twitter
    For Quick Alerts
    ALLOW NOTIFICATIONS  
    For Daily Alerts

    'ಬೆಂಗಳೂರಿಗರೇ ಆತಂಕ ಬೇಡ, ನಿಮಗಾಗಿ ಸೋನು ಸೂದ್ ಇದ್ದೇನೆ'

    |

    ಬಾಲಿವುಡ್ ನಟ ಸೋನು ಸೋದ್ ಮಾನವೀಯತೆಯ ಕಾರ್ಯ ಮುಂದುವರಿದಿದೆ. ಸಿನಿಮಾ ನಟನ ಜೊತೆ ಹಲವು ಎನ್‌ಜಿಓ ಸಂಸ್ಥೆಗಳು ಕೈ ಜೋಡಿಸಿ ಸಾರ್ವಜನಿಕರ ಸಹಾಯಕ್ಕೆ ನಿಂತಿವೆ.

    ಕೊರೊನಾ ವೈರಸ್ ಎರಡನೇ ಅಲೆಗೆ ಸಿಲುಕಿರುವ ಬೆಂಗಳೂರಿಗೆ ಸೋನು ಸೂದ್ ಅಭಯಹಸ್ತ ಚಾಚಿದ್ದಾರೆ. ಕೊರೊನಾ ಹಾಟ್‌ಸ್ಪಾಟ್ ಎನಿಸಿಕೊಂಡಿರುವ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹಾಗೂ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಭಾರಿ ಏರಿಕೆ ಕಂಡಿದೆ.

    'ಮುಂದಿನ ಪ್ರಧಾನಿ' ಎಂದವರಿಗೆ ಸೋನು ಸೂದ್ ಕೊಟ್ಟ ಉತ್ತರ ಹೀಗಿದೆ'ಮುಂದಿನ ಪ್ರಧಾನಿ' ಎಂದವರಿಗೆ ಸೋನು ಸೂದ್ ಕೊಟ್ಟ ಉತ್ತರ ಹೀಗಿದೆ

    ಪ್ರಮುಖವಾಗಿ ಆಕ್ಸಿಜನ್ ಕೊರತೆ ಉಂಟಾಗಿ ಬೆಂಗಳೂರಿನಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ಸೋನು ಸೂದ್ ಆಕ್ಸಿಜನ್ ನೆರವು ಘೋಷಿಸಿದ್ದಾರೆ. ಅಗತ್ಯವಿರುವವರು ಮಾತ್ರ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.

    Actor Sonu Sood Help To Bengaluru People

    ಈ ಕುರಿತು ಟ್ವೀಟ್ ಮಾಡಿರುವ ಸೋನು ಸೂದ್ ''ಬೆಂಗಳೂರಿಗರೇ ನೀವು ಉಸಿರಾಡಲು ನಾನು ಸಹಾಯ ಮಾಡುತ್ತೇನೆ, ತುರ್ತು ಸಮಸ್ಯೆಯಿದ್ದರೆ ಮಾತ್ರ ಸಂಪರ್ಕಿಸಿ'' ಎಂದು ವಾಟ್ಸಾಪ್ ನಂಬರ್ ಹಂಚಿಕೊಂಡಿದ್ದಾರೆ.

    ಈಗಾಗಲೇ ಬೆಂಗಳೂರಿನ ಹಲವು ಕಡೆ ಸೋನು ಸೋದ್ ಫೌಂಡೇಶನ್ ಕಡೆಯಿಂದ ಆಕ್ಸಿಜನ್ ವ್ಯವಸ್ಥೆ, ಐಸಿಯು ಬೆಡ್ ವ್ಯವಸ್ಥೆ ಸೇರಿದಂತೆ ಹಲವರು ರೀತಿ ಸಹಾಯ ಮಾಡಲಾಗಿದೆ.

    English summary
    Bollywood actor Sonu sood decide to help bengalru people who want to Oxygen.
    Friday, May 14, 2021, 15:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X