಾಡಲಾಗಿದೆ.
ಈ ಮೊದಲು ಆಫೀಸ್ ನಲ್ಲಿ ರೋಗ ಲಕ್ಷಣವಿಲ್ಲದ ಸೋಂಕಿತರನ್ನು ಇರಿಸಲು ಮುಂಬೈನ ಖಾನ್ ನಲ್ಲಿರುವ ತನ್ನ ಆಫೀಸ್ ಅನ್ನು ನೀಡಿದ್ದರು. ಆ ನಂತರ ಜುಲೈನಲ್ಲಿ ಈ ಆ ಜಾಗವನ್ನು ಐಸಿಯು ಆಗಿ ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದರು. ಕೊರೊನಾ ರೋಗಿಗಳು ಹೆಚ್ಚಾಗುವ ಕಾರಣ ಉತ್ತಮ ಚಿಕಿತ್ಸೆ ನೀಡುವ ಸಲುವಾಗಿ ಆಫೀಸ್ ಅನ್ನು ಐಸಿಯು ಆಗಿ ಬದಲಾಯಿಸುವ ಕೆಲಸ ಪ್ರಾರಂಭವಾಗಿತ್ತು.
ಫೋಟೋ ವೈರಲ್: ತನ್ನ 'ಮನ್ನತ್' ಬಂಗಲೆಯನ್ನು ಪ್ಲಾಸ್ಟಿಕ್ ನಿಂದ ಮುಚ್ಚಿದ ಶಾರುಖ್ ಖಾನ್
ಇದೀಗ ಐಸಿಯು ಸೌಲಭ್ಯ ಕಾರ್ಯನಿರ್ವಹಿಸುತ್ತಿದೆ. ಮೊದಲು 66 ರೋಗಿಗಳನ್ನು ಅಲ್ಲಿ ದಾಖಲಿಸಲಾಗಿತ್ತು. ಅದರಲ್ಲಿ 54 ಜನರು ಚೇತರಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದ 12 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರುಖ್ ಖಾನ್ ಆಫೀಸ್ ಬಿಟ್ಟುಕೊಟ್ಟಿರುವುದಲ್ಲದೆ ಐಸಿಯು ನಿರ್ಮಾಣದ ಖರ್ಚನ್ನು ಶಾರುಖ್ ಅವರ ಮೀರ್ ಫೌಂಡೇಶನ್ ನಿಂದ ನೀಡಿದ್ದಾರೆ.
ಇನ್ನೂ ಶಾರುಖ್ ಖಾನ್ ಮೀರ್ ಫೌಂಡೇಶನ್, ಖಾರ್ ನಲ್ಲಿರುವ ಹಿಂದೂಜಾ ಆಸ್ಪತ್ರೆ, ಬಿಎಂಸಿ ಸಹಯೋಗದೊಂದಿಗೆ 15 ಹಾಸಿಗೆಗಳ ಸೌಲಭ್ಯವನ್ನು ನೀಡಿದೆ. ಈ ಬಗ್ಗೆ ಮಾತನಾಡಿದ ಹಿಂದೂಜಾ ಆಸ್ಪತ್ರೆಯ ಡಾ. ಅವಿನಾಶ್ ಸುಪೆ, "ಇದು ಹೆಚ್ಚಿನ ಆಪಾಯಕಾರಿ ಮತ್ತು ತೀರ ಸಮಸ್ಯೆ ಇರುವ ರೋಗಿಗಳಿಗೆ ವೆಂಟಿಲೇಟರ್, ಆಮ್ಲಜನಕ ಯಂತ್ರಗಳು, ದ್ರವ ಆಮ್ಲಜನಕ ಸಂಗ್ರಹ ಟ್ಯಾಂಕ್ ಗಳನ್ನು ಹೊಂದಿದೆ. ಈ ಸೇವೆ ಹಿಂದೂಜಾ ಆಸ್ಪತ್ರೆಯ ಮಾರ್ಗದರ್ಶನದಲ್ಲಿ ನಡೆಯಲಿದೆ" ಎಂದಿದ್ದಾರೆ.